ಬಿಜೆಪಿಗೆ ಪಕ್ಷಾಂತರಗೊಂಡ ಕಾಂಗ್ರೆಸ್ ಬೆಂಬಲಿತ ಸದಸ್ಯೆ
ವೀರಕಂಬ ಗ್ರಾ.ಪಂ. : ಬಿಜೆಪಿಗೆ ಅಧಿಕಾರ
Team Udayavani, Feb 7, 2021, 1:27 PM IST
ವಿಟ್ಲ : ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಜಯಗಳಿಸಿದ ವೀರಕಂಭ ಗ್ರಾ.ಪಂ.ಸದಸ್ಯೆ ಲಲಿತಾ ಅವರು ಬಿಜೆಪಿಗೆ ಪಕ್ಷಾಂತರ ಮಾಡಿ, ವೀರಕಂಬ ಗ್ರಾಮದಲ್ಲಿ ಬಿಜೆಪಿ ಆಡಳಿತಕ್ಕೇರುವಂತೆ ಮಾಡಿದ್ದಾರೆ.
ರವಿವಾರ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಸಮ್ಮುಖದಲ್ಲಿ ಇವರು ಬಿಜೆಪಿಗೆ ಸೇರ್ಪಡೆಗೊಂಡಿದ್ದು, ಆ ಮೂಲಕ 2 ಪಕ್ಷಗಳ ಸಮಬಲದಲ್ಲಿದ್ದ ವೀರಕಂಭ ಪಂಚಾಯತ್ ನಲ್ಲಿ ಬಿಜೆಪಿ ಅಧಿಕಾರಕ್ಕೇರುವಂತಾಗಿದೆ.
ಇದನ್ನೂ ಓದಿ:ಸಾರ್ವಜನಿಕ ಆರೋಗ್ಯ ಕ್ಷೇತ್ರ ವಿಶ್ವಮಟ್ಟದಲ್ಲಿ ಸುಧಾರಿಸಬೇಕು: ರಾಷ್ಟ್ರಪತಿ ರಾಮನಾಥ್ ಕೋವಿಂದ್
ಈ ಸಂದರ್ಭದಲ್ಲಿ ಬಿಜೆಪಿ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ, ಪ್ರ.ಕಾರ್ಯದರ್ಶಿ ಡೊಂಬಯ ಅರಳ, ಕಾರ್ಯದರ್ಶಿಗಳಾದ ರಮಾನಾಥ ರಾಯಿ, ಸೀತಾರಾಮ ಪೂಜಾರಿ, ಚಿದಾನಂದ ರೈ, ಪುರುಷೋತ್ತಮ ಶೆಟ್ಟಿ, ಯುವ ಮೋರ್ಚಾದ ಸುದರ್ಶನ್ ಬಜ, ಮಾಧ್ಯಮ ಪ್ರಮುಖರಾದ ಸಂದೇಶ್ ಶೆಟ್ಟಿ. ಹಿರಿಯರಾದ ವಿಷ್ಣು ಭಟ್, ಪ್ರಮುಖರಾದ ದೇವಿಪ್ರಸಾದ್ ಶೆಟ್ಟಿ. ಪ್ರಭಾರಿ ಸುಧಾಕರ ರೈ, ಪಂಚಾಯತ್ ಸದಸ್ಯರಾದ ಜಯಪ್ರಸಾದ್, ದಿನೇಶ್ ಸಂದೀಪ್, ಉಮಾವತಿ, ಜಯಂತಿ, ಲಕ್ಷ್ಮೀ, ಮೀನಾಕ್ಷಿ ಮತ್ತು ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.