ಅರಾಟೆ ಸೇತುವೆ: ದುರಸ್ತಿ ಕಾಮಗಾರಿ ಆರಂಭ
Team Udayavani, Sep 30, 2020, 8:25 PM IST
ಅರಾಟೆ ಸೇತುವೆಯ ದುರಸ್ತಿ ಕಾಮಗಾರಿ ಆರಂಭಗೊಂಡಿರುವುದು.
ಕುಂದಾಪುರ: ಬಿರುಕು ಬಿಟ್ಟಿರುವ ಬೈಂದೂರು – ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66ರ ಮುಳ್ಳಿಕಟ್ಟೆ ಸಮೀಪದ ಅರಾಟೆ ಸೇತುವೆಯ ದುರಸ್ತಿ ಕಾಮಗಾರಿ ಬುಧವಾರದಿಂದ ಆರಂಭ ಗೊಂಡಿದೆ. ಕಾಮಗಾರಿಯ ಗುತ್ತಿಗೆ ವಹಿಸಿ ಕೊಂಡಿರುವ ಐಆರ್ಬಿ ಸಂಸ್ಥೆಯಿಂದ ಈಗ ದುರಸ್ತಿ ಕೆಲಸ ಶುರುವಾಗಿದೆ.
ಅರಾಟೆಯಲ್ಲಿ ಐಆರ್ಬಿ ಸಂಸ್ಥೆಯಿಂದ ನಿರ್ಮಾಣಗೊಂಡಿರುವ ಹೊಸ ಸೇತುವೆಯ ಮೇಲ್ಭಾಗದಲ್ಲಿ ಕಳೆದ ಸೆ. 26ರಂದು ಬಿರುಕು ಕಾಣಿಸಿಕೊಂಡಿದ್ದು, ಆ ಹಿನ್ನೆಲೆಯಲ್ಲಿ ಸೇತುವೆಯಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ಪರಿಶೀಲನೆಗಾಗಿ ನೇಮಿಸಿದ ತಾಂತ್ರಿಕ ತಜ್ಞರ ಸಮಿತಿಯ ವರದಿಯಂತೆ ಅರಾಟೆ ಸೇತುವೆಯ ಮೇಲ್ಭಾಗದಲ್ಲಿ ವರದಿಯಂತೆ ಸೇತುವೆಯ ಮೂಲ ರಚನೆ ಯಲ್ಲಿ ಯಾವುದೇ ತೊಂದರೆಯಾಗಿಲ್ಲ. ಸೇತುವೆಯ ಮೇಲಾºಗದಲ್ಲಿ ಮಾತ್ರ ಬಿರುಕು ಉಂಟಾಗಿದ್ದು, ಸ್ಪಾನ್ ಜಾಯಿಂಟ್ನಲ್ಲಿ ಅಂತರ ಕಂಡು ಬಂದಿರುವುದರಿಂದ ಅಪಾಯವಿಲ್ಲ. ಹಾಗಾಗಿ ಸೇತುವೆಯ ಮೇಲ್ಭಾಗದಲ್ಲಿ ಹಾಕಲಾದ ಕಾಂಕ್ರೀಟ್ಗಳನ್ನು ಸಂಪೂರ್ಣ ತೆಗೆದು, ಮತ್ತೆ ಹೊಸದಾಗಿ ಅಲ್ಲಿಗೆ ಕಾಂಕ್ರೀಟೀಕರಣ ಮಾಡುವ ಕಾರ್ಯ ಪ್ರಗತಿಯಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Theft; ಕೊಲ್ಲೂರು: ಮಹಿಳೆಯ ಚಿನ್ನ, ನಗದು ಕಳವು
Sand Mining; ಉದ್ಯಾವರ: ಚುನಾವಣ ಚೆಕ್ಪೋಸ್ಟ್ ಬಳಿ ಅಕ್ರಮ ಮರಳು ಸಾಗಾಟ ಪತ್ತೆ
ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ
Udupi-Chikmagalur Poll: ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿ- ಇಂದು ಸಾರ್ವಜನಿಕ ಸಭೆ
ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ