Malpe Beach; ಕಡಲು ಪ್ರಕ್ಷುಬ್ಧ: ತೀರದ ನಿವಾಸಿಗಳಿಗೆ ಕಡಲ್ಕೊರೆತ ಭೀತಿ
Team Udayavani, Jun 16, 2023, 3:34 PM IST
ಮಲ್ಪೆ: ಬಿಪರ್ಜಾಯ್ ಚಂಡಮಾರುತದಿಂದಾಗಿ ಕಡಲು ಪ್ರಕ್ಷುಬ್ದಗೊಂಡಿದ್ದು ಬೃಹತ್ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ. ಇದು ಜಿಲ್ಲೆಯ ಕಡಲತೀರದ ಪ್ರದೇಶದಲ್ಲಿ ಕಡಲಕೊರೆತದ ಭೀತಿ ಉಂಟಾಗಿದ್ದು, ಕಡಲ ತಡಿಯ ನಿವಾಸಿಗಳಿಗೆ ಆತಂಕ ಉಂಟು ಮಾಡಿದೆ. ಈ ಬಾರಿ ಕೆಲವೆಡೆ ಕಡಲ ಕೊರೆತ ಕಂಡು ಬಂದರೂ ಕೆಲವು ಕಡೆ ಕಡಿಮೆ ಎನ್ನಲಾಗಿದೆ.
ಈ ಹಿಂದೆ ಮಲ್ಪೆ ಪಡುಕರೆ, ಮಲ್ಪೆ ಬೀಚ್, ಹನುಮಾನ್ನಗರ, ತೊಟ್ಟಂ, ಹೂಡೆ
ಯಲ್ಲಿ ಪ್ರತೀ ವರ್ಷ ಸಾಮಾನ್ಯವಾಗಿ ಕಡಲ್ಕೊರೆತ ಕಾಣಿಸಿಕೊಳ್ಳುತ್ತಿತ್ತು. ಮೂಳೂರು, ಮಟ್ಟು , ಉದ್ಯಾವರದ ಪ್ರದೇಶದಲ್ಲಿ ಈ ಹಿಂದೆ ಹೆಚ್ಚು ಕೊರೆತ ಸಂಭವಿಸುತ್ತಿದ್ದು ಇದೀಗ ಕಳೆದ ಕೆಲವು ವರ್ಷದಿಂದ ತುಸು ಕಡಿಮೆಯಾಗಿದೆ.
ಉದ್ಯಾವರ ಮಟ್ಟು, ಕುತ್ಪಾಡಿ ಪ್ರದೇಶದಲ್ಲಿ 5 ವರ್ಷಗಳ ಹಿಂದೆ ಎಡಿಬಿ ಯೋಜನೆಯಡಿ ಬೇÅಕ್ವಾಟರ್ ರೀತಿ
ಯಲ್ಲಿ 200 ಮೀ. ಅಂತರದಲ್ಲಿ ಸುಮಾರು 20 ಕಡೆ ಗ್ರೆಹನ್ಸ್ ತಡೆಗೋಡೆಯನ್ನು ಮಾಡ
ಲಾಗಿತ್ತು. ಇದೀಗ ಆ ಪ್ರದೇಶದಲ್ಲಿ ಕೊರೆತ ಉಂಟಾಗುವುದು ಕಡಿಮೆ ಎನ್ನಲಾಗಿದೆ.
ಕುತ್ಪಾಡಿಯಿಂದ ಮುಂದಕ್ಕೆ ಬಂದರು ಇಲಾಖೆಯ ವತಿಯಿಂದ ತಲಾ 1.25 ಕೋ. ರೂ. ವೆಚ್ಚದಲ್ಲಿ ಸುಮಾರು 5 ಕಡೆ
75 ಮೀಟರ್ ಉದ್ದದಲ್ಲಿ ತಡೆಗೋಡೆಯನ್ನು ನಿರ್ಮಾಣ ಮಾಡಲಾಗಿದೆ. ಈ ಬಾರಿ ಮೂಳೂರು, ಕಾಪು, ಮರವಂತೆಯಲ್ಲಿ ಸಣ್ಣ ಪ್ರಮಾಣದಲ್ಲಿ ಮತ್ತೆ ಕಡಲ ಕೊರೆತ ಕಾಣಿಸಿಕೊಂಡಿದೆ. ಪ್ರಕೃತಿ ವಿಕೋಪದಡಿ ಇಲ್ಲಿ ತಾತ್ಕಾಲಿಕ ಪರಿಹಾರಿ ಕಲ್ಪಿಸುವ ಯೋಜನೆಯೂ ನಡೆಯಲಿದೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ
Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
D.K,Udupi ಸಿಎನ್ಜಿ ಇಂಧನ ಕೊರತೆ: ಬಂಕ್ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು
Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು