ಹಿಜಾಬ್ ವಿವಾದ ಬೇಸರ ತಂದಿದೆ: ಶಶಿಕಲಾ ಜೊಲ್ಲೆ
Team Udayavani, Feb 8, 2022, 2:15 PM IST
ಸುಬ್ರಹ್ಮಣ್ಯ: ಹಿಜಾಬ್ ಬಗ್ಗೆ ಎದ್ದಿರುವ ವಿವಾದವು ಬೇಸರ ತಂದಿದೆ. ಭಾರತ ಎಂದಾಗ ಅನೇಕತೆಯಲ್ಲಿ ಏಕತೆಯನ್ನು ತಂದಂತಹ ಜಗತ್ತಿನಲ್ಲೇ ಒಂದು ದೇಶ ನಮ್ಮದು. ಎಲ್ಲರೂ ಒಂದೇ ಎಂಬಂತೆ ಜೀವಿಸುತ್ತಿದ್ದೇವೆ. ಶಾಲಾ ಕಾಲೇಜಿನಲ್ಲಿ ಸಮವಸ್ತ್ರ ಎಂಬುದು ಪ್ರಮುಖವಾದದ್ದು. ಅವರರಲ್ಲಿ ಬೇರಾವುದೇ ಭಾವನೆಗಳು ಬರಬಾರದು. ನಾವೆಲ್ಲ ಒಂದೇ ಎಂಬ ಭಾವನೆ ಬರಬೇಕಿದೆ ಎಂದು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಅವರು ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ಮಂಗಳವಾರ ಮಾದ್ಯಮದವರೊಂದಿಗೆ ಮಾತನಾಡಿದರು. ಮಕ್ಕಳಲ್ಲಿ ಇಂತಹ ಭಾವನೆ ಬರಬಾರದು. ಅವರು ಬಿಳಿ ಹಾಳೆ ಇದ್ದಂತೆ ಅವರಿಗೆ ನಾವುಗಳು ಏನು ಹೇಳುತ್ತೇವೆಯೋ ಅದರಂತೆ ಅವರು ನಡೆಯುವುದರಿಂದ ನಾಳೆ ಭಾರತ, ಕರ್ನಾಟಕದ ಭವಿಷ್ಯ ಏನು ಎಂಬ ಬಗ್ಗೆ ಎಲ್ಲರೂ ಚಿಂತಿಸಬೇಕಿದೆ. ಮಕ್ಕಳಲ್ಲಿ ವಿಷ ಬೀಜ ಬಿತ್ತುತ್ತಿದ್ದಾರೆಂದರೆ ಅದು ನಡೆಯಲೇಬಾರದು. ಅದು ತಪ್ಪು. ಪ್ರಕರಣ ಹೈ ಕೊರ್ಟ್ ನಲ್ಲಿ ಇರುವುದರಿಂದ ಹೆಚ್ಚಿಗೆ ಮಾತನಾಡುವುದಿಲ್ಲ. ಕೋರ್ಟ್ ತೀರ್ಪು ಅಂತಿಮವಾಗಲಿದೆ, ಅದಕ್ಕೆ ಬದ್ಧರಾಗಿರಬೇಕಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan Pen Drive Case: ಕಾಂಗ್ರೆಸ್ ಪ್ರತಿಭಟನಕಾರರ ವಿರುದ್ಧ ಜೆಡಿಎಸ್ ದೂರು
SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು
PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್ ವಿರುದ್ಧ ಬಿಜೆಪಿ ದೂರು
Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್ ವಿರುದ್ಧ ಕಾಂಗ್ರೆಸ್ ವಾಗ್ಧಾಳಿ
Election ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್ಡ್ರೈವ್; ಸಂಕಷ್ಟದಲ್ಲಿ ಜೆಡಿಎಸ್