“ದೇವರ ಸೇವೆ ಮಾಡುವ ಅವಕಾಶ ಸಿಕ್ಕಿದಂತಾಯಿತು’

 ಸೋಂಕಿತರ ಶುಶ್ರೂಷೆಗೈದ ದಾದಿಯರ ಮಾತು

Team Udayavani, Jun 1, 2020, 5:10 AM IST

“ದೇವರ ಸೇವೆ ಮಾಡುವ ಅವಕಾಶ ಸಿಕ್ಕಿದಂತಾಯಿತು’

ಕುಂದಾಪುರ: ಕೋವಿಡ್‌- 19 ಸೇವೆಗೆ ಆಹ್ವಾನಿಸಿದಾಗ ನಾನು ಹೆದರಿದ್ದೆ. ಎಷ್ಟೋ ಮಂದಿ ಕೋವಿಡ್‌-19 ಇದೆ, ಕರ್ತವ್ಯಕ್ಕೆ ಹೋಗಬೇಡ ಎಂದು ಹೆದರಿಸಿದ್ದರು. ಆದರೆ ನಾನು ಗಟ್ಟಿಮನಸ್ಸು ಮಾಡಿ ಇಲ್ಲಿ ಸೇವೆಗೆ ಸೇರಿದೆ.

ಸಿದ್ದಾಪುರದಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ತಾಳ್ಮೆ ಕಡಿಮೆಯಿತ್ತು. ವೈದ್ಯರಿಂದ, ಶುಶ್ರೂಷಕಿಯರಿಂದ ತಾಳ್ಮೆಯನ್ನು ಕಲಿತೆ. ಕೋವಿಡ್‌- 19 ಪೀಡಿತರ ಸೇವೆ ಮಾಡುವ ಮೂಲಕ ನನಗೆ ದೇವರ ಸೇವೆ ಮಾಡಲು ಅವಕಾಶ ದೊರೆತಂತಾಯಿತು. ಇದು ನನ್ನ ಜೀವನದ ಭಾಗ್ಯವೇ ಸರಿ. ಹೀಗಂತ ಹೇಳುತ್ತಾ ಕಣ್ಣಾಲಿಗಳಲ್ಲಿ ನೀರು ತುಂಬಿಕೊಂಡವರು ಕೋವಿಡ್‌-19 ಸರಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಕೊರೊನಾ ವಾರಿಯರ್‌ ಮಂಜುಳಾ ಅವರು.

ರವಿವಾರ ಮೊದಲ ತಂಡದ 14 ಮಂದಿ ಗುಣಮುಖರಾಗಿ ಬಿಡುಗಡೆಯಾದಾಗ ಈ ಆಸ್ಪತ್ರೆಯ ಕೋವಿಡ್‌- 19 ವಾರಿಯ ರ್ಸ್‌ಗಳ ಮುಖದಲ್ಲಿ ಹರ್ಷ ತಾಂಡವವಾಡುತ್ತಿತ್ತು. ಹಿರಿಯ ಅಧಿಕಾರಿಗಳು ಗುಣಮುಖರಾದವರಿಗೆ ಹೂವು, ಹೂಗಿಡ, ಮಕ್ಕಳಿಗೆ ಚಾಕಲೇಟ್‌ ನೀಡಿ ಅಭಿನಂದಿಸುತ್ತಿದ್ದರೆ ಅಲ್ಲಿ ಸೇರಿದ್ದ ಅಷ್ಟೂ ಮಂದಿ ಸಿಬಂದಿ ಚಪ್ಪಾಳೆ ಮೂಲಕ ಜೀವನೋಲ್ಲಾಸ ಹೆಚ್ಚಿಸುತ್ತಿದ್ದರು.

ಮೊದಲು ಮಾತ್ರೆಗಳನ್ನು ಸೇವಿಸಿಯೇ ಸೇವೆಗೆ ತೆರಳುತ್ತಿದ್ದೆವು. ಅನಂತರ ಭಯವೆಲ್ಲ ಹೊರಟು ಹೋಯಿತು. ಯಾವುದೇ ಭಯವಿಲ್ಲದೆ ಕೆಲಸ ಮಾಡುವುದು ಅಭ್ಯಾಸವಾಯಿತು ಎನ್ನುತ್ತಾರೆ ದಾದಿ ಸುರೇಖಾ.

ಗುಣಮುಖರಾಗಿ ಬಂದ ವ್ಯಕ್ತಿಯೊಬ್ಬರು ಪ್ರತಿಕ್ರಿಯಿಸಿ, ರೋಗದ ಕುರಿತಾಗಿ ಭಯ ಬೇಡ. ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ಅತ್ಯುತ್ತಮ ಚಿಕಿತ್ಸೆ ದೊರೆತಿದೆ. ಈ ನಿಟ್ಟಿನಲ್ಲಿ ಕೂಡಾ ಆತಂಕ ಅನಗತ್ಯ ಎಂದು ಪ್ರತಿಕ್ರಿಯಿಸಿದರು.

ಸಹಾಯಕ ಕಮಿಷನರ್‌ ಕೆ. ರಾಜು, ಇಲ್ಲಿನ ಆಸ್ಪತ್ರೆಯಲ್ಲಿ 78 ಜನರ ಪೈಕಿ 14 ಮಂದಿಯ ವರದಿ ನೆಗೆಟಿವ್‌ ಬಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಮುಂದಿನ ದಿನಗಳಲ್ಲಿ ಸಾಮಾಜಿಕ ವೈಯಕ್ತಿಕ ಅಂತರ ಕಾಪಾಡುವುದೂ ಸೇರಿದಂತೆ ಕೋವಿಡ್‌- 19 ಹರಡುವುದನ್ನು ತಡೆಗಟ್ಟಲು ಪ್ರಯತ್ನಗಳು ಮುಂದುವರಿಯಲಿ ಎಂದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ| ಸುಧೀರ್‌ಚಂದ್ರ ಸೂಡ, ಜಿಲ್ಲೆಯಲ್ಲಿ 175 ಪ್ರಕರಣಗಳನ್ನು ವಿವಿಧ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದ್ದು ಜನರಿಗೆ ಚಿಕಿತ್ಸೆ ಕುರಿತು ಆತಂಕ ಅನಗತ್ಯ. ಎಷ್ಟೇ ಪ್ರಕರಣ ಬಂದರೂ ಜಿಲ್ಲೆಯಲ್ಲಿ ಸಮರ್ಥವಾಗಿ ಎದುರಿಸಲು ವೈದ್ಯಕೀಯ ತಂಡ ಸದಾ ಸಿದ್ಧವಿದೆ. ಜನರು ಭಯಪಡಬೇಕಿಲ್ಲ, ಆದರೆ ಮುಂಜಾಗೃತ ಕ್ರಮ ವಹಿಸಿ ಸಮುದಾಯಕ್ಕೆ ಹರಡದಂತೆ ತಡೆಯಬೇಕು ಎಂದರು.

ಕೋವಿಡ್‌-19 ಜಿಲ್ಲಾ ನೋಡೆಲ್‌ ಅಧಿಕಾರಿ ಡಾ| ಪ್ರಶಾಂತ್‌ ಭಟ್‌, ಉಡುಪಿ ಜಿಲ್ಲೆಯಲ್ಲಿ ಮಾರ್ಚ್‌ನಿಂದ ಕೋವಿಡ್‌ ಸಂಬಂಧ ಅಭಿಯಾನ ನಡೆಯುತ್ತಿದೆ. ಬೇರೆ ರಾಜ್ಯಗಳಿಂದ ಬಂದವರಿಗೆ ತಪಾಸಣೆ ನಡೆಸಿ ಅವರನ್ನು ಕ್ವಾರಂಟೈನ್‌ನಲ್ಲಿ ಇಟ್ಟು ಜಿಲ್ಲೆಯ 13 ಲಕ್ಷ ಜನರಿಗೆ ಸೋಂಕು ತಗಲದಂತೆ ಪ್ರಯತ್ನ ಮಾಡಿದೆ. ಶನಿವಾರದ ವರೆಗೆ 50, ರವಿವಾರ 14 ಗುಣಮುಖರಾಗಿದ್ದು ಮೊದಲೇ ಆತಂಕವಿದ್ದ ಒಂದು ಪ್ರಕರಣದಲ್ಲಿ ಮಾತ್ರ ಸಾವು ಸಂಭವಿಸಿದೆ. ಉಡುಪಿ ಟಿಎಂಎಪೈ ಆಸ್ಪತ್ರೆಯಲ್ಲಿ 100 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದ್ದು ನಂತರದ ದಿನಗಳಲ್ಲಿ ಹೊರರಾಜ್ಯಗಳಿಂದ ಬರುವವರಲ್ಲಿ ಸೋಂಕು ಲಕ್ಷಣ ಹೆಚ್ಚಾಗಿ ಕಂಡುಬಂದ ಕಾರಣ ಕುಂದಾಪುರ, ಕಾರ್ಕಳದಲ್ಲಿ ಸರಕಾರಿ ಆಸ್ಪತ್ರೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಎಲ್ಲ ವೈದ್ಯರು, ವೈದ್ಯಕೀಯ ಸಿಬಂದಿಯ ಅವಿರತ ಪರಿಶ್ರಮದಿಂದ ಉತ್ತಮ ಚಿಕಿತ್ಸೆ ದೊರೆಯುತ್ತಿದೆ ಎಂದರು.

ಮೊದಲ ಸರಕಾರಿ ಆಸ್ಪತ್ರೆ
ಕೋವಿಡ್‌ 19ಗೆ ಚಿಕಿತ್ಸೆ ನೀಡಿ ಪಾಸಿಟಿವ್‌ ಬಂದವರನ್ನು ಗುಣಮುಖರಾಗಿಸಿ ಕಳುಹಿಸಿದ ಜಿಲ್ಲೆಯ ಮೊದಲ ಸರಕಾರಿ ಆಸ್ಪತ್ರೆ ಇದಾಗಿದೆ. ಹೊರರಾಜ್ಯಗಳಿಂದ ಆಗಮಿಸಿದ ಕುಂದಾಪುರ ತಾ|ನ ವಿವಿಧೆಡೆಯ ಮಕ್ಕಳು, ಮಹಿಳೆಯರು, ಹಿರಿಯರು ಸೇರಿದಂತೆ ಇಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ ಎಂದರು.

ಸದಾ ಎಚ್ಚರ ವಹಿಸಿ
ಕ್ವಾರಂಟೈನ್‌ನಿಂದ ಬಿಡುಗಡೆಗೊಂಡವರು, ಗಂಟಲ ದ್ರವ ವರದಿ ಬಾರದೇ ಇದ್ದವರು ಅನವಶ್ಯಕವಾಗಿ ಸುತ್ತಾಡಿ ಒಂದೊಮ್ಮೆ ಸೋಂಕು ಇದ್ದರೆ ಅದು ಹರಡಲು ಕಾರಣವಾಗಬೇಡಿ. ಹೋಂ ಕ್ವಾರಂಟೈನ್‌ ವಿಧಿಸಿದ್ದರೆ ಕಟ್ಟುನಿಟ್ಟಾಗಿ ಪಾಲಿಸಿ. ಸಾಮಾಜಿಕ ಅಂತರ, ಮಾಸ್ಕ್ ಧಾರಣೆ ಸೇರಿದಂತೆ ನಿಯಮಗಳನ್ನು ಪಾಲಿಸಿ.
– ಹರೀಶ್‌ ಆರ್‌. ನಾಯ್ಕ,
ಎಸ್‌ಐ, ಕುಂದಾಪುರ

ಟಾಪ್ ನ್ಯೂಸ್

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

1-wewqewq

Mumbai; 2005ರ ಭೀಕರ ಪ್ರವಾಹ ನೆನಪಿಸಿದ ಮಳೆ!:19 ವರ್ಷ ಹಿಂದಿನ ಸ್ಥಿತಿ ಮರುಕಳಿಸಲಿದೆಯೇ?

rahul-Gandhi-Car

Defamation case; ಪ್ರಚಾರಕ್ಕಾಗಿ ನನ್ನ ವಿರುದ್ಧ ಮಾನಹಾನಿ ಕೇಸ್‌: ರಾಹುಲ್‌ ಆರೋಪ

1-dubey

Increase of Muslims; ಝಾರ್ಖಂಡ್‌,ಪಶ್ಚಿಮ ಬಂಗಾಲ ಕೇಂದ್ರಾಡಳಿತ ಪ್ರದೇಶವಾಗಿಸಿ: ದುಬೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kundapura ಮೂರು ಕಡಲಾಮೆ ರಕ್ಷಣೆ

Kundapura ಮೂರು ಕಡಲಾಮೆ ರಕ್ಷಣೆ

27 ವರ್ಷದಿಂದ ತಲೆಮರೆಸಿಕೊಂಡಿದ್ದ ಅತ್ಯಾಚಾರ ಆರೋಪಿ ಬಂಧನ

27 ವರ್ಷದಿಂದ ತಲೆಮರೆಸಿಕೊಂಡಿದ್ದ ಅತ್ಯಾಚಾರ ಆರೋಪಿ ಬಂಧನ

Udupi ಕೇಂದ್ರ ಸರಕಾರದ ವಿರುದ್ಧ ಜಿಲ್ಲಾ ಕಾಂಗ್ರೆಸ್‌ ಪ್ರತಿಭಟನೆ

Udupi ಕೇಂದ್ರ ಸರಕಾರದ ವಿರುದ್ಧ ಜಿಲ್ಲಾ ಕಾಂಗ್ರೆಸ್‌ ಪ್ರತಿಭಟನೆ

Uppunda ವಿದ್ಯುತ್ ಶಾಕ್ ಹೊಡೆದು ವ್ಯಕ್ತಿ ಸಾವು

Uppunda ವಿದ್ಯುತ್ ಶಾಕ್ ಹೊಡೆದು ವ್ಯಕ್ತಿ ಸಾವು

Kundapura – Byndoor ಹೆದ್ದಾರಿ: ನಾಲ್ಕು ಅಂಡರ್‌ಪಾಸ್‌ಗೆ ಒಪ್ಪಿದ ಗಡ್ಕರಿ

Kundapura – Byndoor ಹೆದ್ದಾರಿ: ನಾಲ್ಕು ಅಂಡರ್‌ಪಾಸ್‌ಗೆ ಒಪ್ಪಿದ ಗಡ್ಕರಿ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

Kohli IPL 2024

Champions Trophy; ಕೊಹ್ಲಿ ಪಾಕ್‌ನಲ್ಲಿ ಆಡಲಿ: ಯೂನಿಸ್‌ ಖಾನ್‌

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.