Road Mishap; ಉಪ್ಪಿನಂಗಡಿ: ಬೈಕ್ಗಳ ಢಿಕ್ಕಿ; ಓರ್ವ ಸಾವು
Team Udayavani, Apr 1, 2024, 12:24 AM IST
ಉಪ್ಪಿನಂಗಡಿ: ಬೈಕ್ಗಳೆರಡು ಮುಖಾಮುಖೀ ಢಿಕ್ಕಿ ಹೊಡೆದ ಪರಿಣಾಮ ಮೂವರು ಬೈಕ್ ಸವಾರರು ಗಂಭೀರ ಗಾಯಗೊಂಡ ಘಟನೆ ಶನಿವಾರ ರಾತ್ರಿ ಗೋಳಿತ್ತೂಟ್ಟುವಿನಲ್ಲಿ ನಡೆದಿದೆ.
ಸಣ್ಣಂಪಾಡಿ ಸೇತುವೆ ಸಮೀಪ ಉಪ್ಪಿನಂಗಡಿಯ ಕಂಬಳ ವೀಕ್ಷಣೆಗೆಂದು ಬೈಕ್ನಲ್ಲಿ ಸಂಚರಿಸುತ್ತಿದ್ದ ಗೋಳಿತೊಟ್ಟು ನಿವಾಸಿ ವಿನೋಯ್ (35) ಅವರ ಬೈಕ್ ಕೊಕ್ಕಡ ಪರಿಸರದ ನಿವಾಸಿಗರಾದ ಗಗನ್ ಕೊಕ್ಕಡ, ರಜನೀಶ್ ಕೊಕ್ಕಡ ಅವರು ಸಂಚರಿಸುತ್ತಿದ್ದ ಬೈಕ್ಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಮೂವರು ಗಂಭೀರ ಗಾಯಗೊಂಡಿದ್ದರು. ಗಾಯಾಳುಗಳ ಪೈಕಿ ವಿನೋಯ್ ಸ್ಥಿತಿ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಿಸದೆ ರವಿವಾರ ಮಧ್ಯಾಹ್ನದ ಸಮಯ ಮೃತಪಟ್ಟರು.
ಮೃತ ವಿನೋಯ್ ಗೋಳಿತೊಟ್ಟು ನಿವಾಸಿ ಜೇಕಬ್ ಅವರ ಮಗನಾಗಿದ್ದು, ವಿವಾಹಿತರಾಗಿ ಒಂದು ಮಗುವಿನ ತಂದೆಯಾಗಿದ್ದಾರೆ. ಉಳಿದಿಬ್ಬರು ಗಾಯಾಳುಗಳು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪುತ್ತೂರು ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದೆ.