ಸಕ್ರಿಯವಾಗಿದೆ ಆನ್‌ಲೈನ್‌ ವಂಚಕರ ಜಾಲ

ಆಸೆಗಳಿಗೆ ಮರುಳಾಗುವ ಮುನ್ನ ಎಚ್ಚರವಿರಲಿ!

Team Udayavani, Oct 9, 2020, 1:47 AM IST

ಸಕ್ರಿಯವಾಗಿದೆ ಆನ್‌ಲೈನ್‌ ವಂಚಕರ ಜಾಲ

ಸಾಂದರ್ಭಿಕ ಚಿತ್ರ

ಉಡುಪಿ: 25 ಲಕ್ಷ ರೂ., 50 ಲಕ್ಷ ರೂ. ಗೆದ್ದಿದ್ದೀರಿ ನಿಮಗೆ ಶುಭಾಶಯಗಳು! ಹಣ ಪಡೆಯಲು ಈ ಸಂಖ್ಯೆಗೆ ಕರೆ ಮಾಡಿ ಅಥವಾ ಈ ಲಿಂಕ್‌ ಅನ್ನು ಒತ್ತಿ ಎಂದು ಸಂದೇಶ ನೋಡಿ ಹಳ್ಳಕ್ಕೆ ಬೀಳುವವರ ಸಂಖ್ಯೆ ಹೆಚ್ಚಿದೆ. ತಂತ್ರಜ್ಞಾನ ಬೆಳೆದಷ್ಟು ಸೈಬರ್‌ ವಂಚನೆ ಪ್ರಕರಣಗಳು ಹೆಚ್ಚಿದ್ದು, ಕೋವಿಡ್‌ ಸಂಕಷ್ಟ ಕಾಲದಲ್ಲಿ ಉದ್ಯೋಗವಿಲ್ಲದ ಮಂದಿ ಇಂತಹ ಜಾಲದಲ್ಲಿ ಸಕ್ರಿಯವಾಗಿದ್ದಾರೆ. ಪೊಲೀಸರಿಗೂ ಇವರ ಜಾಲ ಭೇದಿಸುವುದು ತಲೆನೋವಾಗಿದೆ.

12 ಲ.ರೂ.ಆಸೆಗೆ 26 ಲ.ರೂ.ಕಳೆದುಕೊಂಡರು!
ಉಡುಪಿಯ ಕೆ. ನಾಗರಾಜ್‌ ಭಟ್‌ ಎಂಬವರಿಗೆ ನ್ಯಾಪ್‌ಟಾಲ್‌ ಕಂಪೆನಿಯ ಹೆಸರಿನಲ್ಲಿ ಒಂದು ಸ್ಕ್ರ್ಯಾಚ್‌ ಕೂಪನ್‌ ಪೋಸ್ಟ್‌ ಬಂದಿತ್ತು. 12 ಲ.ರೂ.ವಿಜೇತರಾಗಿದ್ದೀರಿ ಎಂದು ನಮೂದಿಸ ಲಾಗಿತ್ತು. ಅದರಲ್ಲಿದ್ದ ಮೊಬೈಲ್‌ ಸಂಖ್ಯೆಗೆ ಕರೆ ಮಾಡಿದಾಗ ರಿಜಿಸ್ಟ್ರೇಶನ್‌ ಹಣ ಪಾವತಿಸುವಂತೆ ಬ್ಯಾಂಕ್‌ ಖಾತೆ ವಿವರ ನೀಡಿದ್ದರು. ಅದರಂತೆ 2019ರ ಎ.4ರಂದು 12 ಸಾವಿರ ರೂ. ಪಾವತಿಸಿದ್ದರು. ಅನಂತರ ಆರೋಪಿಗಳಾದ ಅಮಿತ್‌ ಬಿಸ್ವಾಸ್‌, ಚೇತನ್‌ ಕುಮಾರ್‌ ಅವರು ಬೇರೆ ಸಂಖ್ಯೆಗಳಿಂದ ಕರೆ ಮಾಡಿ ತಾವು ನ್ಯಾಪ್ಟಲ್‌ ಕಂಪೆನಿಯಿಂದ ಮಾತನಾಡುವುದು ಎಂದು ನಂಬಿಸಿದ್ದರು. ಬಳಿಕ 2019ರ ಎ.4ರಿಂದ ಜು.28ರ ನಡುವೆ ಜಿ.ಎಸ್‌.ಟಿ. ತೆರಿಗೆ, ವೆರಿಫಿಕೇಶನ್‌ ಚಾರ್ಜ್‌, ಸಬ್‌ಚಾರ್ಜ್‌ ಎಂದು ಒಟ್ಟು 26,47,650 ರೂ.ಯನ್ನು ಅವರು ವಿವಿಧ ಖಾತೆಗಳಿಗೆ ಜಮೆ ಮಾಡಿಸಿಕೊಂಡು ವಂಚಿಸಿದ್ದರು. ಈ ಬಗ್ಗೆ ಸೆನ್‌ ಪೊಲೀಸರು ಕೇಸು ದಾಖಲಿಸಿದ್ದಾರೆ.

ಉತ್ತರ ಭಾರತದಿಂದಲೇ ಕೃತ್ಯ
ಸೈಬರ್‌ ವಂಚಕರು 10ಕ್ಕೂ ಅಧಿಕ ಬ್ಯಾಂಕ್‌ ಅಕೌಂಟ್‌ ಸಂಖ್ಯೆಗಳ ಮೂಲಕ ಹಣ ಕಳುಹಿಸುವಂತೆ ತಿಳಿಸಿದ್ದರು. ಕೋಲ್ಕತಾ, ಪಶ್ಚಿಮ ಬಂಗಾಳ ಒಡಿಶಾ, ಜೈಪುರ, ಹೊಸದಿಲ್ಲಿ, ರಾಜಸ್ಥಾನ ಭಾಗ ಗಳಿಂದ ವಿವಿಧ ಮೊಬೈಲ್‌ ಸಂಖ್ಯೆಗಳಿಂದ ಅಕೌಂಟ್‌ ನಂಬರ್‌ಗಳನ್ನು ಪಡೆದು ಆರೋಪಿಗಳು ವಂಚಿಸುತ್ತಿದ್ದರು. ಜಮೆ ಮಾಡಿದ ಹಣವೆಲ್ಲ ಎಲ್ಲರಿಗೂ ಹಂಚಿ ಹೋಗಿರುವ ಸಾಧ್ಯತೆಗಳಿವೆ.  ಚೈನ್‌ಲಿಂಕ್‌ ವ್ಯವಹಾರಗಳ ಮೂಲಕ ಆರೋಪಿಗಳು ಅನಾಮಧೇಯ ಖಾತೆ ಗಳಿಗೆ ಕನ್ನ ಹಾಕುವ ಕೆಲಸ ಮಾಡುತ್ತಿದ್ದಾರೆ. ಇದರ ಜಾಡು ಹಿಡಿದು ಹೊರಟರೆ ಸಮರ್ಪಕ ದಾಖಲೆಗಳೂ ಪೊಲೀಸರಿಗೆ ಲಭ್ಯವಾಗುತ್ತಿಲ್ಲ.

ಹಿಂದಿ ಮಾತು
ಸಾಮಾನ್ಯವಾಗಿ ಈ ರೀತಿ ವಂಚನೆ ಮಾಡುವವರು ಹಿಂದಿ ಭಾಷೆಯಲ್ಲಿ ವ್ಯವಹಾರ ನಡೆಸುತ್ತಾರೆ. ಕೆಲವರು ಈ ಅಕ್ರಮಕ್ಕೆ ಯುವತಿಯರನ್ನು ಬಳಸುತ್ತಿದ್ದು, ಕರೆ ಮಾಡಿ ವಿಶ್ವಾಸ ಗಳಿಸಿ ಮಾಹಿತಿ ಪಡೆದುಕೊಳ್ಳುತ್ತಾರೆ. ವಾಹನ ಮಾರಾಟ ಇತ್ಯಾದಿ ಸುಳ್ಳು ಹೇಳಿ ವ್ಯವಹಾರಗಳನ್ನು ಕುದುರಿಸುತ್ತಾರೆ.

ಹಣ ವಸೂಲಿ ಸವಾಲು!
ಪರಿಚಯ ಇಲ್ಲದವರ ಬ್ಯಾಂಕ್‌ ಅಕೌಂಟ್‌ಗೆ ಹಾಕಿದ ಹಣದ ಮೂಲ ಹುಡುಕುವುದೇ ಸಮಸ್ಯೆ. ತಜ್ಞ ಖದೀಮರು ಆ್ಯಪ್‌ಗ್ಳ ಮೂಲಕವೇ ನಕಲಿ ಖಾತೆ ಸೃಷ್ಟಿ ಮಾಡಿ ಜನರನ್ನು ವಂಚಿಸುತ್ತಿದ್ದಾರೆ. ಅದರಲ್ಲಿ ಪೂರ್ಣ ವಿವರಗಳು ಇರುವುದಿಲ್ಲ. ವಂಚಕರ ಜಾಲವೂ ದೊಡ್ಡದಿದೆ. ವಂಚನೆ ನಡೆದ ತತ್‌ಕ್ಷಣ ದೂರು ನೀಡಿದರೆ ಕ್ರಮ ತೆಗೆದುಕೊಳ್ಳಬಹುದು ಎನ್ನುತ್ತಾರೆ ಬ್ಯಾಂಕ್‌ ಸಿಬಂದಿಯೋರ್ವರು.

ತತ್‌ಕ್ಷಣ ದೂರು ನೀಡಿ
ಮೊಬೈಲ್‌ ಸಹಿತ ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸುವಾಗ ಆದಷ್ಟು ಎಚ್ಚರದಿಂದ ಇರುವುದು ಉತ್ತಮ. ಅನ್ಯ ವ್ಯಕ್ತಿಗಳೊಂದಿಗೆ ಮಾತುಕತೆ, ಹಣಕಾಸು ವ್ಯವಹಾರ ಮಾಡಿ ವಿನಾಕಾರಣ ಹಣ ಕಳೆದುಕೊಳ್ಳಬೇಡಿ. ವಂಚನೆಗೊಳಗಾದ ತತ್‌ಕ್ಷಣವೇ ಸೆನ್‌ಪೊಲೀಸ್‌ ಠಾಣೆ ಅಥವಾ ಸಮೀಪದ ಠಾಣೆಗೆ ದೂರು ನೀಡಿದರೆ ಉತ್ತಮ.
-ರಾಮಚಂದ್ರ ನಾಯಕ್‌,  ಇನ್‌ಸ್ಪೆಕ್ಟರ್‌, ಸೆನ್‌ ಪೊಲೀಸ್‌ ಠಾಣೆ ಉಡುಪಿ

ಸಾರ್ವಜನಿಕರಿಗೆ ಸೂಚನೆ
 ದೂರವಾಣಿ ಮೂಲಕ ಪಿನ್‌ ನಂಬರ್‌ ಸಹಿತ ಇತರ  ಪಾಸ್‌ವರ್ಡ್‌ಗಳನ್ನು ನೀಡಬೇಡಿ.
 ಅಶ್ಲೀಲ ಸಂದೇಶ ಕ್ಲಿಕ್‌ ಮಾಡುವ ಮುನ್ನ ಎಚ್ಚರ.
 ಆ್ಯಪ್‌ ಉಪಯೋಗಿಸುವ ಮುನ್ನ ಮಾಹಿತಿ ಸಂಗ್ರಹಿಸಿ.
 ಸ್ಪ್ಯಾಮ್‌ ಸಂಖ್ಯೆಗಳಿಂದ ಕರೆ ಬಂದಾಗ ಎಚ್ಚರದಿಂದ ವ್ಯವಹರಿಸಿ.

ಟಾಪ್ ನ್ಯೂಸ್

Thekkatte: ಕಾರು ಮರಕ್ಕೆ ಢಿಕ್ಕಿ; ಯುವತಿ ಸ್ಥಳದಲ್ಲೇ ಸಾವು, ನಾಲ್ವರಿಗೆ ಗಂಭೀರ ಗಾಯ

1-aade

Archery ವಿಶ್ವಕಪ್‌: ಜ್ಯೋತಿಗೆ ಹ್ಯಾಟ್ರಿಕ್‌ ಚಿನ್ನ

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Kasaragod ರೈಲು ಗಾಡಿಗೆ ಕಲ್ಲೆಸೆತ: ಬಾಲಕಿಗೆ ಗಾಯ

Kasaragod ರೈಲು ಗಾಡಿಗೆ ಕಲ್ಲೆಸೆತ: ಬಾಲಕಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Kapu Assembly constituency: ನಕಲಿ ಮತದಾನ;ಆರೋಪ

Kapu Assembly constituency: ನಕಲಿ ಮತದಾನ;ಆರೋಪ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Thekkatte: ಕಾರು ಮರಕ್ಕೆ ಢಿಕ್ಕಿ; ಯುವತಿ ಸ್ಥಳದಲ್ಲೇ ಸಾವು, ನಾಲ್ವರಿಗೆ ಗಂಭೀರ ಗಾಯ

badminton

Uber Cup ಬ್ಯಾಡ್ಮಿಂಟನ್‌: ಕೆನಡಾವನ್ನು ಮಣಿಸಿದ ಭಾರತ

1-aade

Archery ವಿಶ್ವಕಪ್‌: ಜ್ಯೋತಿಗೆ ಹ್ಯಾಟ್ರಿಕ್‌ ಚಿನ್ನ

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.