ಪುತ್ತೂರು: ಕರ್ತವ್ಯದಲ್ಲಿದ್ದ ಬಸ್ ನಿರ್ವಾಹಕಿ ಮೇಲೆ ಹಲ್ಲೆ: ಪ್ರಯಾಣಿಕನ ಬಂಧನ
Team Udayavani, Feb 22, 2023, 6:30 AM IST
ಪುತ್ತೂರು: ಮಂಗಳೂರು- ಪುತ್ತೂರು ಕೆಎಸ್ಆರ್ಟಿಸಿ ಬಸ್ನಲ್ಲಿ ಕರ್ತವ್ಯ ನಿರತರಾಗಿದ್ದ ನಿರ್ವಾಹಕಿ ವಿಜಯಾ ಅವರಿಗೆ ಹಲ್ಲೆಗೈದ ಪ್ರಯಾಣಿಕ ಹಸನ್ನನ್ನು ಪುತ್ತೂರು ಮಹಿಳಾ ಪೊಲೀಸರು ಬಂಧಿಸಿದ್ದಾರೆ.
ಫೆ. 20ರಂದು ಸಂಜೆ ಪುತ್ತೂರು ನಿಲ್ದಾಣದಿಂದ ಬಸ್ ಹೊರಟು ನಗರದ ಮಾರುಕಟ್ಟೆ ಬಳಿಯ ತಂಗುದಾಣ ತಲುಪಿದಾಗ ಅಂಗವಿಕಲ ಪ್ರಯಾಣಿಕ ರೋರ್ವರಿಗೆ ಸೀಟು ಬಿಟ್ಟುಕೊಡುವಂತೆ ನಿರ್ವಾಹಕಿ ಕೇಳಿದ್ದು, ಆಕ್ಷೇಪಿಸಿದ ಆರೋಪಿಯು ಹಲ್ಲೆ ನಡೆಸಿ ಬಸ್ನಿಂದ ಓಡಿ ಪರಾರಿಯಾಗಿದ್ದ.
ನಿರ್ವಾಹಕಿ ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಇದೀಗ ಕಾರ್ಯಾಚರಣೆ ನಡೆಸಿದ ಪುತ್ತೂರು ಮಹಿಳಾ ಠಾಣಾ ಪೊಲೀಸರು ಆರೋಪಿ ಹಸನ್ನನ್ನು ಬಂಧಿಸಿದ್ದಾರೆ.