ಉಡುಪಿ : ಪ್ಯಾರಾಮೆಡಿಕಲ್ಸ್ ಸಮ್ಮೇಳನ
Team Udayavani, Apr 29, 2019, 6:30 AM IST
ಕಟಪಾಡಿ: ಉಡುಪಿ ಧರ್ಮ ಕ್ಷೇತ್ರದ ಆರೋಗ್ಯ ಆಯೋಗದ ವತಿಯಿಂದ ಉಡುಪಿ ಡಯಾಸಿಸ್ ಕ್ರೈಸ್ತ ಧರ್ಮದ ವೈದ್ಯರು, ದಾದಿಯರು, ಪ್ಯಾರಾಮೆಡಿಕಲ್ಸ್ ಮತ್ತು ಆರೋಗ್ಯ ಆಯೋಗದ ಸದಸ್ಯರಿಗೆ ಕಲ್ಯಾಣಪುರ ಮೌಂಟ್ ರೋಜರಿ ಚರ್ಚ್ ಸಭಾಭವನದಲ್ಲಿ ಸಮಾವೇಶ ಎ.28ರಂದು ನಡೆಯಿತು.
ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಉಡುಪಿ ಧರ್ಮಪ್ರಾಂತ್ಯದ ಬಿಷಪ್ ವಂ| ಜೆರಾಲ್ಡ್ ಐಸಾಕ್ ಲೋಬೋ ಬಡರೋಗಿಗಳಿಗಾಗಿ ಸ್ಥಾಪಿಸಿದ ಆರೋಗ್ಯ ನಿಧಿಯನ್ನು ಉದ್ಘಾಟಿಸಿ ಮಾತನಾಡಿ, ಮನುಕುಲದ ಮಾನವೀಯ ಸೇವೆ ಮೂಲಕ ಕ್ರೈಸ್ತರು ಪ್ರಾಪಂಚಿಕವಾಗಿ ಗುರುತಿಸಿಕೊಳ್ಳುವಂತಾಗಿದೆ. ವೈದ್ಯರು, ದಾದಿಯರು ದೇವರಿಗೆ ಪ್ರಿಯವಾದ ನಿಸ್ವಾರ್ಥವಾದ ಸೇವೆ ಕರ್ತವ್ಯವನ್ನಾಗಿಸಿರಿ ಎಂದರು.
ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಯ ನಿರ್ದೇಶಕ ಫಾ| ರಿಚರ್ಡ್ ಕುವೆಲ್ಲೋ ವೈದ್ಯರು, ದಾದಿಯರು, ಪ್ಯಾರಾಮೆಡಿಕ್ಸ್ ಪ್ರೊಫೆಶನಲ್ ಡೈರೆಕ್ಟರಿ “ಡೋನಮ್’ ಅನ್ನು ಬಿಡುಗಡೆಗೊಳಿಸಿ ಸಂದೇಶ ನೀಡಿದರು.
ಸಂಪನ್ಮೂಲ ವ್ಯಕ್ತಿಗಳಾದ ಫಾ| ಪ್ರವೀಣ್ ಲಸ್ರಾದೋ ಮತ್ತು ಡಾ|ಜುಡಿತ್ ಲೋಬೋ ಅವರು ಚಿಕಿತ್ಸೆಯಿಂದ ಆರೈಕೆ ವಿಷಯದ ಮೇಲೆ ವಿಚಾರ ಮಂಡಿಸಿದರು.
ವೇದಿಕೆಯಲ್ಲಿ ಫಾ| ಜೆಸನ್, ಲುವಿಸ್ ಡಿ’ಸೋಜಾ, ಬ್ಯಾಪ್ಟಿಸ್ಟ್ ಡಯಾಸ್, ಫಾ| ಚಾರ್ಲ್ಸ್ ಸಲ್ದಾನಾ ಮತ್ತಿತರರು ಉಪಸ್ಥಿತರಿದ್ದರು.
ಆರೋಗ್ಯ ಆಯೋಗದ ಉಡುಪಿ ಡಯಾಸಿಸ್ ನಿರ್ದೇಶಕ ಡಾ|ಎಡ್ವರ್ಡ್ ಲೋಬೋ ಸ್ವಾಗತಿಸಿದರು. ರೆ|ಫಾ| ಡೆನ್ನಿಸ್ ಡೇಸಾ ಪ್ರಸ್ತಾವನೆಗೈದರು. ಆರೋಗ್ಯ ಆಯೋಗದ ಕಾರ್ಯದರ್ಶಿ ಜೀವನ್ ಲೂವಿಸ್ ವಂದಿಸಿದರು. ಪ್ರತಿಭಾ ಬ್ರಾಗ್ಸ್ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Parappana Agrahara Central Prison; ಸಾಮಾನ್ಯರಂತೆ ದಿನ ಕಳೆದ ರೇವಣ್ಣ
Saudi Arabia; ಭೂಮಿ ನೀಡಲು ಒಪ್ಪದಿದ್ದರೆ ಹತ್ಯೆ: ಬಿಬಿಸಿ ವರದಿ
Hate speech ಪ್ರಚಾರ: ಮೋದಿ ವಿರುದ್ಧ ಕ್ರಮಕ್ಕೆ ಸುಪ್ರೀಂನಲ್ಲಿ ರಿಟ್ ಅರ್ಜಿ
Election result ಅನಿಶ್ಚಿತತೆ: 1,062 ಅಂಕ ಕುಸಿದ ಸೆನ್ಸೆಕ್ಸ್
BJP ಗೆದ್ದರೆ 5 ಲಕ್ಷ ಜನರಿಗೆ ಅಯೋಧ್ಯೆ ರಾಮನ ದರ್ಶನ: ಹಿಮಂತ್ ಬಿಸ್ವಾ