ಘನ ವಾಹನಗಳು ಜಖಂ; ಟ್ರಾಫಿಕ್ ಜಾಮ್
Team Udayavani, Jul 30, 2023, 11:45 PM IST
ಬಂಟ್ವಾಳ: ಬಿ.ಸಿ.ರೋಡು -ಅಡ್ಡಹೊಳೆ ಚತುಷ್ಪಥ ಹೆದ್ದಾರಿ ಕಾಮಗಾರಿ ಅವಾಂತರದ ಪರಿಣಾಮ ರವಿವಾರ ಕಲ್ಲಡ್ಕ ಸಮೀಪ ಎರಡು ಘನ ವಾಹನಗಳು ಹೆದ್ದಾರಿಯಲ್ಲಿ ಜಖಂಗೊಂಡು ಸುಮಾರು ಎರಡು ತಾಸುಗಳ ಕಾಲ ಟ್ರಾಫಿಕ್ ಜಾಮ್ ಉಂಟಾಯಿತು.
ಕಲ್ಲಡ್ಕದಲ್ಲಿ ಫ್ಲೈ ಓವರ್ ಕಾಮಗಾರಿ ನಡೆಯುತ್ತಿರುವ ಕಾರಣ ಕಿರಿದಾದ ಸರ್ವೀಸ್ ರಸ್ತೆಯಲ್ಲಿ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ರವಿವಾರ ಮಧ್ಯಾಹ್ನದ ವೇಳೆ ಇಂಧನ ಸಾಗಾಟದ ಟ್ಯಾಂಕರೊಂದಕ್ಕೆ ಆಟೋ ರಿಕ್ಷಾ ಅಡ್ಡ ಬಂದು ಟ್ಯಾಂಕರ್ ಹೆದ್ದಾರಿ ಬದಿಗೆ ಸರಿದು ಹೂತು ಹೋಗಿದೆ.
ಇದೇ ಸಂದರ್ಭ ಬೃಹತ್ ಗಾತ್ರದ ಕಂಟೈನರ್ ಲಾರಿಯೊಂದು ಟ್ಯಾಂಕರ್ ಬದಿ ಇದ್ದ ಅಲ್ಪ ಜಾಗದಲ್ಲಿ ಸಂಚರಿಸಲು ಯತ್ನಿಸಿ ಅರ್ಧದಲ್ಲಿ ಸಿಲುಕಿ ಜಖಂಗೊಂಡಿದ್ದರಿಂದ ಇತರ ವಾಹನಗಳು ಸಾಗಲು ಸಾಧ್ಯವಾಗದೆ ಟ್ರಾಫಿಕ್ ಜಾಮ್ ಉಂಟಾಯಿತು. ಒಂದು ಬದಿಯ ಹೆದ್ದಾರಿಯನ್ನು ಮುಚ್ಚಿದ ಪರಿಣಾಮ ಎರಡು ಬದಿಯ ವಾಹನಗಳು ಕೂಡ ಒಂದೇ ಬದಿಯಲ್ಲೇ ಕಿರಿದಾದ ರಸ್ತೆಯಲ್ಲಿ ಸಂಚ ರಿಸಿದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ
Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್ಗೆ 48 ಗಂಟೆ ಪ್ರಚಾರ ನಿಷೇಧ
Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ
Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್ ಹೇಳಿಕೆ
ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…