ವಿಶೇಷ ವರದಿ: ಹಾದಿ ತಪ್ಪುತ್ತಿದೆ ನಗರಸಭೆಯ ಕಸ ಸಂಗ್ರಹ ಕಾರ್ಯ

35 ವಾರ್ಡ್‌ಗಳಲ್ಲಿ ಕಸ ವಿಲೇವಾರಿಯಾಗದೆ ಸಮಸ್ಯೆ

Team Udayavani, Sep 8, 2020, 5:02 AM IST

ವಿಶೇಷ ವರದಿ: ಹಾದಿ ತಪ್ಪುತ್ತಿದೆ ನಗರಸಭೆಯ ಕಸ ಸಂಗ್ರಹ ಕಾರ್ಯ

ಉಡುಪಿ: ಮನೆ ಮನೆಯಿಂದ ಕಸ ಸಂಗ್ರಹ ವ್ಯವಸ್ಥೆ ನಗರ ನಿವಾಸಿಗಳಿಗೆ ಯಾತನೆ ಯಾಗಿ ಪರಿಣಮಿಸಿದೆ. ನಿಗದಿತ ಸಮಯದಲ್ಲಿ ಮನೆಯ ಕಸ ವಿಲೇವಾರಿಯಾಗದೆ ಇರುವುದರಿಂದ ಮನೆಯ ಪರಿಸರ ದುರ್ನಾತ ಬೀರುತ್ತಿದ್ದು, ರೋಗ ಹರಡಲು ಕಾರಣವಾಗುತ್ತಿದೆ. 35 ವಾರ್ಡ್‌ಗಳಿಗೆ ಕಸ ವಿಂಗಡಣೆ ಮಾಡಿ ನೀಡುವಂತೆ ನಗರಸಭೆ ಆದೇಶ ನೀಡಿದ್ದು, ಅಂತೆಯೇ ನಗರ ನಿವಾಸಿಗಳು ಹಸಿ ಹಾಗೂ ಒಣ ಕಸವನ್ನು ಪ್ರತ್ಯೇಕಿಸಿ ನೀಡುತ್ತಿದ್ದಾರೆ.  ಜತೆಗೆ ಕಸ ಸಂಗ್ರಹಕ್ಕೆ ನಿರ್ದಿಷ್ಟ ಶುಲ್ಕವನ್ನು ಸಹ ವಿಧಿಸುತ್ತಿದ್ದು, ಸಾರ್ವಜನಿಕರು ಯಾವುದೇ ಮರುಮಾತನಾಡದೆ ಮಾಸಿಕ ಶುಲ್ಕ ಪಾವತಿ ಮಾಡುತ್ತಿದ್ದಾರೆ.

ಏನೂ ಹೇಳಬೇಡಿ!
ಕಸವನ್ನು ಸಮರ್ಪಕವಾಗಿ ತೆಗೆದುಕೊಂಡು ಹೋಗದ ಕಾರಣಕ್ಕೆ ಕಾರ್ಮಿಕರನ್ನು ಕೇಳಿದರೆ, ಗುತ್ತಿಗೆದಾರರು ಅವರಿಗೆ ಏನೂ ಹೇಳ ಬೇಡಿ ಅವರು ಬಿಟ್ಟು ಹೋದರೆ ಮತ್ತು ಕೆಲಸಕ್ಕೆ ಕಾರ್ಮಿಕರು ಸಿಗುವುದಿಲ್ಲ ಎಂದು ಮನವಿ ಮಾಡಿಕೊಳ್ಳುತ್ತಾರೆ. ಇದರಿಂದಾಗಿ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.

ಮನೆ ತೆರಿಗೆ ಸಂಗ್ರಹ ಯಾವುದಕ್ಕಾಗಿ?
ನಗರದಲ್ಲಿ ಮೂಲ ಸೌಲಭ್ಯಗಳನ್ನು ಒದಗಿಸಲು ಮನೆ ತೆರಿಗೆಯನ್ನು ಕಟ್ಟಲಾಗುತ್ತದೆ. ಇದರಲ್ಲಿ ರಸ್ತೆ ನಿರ್ವಹಣೆ, ದಾರಿದೀಪ, ಶುಚಿತ್ವ ಸೇರಿಕೊಂಡಿದೆ. ಆದರೂ ಮನೆಗಳಿಂದ ಪ್ರತಿ ತಿಂಗಳು 30 ರೂ. ಸಂಗ್ರಹಿಸಲಾಗುತ್ತದೆ. ಹೆಚ್ಚುವರಿಯಾಗಿ ಕೇಳಿದಾಗಲೂ ಚಕಾರವೆತ್ತದೆ ನಾಗರಿಕರು ಸಹಕರಿಸುತ್ತಿರುವಾಗ ಸೇವೆಯ ಗುಣಮಟ್ಟವೂ ವೃದ್ಧಿಸಬೇಕಾಗಿದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯ.

ವಾರದಲ್ಲಿ 2 ಬಾರಿ ಸಂಗ್ರಹ
ವಾರಕ್ಕೆ ಎರಡು ಬಾರಿ ಕಸ ಸಂಗ್ರಹಕ್ಕೆ ದಿನ ನಿಗದಿ ಮಾಡಲಾಗಿದೆ. ಮನೆಯಲ್ಲಿ ಮಹಿಳೆಯರು, ವಯಸ್ಕರ, ಮಕ್ಕಳು ಬಳಸುವ ಪ್ಯಾಡ್‌, ರೋಗಿಗಳಿದ್ದರೆ ಅವರ ತ್ಯಾಜ್ಯಗಳು ಮೂರು ದಿನಕ್ಕೊಮ್ಮೆ ವಿಲೇವಾರಿಯಾಗುತ್ತವೆ. ಕಾರ್ಮಿಕರು ಮಾಡಿರುವ ನಿಯಮದಂತೆ ಪ್ಯಾಡ್‌ಗಳನ್ನು ಸಮರ್ಪಕವಾಗಿ ಮುಚ್ಚಿ ಅದರ ಮೇಲೆ ಕೆಂಪು ಶಾಯಿಯಿಂದ ಗುರುತು ಹಾಕಿ ನೀಡಲಾಗುತ್ತದೆ. ಇಷ್ಟಾದರೂ ಕಸ ಸಂಗ್ರಹಣೆ ಸಮರ್ಪಕವಾಗಿಲ್ಲ.

ಕಸದ ಸಮಸ್ಯೆ ಉಲ್ಬಣ
ಉಡುಪಿ ನಗರಸಭೆಯ 35 ವಾರ್ಡ್‌ ಗಳಲ್ಲಿ ಕಸದ ಸಮಸ್ಯೆ ಉಲ್ಬಣಿಸಿದೆ. ಸ್ಥಳೀಯ ಪೌರಕಾರ್ಮಿಕರು ನಗರವನ್ನು ಸ್ವತ್ಛಗೊಳಿಸುವಲ್ಲಿ ನಿರತರಾಗಿದ್ದಾರೆ. ಸಾಕಷ್ಟು ಸಿಬಂದಿ ಕೊರತೆಯನ್ನು ಎದುರಿಸುತ್ತಿರುವ ಈ ಪರಿಸ್ಥಿತಿಯಲ್ಲಿ$ ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿಗೆ ಕೆಲವು ಸಂಘದ ಸದಸ್ಯರು ಹಾಗೂ ಹೊರ ಗುತ್ತಿಗೆಯ ಕಾರ್ಮಿಕರನ್ನು (ಹೊರ ಜಿಲ್ಲೆಯವರು) ಬಳಸಿಕೊಳ್ಳಲಾಗುತ್ತಿದೆ. ಇವರು ಮನೆ ಮನೆಗೆ ತೆರಳಿ ಕಸ ಸಂಗ್ರಹಿಸುವಾಗ ಸ್ವಲ್ಪ ಕಸದ ಹೊರೆ ಜಾಸ್ತಿಯಾದರೆ ಮನೆಯ ಮಾಲೀಕರನ್ನು ದಬಾಯಿಸುತ್ತಾರೆ ಎಂಬ ಆರೋಪವಿದೆ. ಕೆಲವೊಮ್ಮೆ ಕಸವನ್ನು ಅಲ್ಲಿಯೇ ಬಿಟ್ಟು ಹೋಗಿರುವ ಘಟನೆಗಳು ಅಜ್ಜರಕಾಡು, ಒಳಕಾಡು, ಕಡಿಯಾಳಿ ಪರಿಸರದಿಂದ ವರದಿಯಾಗಿದೆ.

ಶೀಘ್ರ ಪರಿಹಾರ
ನಗರದ 35 ವಾರ್ಡ್‌ಗಳಲ್ಲಿ ಕಸ ವಿಲೇವಾರಿ ಸಮಸ್ಯೆಗಳು ಬಂದರೆ ನೇರವಾಗಿ ಪರಿಸರ ಎಂಜಿನಿಯರ್‌ ಅಥವಾ ನಗರಸಭೆ ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಬಹುದು. ದೂರುಗಳ ಬಗ್ಗೆ ಗಮನಕ್ಕೆ ಬಂದಿದೆ. ಶೀಘ್ರದಲ್ಲಿ ಪರಿಹರಿಸಲಾಗುತ್ತದೆ.
-ಆನಂದ ಸಿ. ಕಲ್ಲೋಳಿಕರ್‌, ಪೌರಾಯುಕ್ತರು. ನಗರಸಭೆ ಉಡುಪಿ.

ಕಸ ಮನೆಯಲ್ಲೇ ಬಾಕಿ
ಮನೆಯ ಕಸ ಸರಿಯಾಗಿ ವಿಲೇವಾರಿಯಾಗುತ್ತಿಲ್ಲ. ಇದರಿಂದಾಗಿ ಮನೆಯ ಪರಿಸರ ದುರ್ನಾತ ಬೀರುತ್ತಿದೆ. ಮಾಸಿಕ ಶುಲ್ಕ ನೀಡಿಯೂ ಮನೆಯಲ್ಲಿ ಕಸವನ್ನು ಇಟ್ಟುಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಈ ಬಗ್ಗೆ ನಗರ ಸಭೆ ತುರ್ತು ಸ್ಪಂದಿಸಬೇಕು.
– ಅಜ್ಜರಕಾಡು ನಿವಾಸಿ

02 ಕಸ ಸಂಗ್ರಹಕ್ಕೆ ವಾರದಲ್ಲಿ ನಿಗದಿಯಾದ ದಿನಗಳು
30 ರೂ. ಪ್ರತಿ ತಿಂಗಳು ಪ್ರತಿ ಮನೆಯಿಂದ ಸಂಗ್ರಹಿಸುವ ತೆರಿಗೆ

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Brahmavar

Padubidri: ಅಪಘಾತದ ಗಾಯಾಳು ಸಾವು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.