Sullia ಜಾಲ್ಸೂರು ಹಾಡಹಗಲೇ ಮನೆಯಿಂದ ಕಳವು
Team Udayavani, Sep 13, 2023, 12:48 AM IST
ಸುಳ್ಯ: ಜಾಲ್ಸೂರು ಕದಿಕಡ್ಕದ ವಸಂತ ರೈ ಅವರ ಮನೆಯ ಹಿಂಬಾಗಿಲು ಮುರಿದು ನಗದು ಕಳವುಗೈದ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.
ವಸಂತ ಅವರ ಪತ್ನಿ ಹಾಗೂ ಮಕ್ಕಳು ಕೆಲಸಕ್ಕೆಂದು ಬೆಳಗ್ಗೆ ಬಾಗಿಲು ಹಾಕಿ ತೆರಳಿದ್ದರು. ಮಧ್ಯಾಹ್ನ 12.30ರ ವೇಳೆಗೆ ಊಟಕ್ಕೆ ಬಂದಾಗ ಹಿಂಬದಿಯಿಂದ ಬಾಗಿಲು ಮುರಿದಿದ್ದು, 2 ಕಪಾಟುಗಳ ಬೀಗ ಮುರಿದು ಚಿನ್ನಾಭರಣ ಕಳವು ಗೈದಿರುವುದು ಪತ್ತೆಯಾಯಿತು. ಪರಿಶೀಲನೆ ವೇಳೆ ಚಿನ್ನಾಭರಣ ಬಟ್ಟೆಗಳ ಜತೆಗೆ ಪತ್ತೆಯಾಗಿದೆ.
ಇನ್ನೊಂದು ಕಪಾಟಿನಿಂದ 8 ಸಾವಿರ ರೂ. ನಗದು ಕಳವು ಮಾಡಿ ಪರಾರಿಯಾಗಿದ್ದಾರೆ. ಜಾಲ್ಸೂರು ಭಾಗದಲ್ಲಿ ಕಳೆದ ಎರಡು-ಮೂರು ತಿಂಗಳಲ್ಲಿ 10ಕ್ಕೂ ಅಧಿಕ ಕಳವು ಕೃತ್ಯಗಳು ನಡೆದಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ