ತೋಟಕ್ಕೆ ಬಿದ್ದ ಹವಾಮಾನ ಮಾಹಿತಿ ಸಂಗ್ರಹ ಯಂತ್ರ
ಬೋಳದಲ್ಲಿ ಗಾಬರಿ ಹುಟ್ಟಿಸಿದ ಬಲೂನ್
Team Udayavani, Nov 17, 2019, 12:59 AM IST
ಬೆಳ್ಮಣ್: ಬಿಳಿ ಬಣ್ಣದ ಬೃಹತ್ ಗಾತ್ರದ ಬಲೂನ್ ಸಹಿತ ಉಪಕರಣವೊಂದು ಕಾರ್ಕಳ ತಾಲೂಕಿನ ಬೋಳದ ಕಿಶೋರ್ ಅವರ ತೋಟಕ್ಕೆ ಶುಕ್ರವಾರ ರಾತ್ರಿ ಬಿದ್ದಿದ್ದು ಗಾಬರಿ ಮೂಡಿಸಿತು. ಕಾರ್ಕಳ ಪೊಲೀಸರು ಹಾಗೂ ಬೋಳ ಗ್ರಾಮ ಕರಣಿಕ ಸುದರ್ಶನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಅದು ಹವಾಮಾನ ಮಾಹಿತಿ ಯಂತ್ರ ಎಂದು ತಿಳಿದ ಬಳಿಕ ಮನೆಯವರು ಹಾಗೂ ಪರಿಸರದವರು ನಿರಾಳರಾದರು.
ವಿದೇಶೀ ನಿರ್ಮಿತ
ಕೊರಿಯಾದಲ್ಲಿ ನಿರ್ಮಾಣಗೊಂಡಿರುವ ಈ ಉಪಕರಣದಲ್ಲಿ ಆರ್ಎಸ್ಡಬ್ಲೂ é ರೇಡಿಯೋ ಸೊಂಡೆ ಹಾಗೂ ರೇಡಿಯೋ ವಿಂಡ್ ಎಂದು ಬರೆದಿದ್ದು ಎಲ್ಲಿಂದ ಹಾರಿಬಿಡಲಾಗಿದೆ ಎಂದು ಮಾಹಿತಿ ಲಭಿಸಿಲ್ಲ. ಕಾರ್ಕಳ ಗ್ರಾಮಾಂತರ ಪೊಲೀಸರ ಸಮ್ಮುಖದಲ್ಲಿ ಬೋಳ ಗ್ರಾಮಕರಣಿಕ ಸುದರ್ಶನ್ ಈ ಉಪಕರಣವನ್ನು ಕೊಂಡೊಯ್ದು ಪಂಚಾಯತ್ನಲ್ಲಿರಿಸಿದ್ದಾರೆ.
ಬಂಟ್ವಾಳದಲ್ಲಿಯೂ ಬಿದ್ದಿತ್ತು
ಈ ಹಿಂದೆ ಬಂಟ್ವಾಳದ ಮಡಂತ್ಯಾರಿನ ಎಡೂರಿನಲ್ಲಿಯೂ ಇದೇ ರೀತಿಯ ಉಪಕರಣ ಆಕಾಶದಿಂದ ಬಿದ್ದು ಗಾಬರಿ ಹುಟ್ಟಿಸಿತ್ತು. ತನಿಖೆಯ ಬಳಿಕ ಅದು ಮಂಗಳೂರಿನ ಶಕ್ತಿನಗರದ ಹವಾಮಾನ ಇಲಾಖೆಯ ಕೇಂದ್ರದಿಂದ ಬಿಡಲಾಗುತ್ತಿರುವ ಉಪಕರಣವೆಂಬ ಮಾಹಿತಿ ಲಭ್ಯವಾಗಿತ್ತು. ಹಿಂದೆ ಪಣಂಬೂರಿನ ಭಾರತೀಯ ಹವಾಮಾನ ಇಲಾಖೆಯ ಮಾಹಿತಿ ಕೇಂದ್ರದಿಂದ 40 ವರ್ಷಗಳಿಂದ ಇಂತಹ ಉಪಕರಣಗಳನ್ನು ಹಾರಿ ಬಿಡಲಾಗುತ್ತಿದ್ದು, ಇದೀಗ ಮಂಗಳೂರಿನ ಶಕ್ತಿನಗರದ ಕೇಂದ್ರಕ್ಕೆ ವರ್ಗಾವಣೆ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ