ಸಬ್‌ ರಿಜಿಸ್ಟ್ರಾರ್‌ ಕಚೇರಿಗಳಲ್ಲಿ ಹೊಸ ತಂತ್ರಾಂಶ ಅಳವಡಿಕೆ: ಜನರಲ್ಲಿ ಗೊಂದಲ


Team Udayavani, Jun 17, 2023, 3:52 PM IST

ಸಬ್‌ ರಿಜಿಸ್ಟ್ರಾರ್‌ ಕಚೇರಿಗಳಲ್ಲಿ ಹೊಸ ತಂತ್ರಾಂಶ ಅಳವಡಿಕೆ: ಜನರಲ್ಲಿ ಗೊಂದಲ

ಬ್ರಹ್ಮಾವರ: ಪ್ರಕ್ರಿಯೆ ಸರಳೀಕರಣ ಮತ್ತು ಜನರ ಸಮಯ ಉಳಿತಾಯದ ದೃಷ್ಟಿಯಿಂದ ರಾಜ್ಯದ ಬಹುತೇಕ ಸಬ್‌ ರಿಜಿಸ್ಟ್ರಾರ್‌ ಕಚೇರಿಗಳಲ್ಲಿ ಕಾವೇರಿ 2.0 ತಂತ್ರಾಂಶ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿರುವ 6 ಸಬ್‌ರಿಜಿಸ್ಟ್ರಾರ್‌ ಕಚೇರಿಗಳಲ್ಲಿ ಅಳವಡಿಕೆಯಾಗಿದೆ. ಆದರೆ ಹೊಸ ವ್ಯವಸ್ಥೆಯ ವಿಧಾನಗಳು ದಸ್ತಾವೇಜು ಬರಹಗಾರರಿಗೆ, ಸಾಮಾನ್ಯ ಜನರಿಗೆ ಇನ್ನೂ ಅರಿಯದೆ ಗೊಂದಲದ ಗೂಡಾಗಿದೆ.

ಮೊದಲು ಪ್ರತಿಯೊಂದು ಕೆಲಸದ ಅರ್ಜಿ ಹಾಗೂ ಸಂಬಂಧಪಟ್ಟ ದಾಖಲೆಗಳ ಪ್ರತಿಗಳನ್ನು ಉಪನೊಂದಣಾಧಿಕಾರಿ ಕಚೇರಿಗೆ ನೀಡಲಾಗಿ ಅಲ್ಲಿ ಸಿಬಂದಿ ಅವರೇ ಕಂಪ್ಯೂಟರ್‌ನಲ್ಲಿರುವ ತಂತ್ರಾಂಶಕ್ಕೆ ದಾಖಲಿಸುತ್ತಿದ್ದರು. ಪ್ರಸ್ತುತ ಮಧ್ಯವರ್ತಿಗಳ ಹಾವಳಿ, ಲಂಚಾವತಾರ ತಪ್ಪಿಸಿ ಶೀಘ್ರ ಸೇವೆ ಪಡೆಯುವ ಉದ್ದೇಶದಿಂದ ಜನರೇ ಮಾಹಿತಿ, ಅಂಕ ಅಂಶಗಳನ್ನು ಸಿಟಿಜನ್‌ ಲಾಗ್‌ಇನ್‌ ಮೂಲಕ ಫೀಡ್‌ ಮಾಡಬೇಕಾಗಿದೆ.
ಪಾವತಿಯನ್ನೂ ಆನ್‌ಲೈನ್‌ ಮೂಲಕ ತಲುಪಿಸಬೇಕಾಗಿದೆ. ಭಾವಚಿತ್ರ ಮತ್ತು ಬೆರಳಚ್ಚು ನೀಡಲು ಮಾತ್ರವೇ ಕಚೇರಿಗೆ ಬರುವ ಮೂಲಕ ಜನಸ್ನೇಹಿಗೊಳಿಸುವ ಉದ್ದೇಶ ಹೊಂದಿದೆ. ಆದರೆ ಜನರಿಗೆ ಪ್ರಕ್ರಿಯೆಯ ಹಂತದಲ್ಲಿನ ಗೊಂದಲದಿಂದ ಕಡತಗಳು ಬಾಕಿಯಾಗಿ ಪರದಾಡುತ್ತಿದ್ದಾರೆ. ದಿನಕ್ಕೆ 30ಕ್ಕೂ ಹೆಚ್ಚು ನೋಂದಣಿ ನಡೆಯುತ್ತಿದ್ದ ಕಚೇರಿಯಲ್ಲಿ ಬೆರಳೆಣಿಕೆಯಷ್ಟೇ ನೋಂದಣಿ ನಡೆಯುತ್ತಿದೆ. ಜನರಿಂದ ತುಂಬಿತುಳುಕುತ್ತಿದ್ದ ಸಬ್‌ ರಿಜಿಸ್ಟ್ರಾರ್‌ ಕಚೇರಿಗಳು ಬಿಕೋ ಎನ್ನುತ್ತಿವೆ.

ಜನಸ್ನೇಹಿ ವ್ಯವಸ್ಥೆ
ಹೊಸ ವ್ಯವಸ್ಥೆ ಅಳವಡಿಕೆಯ ಪ್ರಾರಂಭದಲ್ಲಿ ಗೊಂದಲ ಸಹಜ. ಜನರಿಗೆ ತ್ವರಿತ ಗತಿಯಲ್ಲಿ ಸೇವೆ ಹಾಗೂ ಸಮಯದ ಉಳಿತಾಯದ ಸದುದ್ದೇಶದಿಂದ ಜನಸ್ನೇಹಿಯಾದ ಕಾವೇರಿ 2.0 ತಂತ್ರಾಂಶ ಅಳವಡಿಕೆಯಾಗಿದೆ. ಸಾರ್ವಜನಿಕರಿಗೆ ಯಾವುದೇ ಸಲಹೆ, ಮಾಹಿತಿ ಬೇಕಿದ್ದರೂ ತಿಳಿಸಲಾಗುವುದು.
-ಕೀರ್ತಿ ಕುಮಾರಿ, ಹಿರಿಯ ಉಪನೊಂದಾವಣಾಧಿಕಾರಿ, ಬ್ರಹ್ಮಾವರ

ತಂತ್ರಾಂಶ ಸುಧಾರಣೆಗೊಳ್ಳಲಿ
ವ್ಯವಸ್ಥೆಯ ಸುಧಾರಣೆ ದೃಷ್ಟಿಯಿಂದ ಹೊಸ ತಂತ್ರಾಂಶ ಅಳವಡಿಕೆ ಉತ್ತಮ ಕಾರ್ಯ. ಆದರೆ ಇದರಲ್ಲಿನ ಕ್ಲಿಸ್ಟತೆಯಿಂದ ಪ್ರತಿಯೊಬ್ಬರಿಗೂ ತೊಂದರೆಯಾಗಿದೆ. ಇದರಲ್ಲಿರುವ ತೊಡಕುಗಳನ್ನು ನಿವಾರಿಸಿ ಸುಧಾರಿತ ರೂಪದಲ್ಲಿ ಜಾರಿಗೆ ತರುವಂತಾಗಬೇಕು.
-ಎಸ್‌. ರಾಜೇಶ್‌ ಶೆಟ್ಟಿ ಕುಮ್ರಗೋಡು, ದಸ್ತಾವೇಜು ಬರಹಗಾರರು, ಬ್ರಹ್ಮಾವರ

ತುರ್ತು ಗಮನ ಅಗತ್ಯ
ಕಾವೇರಿ 2 ತಂತ್ರಾಂಶದ ಬಗ್ಗೆ ಬಹಳಷ್ಟು ಗೊಂದಲಗಳಿದ್ದು ಜನಸಾಮಾನ್ಯರಿಗೆ ಈ ತಂತ್ರಾಂಶ ಅರ್ಥವಾಗುವುದಿಲ್ಲ. ಹೊಸ ತಂತ್ರಾಂಶ ಅಳವಡಿಸಿದ ನಂತರ ಮೊದಲಿನ ಹಾಗೆ ನೋಂದಣಿ ಆಗುತ್ತಿಲ್ಲ. ಬ್ಯಾಂಕ್‌ ಹಾಗೂ ಸಹಕಾರಿ ಸಂಘಗಳಲ್ಲಿ ಬೇರೆ ಬೇರೆ ಸಾಲಗಳಿಗೆ ಸಂಬಂಧಪಟ್ಟಂತೆ ಅಡಮಾನ ಮಾಡಲು ತೊಂದರೆಯಾಗುತ್ತಿದ್ದು. ವಿಶೇಷವಾಗಿ ಗೃಹ ಸಾಲ ಮತ್ತು ವಿದ್ಯಾಭ್ಯಾಸ ಸಾಲಕ್ಕೆ ಸಂಬಂಧ ಸಂಬಂಧಪಟ್ಟಂತೆ ಸಾರ್ವಜನಿಕರು ತೊಂದರೆಗೊಳಗಾಗಿದ್ದಾರೆ. ಕಾವೇರಿ 2 ತಂತ್ರಾಂಶದ ಬಗ್ಗೆ ಸೂಕ್ತ ಮಾಹಿತಿ ಮತ್ತು ಸರಳೀಕರಣವಾಗಿ ದಸ್ತಾವೇಜು ನೋಂದಣಿ ಮಾಡಲು ಸಂಬಂಧಪಟ್ಟವರು ಕೂಡಲೇ ಗಮನ ಹರಿಸಬೇಕು.
-ಎಚ್‌. ಆನಂದ ಮಡಿವಾಳ, ನ್ಯಾಯವಾದಿ, ಉಡುಪಿ.

ಸರಕಾರದ ಗಮನಕ್ಕೆ
ಕಾವೇರಿ 2.0 ತಂತ್ರಾಂಶದ ಬಗ್ಗೆ ಈಗಾಗಲೇ ತರಬೇತಿ ನೀಡಲಾಗಿದೆ. ಈಗಾಗಲೇ ಆರಂಭವಾದ ಕಾರಣ ಕೆಲವೆಡೆ ಸಮಸ್ಯೆ ಉದ್ಭವಿಸಿದೆ. ಮುಂದಿನ ದಿನದಲ್ಲಿ ಇವೆಲ್ಲ ಸರಿಯಾಗಲಿದೆ. ತಂತ್ರಾಂಶದಲ್ಲಿ ಕೆಲವೊಂದು ಸರಳೀಕರಣ ಮಾಡಿ ಅನುಕೂಲ ಕಲ್ಪಿಸುವ ಬಗ್ಗೆ ಸರಕಾರದ ಗಮನಕ್ಕೆ ತರಲಾಗುವುದು.
– ಶ್ರೀಧರ್‌, ಜಿಲ್ಲಾ ನೋಂದಣಾಧಿಕಾರಿ

ಟಾಪ್ ನ್ಯೂಸ್

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Brahmavar

Padubidri: ಅಪಘಾತದ ಗಾಯಾಳು ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.