ಹೆಜಮಾಡಿ ಚೆಕ್ಪೋಸ್ಟ್: ಅನಿರ್ಬಂಧಿತ ಸಂಚಾರ
Team Udayavani, May 23, 2020, 4:32 AM IST
ಸಾಂದರ್ಭಿಕ ಚಿತ್ರ.
ಪಡುಬಿದ್ರಿ: ಅಂತರ್ ಜಿಲ್ಲಾ ಸಂಚಾರಗಳಿಗೆ ಇದ್ದ ನಿರ್ಬಂಧವನ್ನು ಕಡಿತಗೊಳಿಸಲಾಗಿರುವುದರಿಂದ ಹೆಜಮಾಡಿ ಚೆಕ್ಪೋಸ್ಟ್ನಲ್ಲೀಗ ಅನಿರ್ಬಂಧಿತ ವಾಹನ ಸಂಚಾರವು ನಡೆಯುತ್ತಿದೆ.
ಪೊಲೀಸರು ಅನ್ಯ ಜಿಲ್ಲೆಗಳಿಂದ ಉಡುಪಿ ಜಿಲ್ಲೆಗೆ ಬರುವ ವಾಹನಗಳನ್ನು ಗುರುತು ಕಾರ್ಡ್ಗಳನ್ನು ಪರಿಶೀಲಿಸಿ ಬಿಡುತ್ತಿದ್ದಾರೆ. ಇದೇ ವೇಳೆ ಉಡುಪಿಯನ್ನು ಹಾದು ಹೊರ ಜಿಲ್ಲೆಗಳಿಗೆ ಹೋಗುವ ವಾಹನಗಳಲ್ಲಿನ ಪ್ರಯಾಣಿಕರ ದೇಹದ ತಾಪಮಾನವನ್ನು ಪರಿಶೀಲಿಸಿ, ಅನ್ಯ ರಾಜ್ಯಗಳಿಗೆ ತೆರಳುವ ಕಾರುಗಳಲ್ಲಿ ಪ್ರಯಾಣಿಸುವವರ ವಿವರವನ್ನೂ ಸಂಗ್ರಹಿಸಿಕೊಂಡು ಬಿಡಲಾಗುತ್ತಿದೆ.
ಆವಶ್ಯಕ ವಸ್ತುಗಳನ್ನು ಸಾಗಿಸುವ ಘನ ವಾಹನಗಳನ್ನೂ ನೇರವಾಗಿ ಬಿಡಲಾಗುತ್ತಿದೆ. ಇತರೆಲ್ಲಾ ಹೊರ ರಾಜ್ಯಗಳ ಲಾರಿಗಳು, ಟ್ರಕ್ಗಳ ಎಲ್ಲಿಂದ ಎಲ್ಲಿಗೆ ಹೋಗುತ್ತಿರುವ ಮಾಹಿತಿಯನ್ನು ಸಂಗ್ರಹಿಸಿ ಅವುಗಳನ್ನೂ ಮುಕ್ತವಾಗಿ ಸಂಚರಿಸಲು ಬಿಡಲಾಗುತ್ತಿದೆ. ಅನ್ಯ ರಾಜ್ಯಗಳಿಂದ ಉಡುಪಿ ಜಿಲ್ಲೆಗೆ ಆಗಮಿಸುವ ಮಂದಿಯ ವಿವರವನ್ನು ದಾಖಲಿಸಿಕೊಂಡು ಅವರ ದೇಹದ ತಾಪಮಾನವನ್ನು ಪರಿಶೀಲಿಸಿ ಪೊಲೀಸ್ ಬೆಂಗಾವಲು ಮೂಲಕ ಅವರ ಕ್ವಾರೆಂಟೈನ್ಪ್ರದೇಶಗಳಿಗೆ ತಲುಪಿಸುವ ವ್ಯವಸ್ಥೆಯನ್ನು ನಿರ್ವಹಿಸಲಾಗುತ್ತಿರುವುದಾಗಿ ಪಡುಬಿದ್ರಿ ಪೊಲೀಸ್ ಠಾಣಾಧಿಕಾರಿ ಸುಬ್ಬಣ್ಣ ಮಾಹಿತಿಯಿತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kanakagiri ದೇಗುಲಕ್ಕೆ ಬಂದಿದ್ದ ಕರಡಿ ಸೆರೆ ಹಿಡಿಯುವಾಗ ದಾಳಿ: ವೃದ್ಧ ಸಾವು
Mysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್ಗೆ ಹಲ್ಲೆ
Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮನೆ ರತ್ನಾಕರ್
BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ
Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!