ಇಂದ್ರಾಣಿ ಹೂಳೆತ್ತುವ ಕಾಮಗಾರಿ ಕಾಟಾಚಾರಕ್ಕೆ ಸೀಮಿತವೇ?


Team Udayavani, Jun 1, 2020, 5:15 AM IST

ಇಂದ್ರಾಣಿ ಹೂಳೆತ್ತುವ ಕಾಮಗಾರಿ ಕಾಟಾಚಾರಕ್ಕೆ ಸೀಮಿತವೇ?

ಸಾಂದರ್ಭಿಕ ಚಿತ್ರ

ಉಡುಪಿ: ನಗರಸಭೆ ವ್ಯಾಪ್ತಿಯ ಕಲ್ಸಂಕದ ಮಾರ್ಗದಲ್ಲಿ ಹಾದು ಹೋಗುವ ಇಂದ್ರಾಣಿ ನದಿಯ ಹೂಳೆತ್ತುವ ಕಾಮಗಾರಿಯನ್ನು ಗುತ್ತಿಗೆದಾರರು ಕೇವಲ ಕಾಟಾಚಾರಕ್ಕೆ ಮಾಡಿ ಮುಗಿಸಿದ್ದಾರೆ ಎನ್ನುವ ಆರೋಪಗಳು ಸ್ಥಳೀಯವಾಗಿ ಕೇಳಿ ಬರುತ್ತಿವೆ.

36 ಲ.ರೂ. ವೆಚ್ಚದ ಕಾಮಗಾರಿ
ನಗರಸಭೆ ಸುಮಾರು 36 ಲ.ರೂ. ವೆಚ್ಚದಲ್ಲಿ ಕಲ್ಸಂಕ, ಮಠದ ಬೆಟ್ಟು, ನಿಟ್ಟೂರು ಶಾರದ ಇಂಟರ್‌ ನ್ಯಾಶನಲ್‌ ಹೊಟೇಲ್‌, ಮೂಡುಬೆಟ್ಟು, ಕೊಡವೂರು, ಕೊಡಂಕೂರು, ಪುತ್ತೂರು, ಸಾಯಿಬಾಬಾ ಮಂದಿರ ಪ್ರದೇಶದಲ್ಲಿ ಹರಿಯುವ ಇಂದ್ರಾಣಿಯ ಹೂಳೆತ್ತುವ ಕಾಮಗಾರಿಗೆ ಟೆಂಡರ್‌ ಮಂಜೂರಾಗಿದೆ. ಕಾಮಗಾರಿ 2020 ಜನವರಿಯ‌ಲ್ಲಿ ಪ್ರಾರಂಭಗೊಂಡಿತ್ತು. ಮೂರು ತಿಂಗಳ ಅವಧಿ ನೀಡಲಾಗಿತ್ತು.

ಹೂಳು ದಂಡೆ ಮೇಲಿದೆ!
ಕಲ್ಸಂಕದಿಂದ ಸಾಯಿಬಾಬಾ ಮಂದಿರದ ವರೆಗಿನ 8 ಕಿ.ಮೀ. ವ್ಯಾಪ್ತಿಯಲ್ಲಿ ಇಂದ್ರಾಣಿ ನದಿಯ ಹೂಳು ಎತ್ತಲಾಗಿದೆ. ಜನರು ಓಡಾಟ ಮಾಡುವ ಮುಖ್ಯ ಪ್ರದೇಶವಾದ ಸಾಯಿಬಾಬಾ ಮಂದಿರ, ಮಠದಬೆಟ್ಟು ಸೇರಿದಂತೆ ಪ್ರಮುಖ ಕೇಂದ್ರದಲ್ಲಿ ಮಾತ್ರ ಉತ್ತಮ ರೀತಿಯಲ್ಲಿ ಹೂಳು ತೆಗೆದು ಬೇರೆ ಕಡೆಗೆ ವಿಲೇವಾರಿ ಮಾಡಿದ್ದಾರೆ. ಉಳಿದ ಕಡೆಯಲ್ಲಿ ತೆಗೆಯಲಾದ ಹೂಳನ್ನು ದಂಡೆಗೆ ಹಾಕಲಾಗಿದೆ. ಇದರಿಂದಾಗಿ ಮಳೆಗಾಲದಲ್ಲಿ ತೆಗೆಯಲಾದ ಹೂಳು ಮತ್ತೆ ಇಂದ್ರಾಣಿಯನ್ನು ಸೇರಲಿದೆ.

ಹೂಳು ತುಂಬಿ ನೆರೆ
ಕಿನ್ನಿಮೂಲ್ಕಿ, ಕಲ್ಸಂಕ, ಮೂಡುಬೆಟ್ಟು, ಮಠದಬೆಟ್ಟು, ಕೊಡವೂರು, ಬೈಲಕೆರೆ, ಗುಂಡಿಬೈಲು, ಕಂಬಳಕಟ್ಟು ಸಹಿತ ಹಲವೆಡೆ ಮಳೆಗಾಲದಲ್ಲಿ ತೋಡು ಉಕ್ಕಿ ಹರಿಯುತ್ತದೆ.ಎಲ್ಲೆಡೆ ಹೂಳು ತುಂಬಿಯೂ ಸಮಸ್ಯೆ ಹೆಚ್ಚಿದೆ. ಇದರಿಂದಾಗಿ ತಗ್ಗು ಪ್ರದೇಶದಲ್ಲಿ ಕಟ್ಟಿದ ಮನೆಗಳಿಗೆ ನೀರು ನುಗ್ಗುತ್ತಿದೆ.

ಎಲ್ಲೆಲ್ಲಿ ಪೂರ್ಣ? ಅಪೂರ್ಣ?
ಕಲ್ಸಂಕ, ಮಠದಬೆಟ್ಟು, ನಿಟೂರು ಶಾರದಾ ಇಂಟರ್‌ ನ್ಯಾಶನಲ್‌ ಹೊಟೇಲ್‌, ಮೂಡುಬೆಟ್ಟು, ಕೊಡವೂರು ಕೊಡಂಕೂರು, ಪುತ್ತೂರು, ಸಾಯಿಬಾಬಾ ಮಂದಿರ ಪ್ರದೇಶದ ಹೂಳು ತೆಗೆಯಲಾಗಿದೆ ಎಂದು ಗುತ್ತಿಗೆದಾರರು ನಗರಸಭೆಗೆ ವರದಿ ನೀಡಿದ್ದಾರೆ. ಆದರೆ ಈ ಮಾರ್ಗದ ಕೆಲವೆಡೆಯಲ್ಲಿ ಗಿಡಗಳ ಕ್ರಾಸ್‌ ಕಟ್ಟಿಂಗ್‌ ಬಿಟ್ಟರೆ ಅಲ್ಪ ಪ್ರಮಾಣದ ಹೂಳು ತೆಗೆಯಲಾಗಿದೆ. ಇದರಿಂದಾಗಿ ಮಳೆಗಾಲದಲ್ಲಿ ತಗ್ಗು ಪ್ರದೇಶಗಳು ಜಲಾವೃತವಾಗಲಿವೆೆ ಎನ್ನುವ ಆತಂಕದಲ್ಲಿ ಸ್ಥಳೀಯರು ಇದ್ದಾರೆ.

ಬೇಸಾಯ ಹಾಳು
ಸಾಯಿಬಾಬಾ ಮಂದಿರದಿಂದ ಕಂಬಳಕಟ್ಟದ ವರೆಗೆ ತೆಗೆಯಲಾದ ಹೂಳನ್ನು ದಂಡೆ ಬದಿ ಹಾಕಲಾಗಿದೆ. ಒಂದು ಮಳೆ ಬಂದರೆ ಸಾಕು ಮತ್ತೆ ಇಂದ್ರಾಣಿ ನದಿ ಸೇರುತ್ತದೆ. ಕಾಮಗಾರಿ ಸಂದರ್ಭದಲ್ಲಿ ಸಂಪೂರ್ಣವಾಗಿ ಎರಡು ಕಡೆಗಳ ಹೂಳು ತೆಗೆದಿಲ್ಲ. ಇದರಿಂದ ಮಳೆಗಾಲದಲ್ಲಿ ನೆರೆಯ ನೀರು ಗದ್ದೆಗಳಿಗೆ ನುಗ್ಗಿ ವ್ಯವಸಾಯ ಹಾಳು ಮಾಡುತ್ತದೆ.
– ದಿನೇಶ್‌
ಕಂಬಳಕಟ್ಟು ನಿವಾಸಿ

ಸೂಚನೆ ನೀಡಲಾಗಿದೆ
ಗುತ್ತಿಗೆದಾರರಿಗೆ ಮೊದಲ ಹಂತದ ಹಣ ಮಾತ್ರ ಬಿಡುಗಡೆಯಾಗಿದೆ. ಕೆಲಸದಲ್ಲಿ ಲೋಪ ಕಂಡುಬಂದರೆ ಬಿಲ್‌ ಪಾಸ್‌ ಮಾಡುವುದಿಲ್ಲ. ಹೂಳು ತೆರವಿಗೆ ಸ‌ೂಚನೆ ನೀಡಲಾಗಿದೆ. ಗುತ್ತಿಗೆದಾರರು ಲೋಪವೆಸಗಿದರೆ ಸಾರ್ವಜನಿಕರು ನೇರವಾಗಿ ದೂರವಾಣಿ ಮೂಲಕ ದೂರು ನೀಡಬಹುದು. ಸ್ಥಳಕ್ಕೆ ಖಂಡಿತವಾಗಿ ಭೇಟಿ ನೀಡಿ ಕ್ರಮ ತೆಗೆದುಕೊಳ್ಳುತ್ತೇವೆ.
– ಮೋಹನ್‌ ರಾಜ್‌
ಎಇಇ, ನಗರಸಭೆ ಉಡುಪಿ

ಟಾಪ್ ನ್ಯೂಸ್

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Udupi; ಮಸ್ಟರಿಂಗ್‌ ಕೇಂದ್ರದಲ್ಲಿ ಸಕಲ ತಯಾರಿ

Udupi; ಮಸ್ಟರಿಂಗ್‌ ಕೇಂದ್ರದಲ್ಲಿ ಸಕಲ ತಯಾರಿ

ಉಡುಪಿ-ಚಿಕ್ಕಮಗಳೂರು; ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿಯ ಸ್ಪಷ್ಟತೆಯಿದೆ: ಜೆ.ಪಿ.

ಉಡುಪಿ-ಚಿಕ್ಕಮಗಳೂರು; ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿಯ ಸ್ಪಷ್ಟತೆಯಿದೆ: ಜೆ.ಪಿ.

ಉಡುಪಿ- ಚಿಕ್ಕಮಗಳೂರು: ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳು ಇವೆ: ಕೋಟ

ಉಡುಪಿ- ಚಿಕ್ಕಮಗಳೂರು: ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳು ಇವೆ: ಕೋಟ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.