![car](https://www.udayavani.com/wp-content/uploads/2024/07/car-7-415x248.jpg)
ಟೋಲ್ ಸೆಸ್ ಯಾನ ದರ 3 ರೂ. ಹೆಚ್ಚಳ
Team Udayavani, Feb 16, 2017, 3:35 AM IST
![15-LOC-12.jpg](https://www.udayavani.com/wp-content/uploads/2017/02/15/15-LOC-12.jpg)
ಉಡುಪಿ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ರಾಷ್ಟ್ರೀಯ ಹೆದ್ದಾರಿ 66ರ ಸಾಸ್ತಾನ ಮತ್ತು ಹೆಜಮಾಡಿಯಲ್ಲಿ ಟೋಲ್ ಸಂಗ್ರಹ ಪ್ರಾರಂಭಿಸಿದೆ. ಟೋಲ್ ಸಂಗ್ರಹಣೆಯ ಅಧಿಕ ವೆಚ್ಚ ಭರಿಸುವ ಸಲುವಾಗಿ ಟೋಲ್ ಮುಖಾಂತರ ಸಾಗುವ ಪ್ರತಿ ಪ್ರಯಾಣಿಕರಿಂದ 3 ರೂ. ಟೋಲ್ ಸೆಸ್ ಪಡೆಯಲು ನಿರ್ಧರಿಸಲಾಗಿದೆ.
ಖಾಸಗಿ ಬಸ್ಗಳಲ್ಲಿ ಫೆ. 17ರಿಂದ ಪ್ರಯಾಣ ದರವು 3 ರೂ. ಹೆಚ್ಚಳವಾಗಲಿದೆ ಎಂದು ಕೆನರಾ ಬಸ್ ಮಾಲಕರ ಸಂಘದ ಉಪಾಧ್ಯಕ್ಷ ಸದಾನಂದ ಛಾತ್ರ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಸಾಸ್ತಾನದಲ್ಲಿ ಪ್ರತಿ ಟ್ರಿಪ್ಗೆ 195, ಹೆಜಮಾಡಿಯಲ್ಲಿ 160 ರೂ. ಟೋಲ್ ಶುಲ್ಕ ಕಟ್ಟಬೇಕಿದೆ. ಹೀಗಾಗಿ ಟೋಲ್ ಆಗಿ ಮುಂದಕ್ಕೆ ಪ್ರಯಾಣಿಸುವ ಪ್ರತಿ ಪ್ರಯಾಧಿಣಿಕರಿಗೆ 3 ರೂ. ಹೆಚ್ಚುವರಿ ದರ ವಿಧಿಸುವುದು ನಮಗೂ ಅನಿವಾರ್ಯ. ಟೋಲ್ ಶುಲ್ಕವನ್ನು ಪ್ರಯಾಣಿಕರ ಮೇಲೆ ಹಾಕಲು ಸರಕಾರ ಅವಕಾಶ ಮಾಡಿಕೊಟ್ಟಿದೆ. ಅದರಂತೆಯೇ ದರ ಏರಿಸಲಾಗಿದೆ. ಪ್ರಸ್ತುತ ಪ್ರತಿ ಪ್ರಯಾಣಿಕರಿಗೆ 5 ರೂ. ಏರಿಸುವ ಅನಿವಾರ್ಯತೆ ಇದ್ದರೂ 3 ರೂ. ಮಾತ್ರ ಏರಿಕೆ ಮಾಡಲಾಗಿದೆ ಎಂದರು.
ಇತ್ತೀಚೆಗಷ್ಟೇ ಮಂಗಳೂರು-ಉಡುಪಿ-ಕುಂದಾಪುರ-ಕಾರ್ಕಳ ಮಧ್ಯೆ ಸಂಚರಿಸುವ ಖಾಸಗಿ ಬಸ್ಗಳಲ್ಲಿ ದರ ಏರಿಕೆ ಮಾಡಲಾಗಿದೆಯಲ್ಲ? ಜನವರಿಧಿಯಲ್ಲಿ ಉಡುಪಿ-ಮಂಗಳೂರು ನಡುವೆ 55 ರೂ., ಉಡುಪಿ-ಕುಂದಾಪುರಕ್ಕೆ 38 ರೂ. ಇತ್ತು. ಅದನ್ನು ಫೆಬ್ರವರಿಯಾಗುವಾಗ 60 ರೂ., 40 ರೂ.ಗೆ ಏರಿಸಲಾಗಿತ್ತಲ್ಲವೆ? ಮತ್ತೆ ಇನ್ನೊಮ್ಮೆ ದರ ಏರಿಕೆ ಯಾಕೆ ಎಂದು ಪತ್ರಕರ್ತರು ಪ್ರಶ್ನಿಸಿದಾಗ, ಅದು ಸಾಮಾನ್ಯ ಏರಿಕೆ. ಈ ಹಿಂದೆ ಅನುಷ್ಠಾನಿಸಬೇಕಿದ್ದ ದರ ಅದಾಗಿದೆ. ಡೀಸೆಲ್, ತೆರಿಗೆ, ಲೋನ್ ಹಣ ವಿಪರೀತ ಹೆಚ್ಚಳವಾದ ಕಾರಣ ಪ್ರಾಧಿಕಾರ ನಿರ್ಧರಿಸಿದ ದರದಂತೆಯೇ ಜನವರಿ ಕೊನೇ ವಾರದಲ್ಲಿ ಟಿಕೆಟ್ ದರ ಏರಿಕೆ ಮಾಡಲಾಗಿತ್ತು. ಟೋಲ್ ಸೆಸ್ ಸೇರ್ಪಡೆಯಾಗುವ ಕಾರಣ ಫೆ. 17ರಿಂದ ಉಡುಪಿ-ಮಂಗಳೂರಿಗೆ ರೂ. 63 (ಪ್ರಸ್ತುತ ರೂ. 60)., ಉಡುಪಿ-ಕುಂದಾಪುರಕ್ಕೆ ರೂ. 43 (ಪ್ರಸ್ತುತ ರೂ. 40) ಆಗಲಿದೆ ಎಂದರು.
ಸಿಸಿಟಿ – 25,000 ಪ್ರಯಾಣಿಕರು: ಸಿಸಿಟಿ ಆರ್ಎಫ್ಐಡಿ ಕಾರ್ಡ್ ಮೂಲಕ ಖಾಸಗಿ ಬಸ್ಗಳಲ್ಲಿ ಶೇ. 35 ರಿಯಾಯಿತಿಯಲ್ಲಿ ಪ್ರತಿನಿತ್ಯ 25,000 ಮಂದಿ ಪ್ರಯಾಣಿಸುತ್ತಿದ್ದಾರೆ. ಇನ್ನೊಂದು ತಿಂಗಳಲ್ಲಿ ಕ್ಯಾಶ್ ಕಾರ್ಡ್ ಕೂಡ ಜಾರಿಗೆ ತರಲಾಗುವುದು ಎಂದು ಹೇಳಿದರು. ಕೆನರಾ ಬಸ್ ಮಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಕುಯಿಲಾಡಿ ಸುರೇಶ್ ನಾಯಕ್, ಬಸ್ ಮಾಲಕರಾದ ಕಿಶನ್ ಹೆಗ್ಡೆ ಕೊಳ್ಕೆಬೈಲು, ಗಣನಾಥ ಹೆಗ್ಡೆ ಪತ್ರಿಕಾಗೋಷ್ಠಿಯಲ್ಲಿದ್ದರು.
ಟಾಪ್ ನ್ಯೂಸ್
![car](https://www.udayavani.com/wp-content/uploads/2024/07/car-7-415x248.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Screenshot (7) copy](https://www.udayavani.com/wp-content/uploads/2024/07/Screenshot-7-copy-150x83.jpg)
Thekkatte: 5 ಗ್ರಾ.ಪಂ.ಗಳ ಕಸ ವಿಲೇವಾರಿಯೇ ದೊಡ್ಡ ಸವಾಲು!
![Screenshot (3) copy](https://www.udayavani.com/wp-content/uploads/2024/07/Screenshot-3-copy-150x83.jpg)
Kundapura: ಮಕ್ಕಳನ್ನು ಹೊತ್ಕೊಂಡೇ ಹೊಳೆ ದಾಟಿಸಬೇಕು!ಅಮಾಸೆಬೈಲಿನ ಕುಡಿಸಾಲು ಪರಿಸರದ ಸಮಸ್ಯೆ
![Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ](https://www.udayavani.com/wp-content/uploads/2024/07/chirate-1-150x90.jpg)
Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ
![27 ವರ್ಷದಿಂದ ತಲೆಮರೆಸಿಕೊಂಡಿದ್ದ ಅತ್ಯಾಚಾರ ಆರೋಪಿ ಬಂಧನ](https://www.udayavani.com/wp-content/uploads/2024/07/arr-1-150x95.jpg)
27 ವರ್ಷದಿಂದ ತಲೆಮರೆಸಿಕೊಂಡಿದ್ದ ಅತ್ಯಾಚಾರ ಆರೋಪಿ ಬಂಧನ
![Udupi ಕೇಂದ್ರ ಸರಕಾರದ ವಿರುದ್ಧ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ](https://www.udayavani.com/wp-content/uploads/2024/07/CONGRESS-S-150x76.jpg)
Udupi ಕೇಂದ್ರ ಸರಕಾರದ ವಿರುದ್ಧ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
![car](https://www.udayavani.com/wp-content/uploads/2024/07/car-7-150x90.jpg)
Road Mishap: ಕಮರಿಗೆ ಉರುಳಿದ ಕಾರು… ಐದು ಮಕ್ಕಳು ಸೇರಿ ಎಂಟು ಮಂದಿ ಮೃತ್ಯು
![Editorial: ಯುಪಿಎಸ್ಸಿ ಪರೀಕ್ಷಾ ಸುಧಾರಣೆ ಕ್ರಮ: ಸ್ವಾಗತಾರ್ಹ ಹೆಜ್ಜೆ](https://www.udayavani.com/wp-content/uploads/2024/07/Exam-9-150x84.jpg)
Editorial: ಯುಪಿಎಸ್ಸಿ ಪರೀಕ್ಷಾ ಸುಧಾರಣೆ ಕ್ರಮ: ಸ್ವಾಗತಾರ್ಹ ಹೆಜ್ಜೆ
![Chikkamagaluru; ಮಲೆನಾಡು ಭಾಗದಲ್ಲಿ ವಾರದಿಂದ ಕರೆಂಟ್, ನೆಟ್ ವರ್ಕ್ ಇಲ್ಲ! ಜನರ ಪರದಾಟ](https://www.udayavani.com/wp-content/uploads/2024/07/chikka-150x83.jpg)
Chikkamagaluru; ಮಲೆನಾಡು ಭಾಗದಲ್ಲಿ ವಾರದಿಂದ ಕರೆಂಟ್, ನೆಟ್ ವರ್ಕ್ ಇಲ್ಲ! ಜನರ ಪರದಾಟ
![ವಿದೇಶಿ ಪ್ರವಾಸ ಕಥನ 6: ದುಬೈ, ಶಾರ್ಜಾ, ಅಜ್ಮಾನ್ ಪರ್ಯಟನೆ-ಕರಾವಳಿಗರ ಕಲರವ!](https://www.udayavani.com/wp-content/uploads/2024/07/Dubai1-150x84.jpg)
ವಿದೇಶಿ ಪ್ರವಾಸ ಕಥನ 6: ದುಬೈ, ಶಾರ್ಜಾ, ಅಜ್ಮಾನ್ ಪರ್ಯಟನೆ-ಕರಾವಳಿಗರ ಕಲರವ!
![Screenshot (7) copy](https://www.udayavani.com/wp-content/uploads/2024/07/Screenshot-7-copy-150x83.jpg)
Thekkatte: 5 ಗ್ರಾ.ಪಂ.ಗಳ ಕಸ ವಿಲೇವಾರಿಯೇ ದೊಡ್ಡ ಸವಾಲು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.