![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-415x252.jpg)
ಪ್ರಗತಿಯಲ್ಲಿ ಬೋಳ್ಕಟ್ಟೆ – ಕಂಡ್ಲೂರು ರಸ್ತೆ ಕಾಮಗಾರಿ
Team Udayavani, May 29, 2020, 5:37 AM IST
![ಪ್ರಗತಿಯಲ್ಲಿ ಬೋಳ್ಕಟ್ಟೆ – ಕಂಡ್ಲೂರು ರಸ್ತೆ ಕಾಮಗಾರಿ](https://www.udayavani.com/wp-content/uploads/2020/05/Road-620x373.jpg)
ಬಸ್ರೂರು: ಬೋಳ್ಕಟ್ಟೆ -ಕಂಡ್ಲೂರು ರಸ್ತೆಯ ಕಾಂಕ್ರಿಟೀಕರಣ ಕಾಮಗಾರಿ ಪ್ರಗತಿಯಲ್ಲಿದ್ದು, 45 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ.
ಗುಲ್ವಾಡಿ ವೆಂಟೆಡ್ ಡ್ಯಾಮ್ನಿಂದ ಮಾವಿನ ಕಟ್ಟೆಯವರೆಗೆ ಈಗಾಗಲೇ 4 ಕಿ.ಮೀ.ರಸ್ತೆಗೆ ಕಾಂಕ್ರೀಟ್ ಹಾಕಲಾಗಿದೆ. ಮಾವಿನಕಟ್ಟೆಯಿಂದ ತುಸು ಹಿಂದೆ ಬೋಳ್ಕಟ್ಟೆ ಕ್ರಾಸ್ನಿಂದ ಸೌಕೂರು ಮತ್ತು ಕಂಡ್ಲೂರಿಗೆ ಹೋಗುವ ರಸ್ತೆಗೆ ಬೈಂದೂರು ಶಾಸಕ ಬಿ.ಎಮ್.ಸುಕುಮಾರ ಶೆಟ್ಟಿ ಅವರ ಮುತುವರ್ಜಿಯಲ್ಲಿ 45 ಲಕ್ಷ ರೂ. ಅನುದಾನ ಮಂಜೂರಾಗಿದೆ. ಸುಮಾರು ನಾಲ್ಕು ಕಿ.ಮೀ. ಉದ್ದದ ಈ ರಸ್ತೆಯ ಕಾಮಗಾರಿ ಈಗ ಪ್ರಗತಿಯಲ್ಲಿದೆ.
ಆದರೆ ಬೋಳ್ಕಕಟ್ಟೆಯ ತಿರುವಿನಿಂದ ಕಾಂಕ್ರೀಟ್ ಹಾಕಲಾದ ಕಂಡೂÉರು ರಸ್ತೆಯಲ್ಲಿ ತುಸು ಮುಂದೆ ಹೋದರೆ ಸೌಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಹೋಗುವ ಒಂದು ತಿರುವಿದೆ. ಸುಮಾರು 200 ಮೀ. ದೂರದ ಈ ರಸ್ತೆಯಲ್ಲಿ ಜಲ್ಲಿಕಲ್ಲುಗಳು ಎದ್ದು ಬಂದಿದ್ದು, ಭಕ್ತರಿಗೆ ಸಂಚಾರ ಅಸಾಧ್ಯವಾಗಿದೆ. ಸೌಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಕಂಡೂÉರು ಮಾರ್ಗವಾಗಿ ಹೋಗು ವವರಿಗೆ ಈ ನೂತನ ರಸ್ತೆಯಿಂದ ಅನು ಕೂಲವಾಗಲಿದೆ.
ಮಾವಿನಕಟ್ಟೆಯಿಂದ ಸೌಕೂರು ದೇವಸ್ಥಾನಕ್ಕೆ ಹೋಗುವ ರಸ್ತೆಗೆ ಈಗಾಗಲೇ ಕಾಂಕ್ರೀಟ್ ಹಾಕಲಾಗಿದೆ. ಈ ಮಾರ್ಗದಲ್ಲಿ ಬಸ್ ಸಂಚಾರ ಮಾತ್ರ ಇನ್ನೂ ಆರಂಭವಾಗಿಲ್ಲ. ಮಾತ್ರವಲ್ಲ ಈಗ ನಿರ್ಮಾಣವಾಗುತ್ತಿರುವ ಬೋಳ್ಕಕಟ್ಟೆ- ಕಂಡ್ಲೂರು ರಸ್ತೆಯಲ್ಲಿಯೂ ಬಸ್ ಸಂಚಾರ ಆರಂಭವಾದರೆ ಸೌಕೂರು ದೇವಸ್ಥಾನಕ್ಕೆ ಹೋಗುವ ಭಕ್ತರಿಗೆ ಅನುಕೂಲವಾಗಲಿದೆ. ಕುಂದಾಪುರದಿಂದ ಮಾವಿನಕಟ್ಟೆಯ ಮೂಲಕ ಗುಲ್ವಾಡಿಗೆ ಹೋಗುವ ಬಸ್ ಒಂದು ಈಗಾಗಲೇ ಈ ಮಾರ್ಗದಲ್ಲಿ ಸಂಚರಿಸುತ್ತಿದೆ. ಮುಂದೆ ಬಸ್ ಮಾವಿನಕಟ್ಟೆಯಿಂದ ಸೌಕೂರು ದೇವಸ್ಥಾನದವರಗೆ ಓಡಿಸಿದರೆ ಭಕ್ತರಿಗೆ ಅನುಕೂಲವಾಗುತ್ತದೆ ಎನ್ನುವುದು
ಜನರ ಅಭಿಪ್ರಾಯ.
ಬಸ್ ಸಂಚರಿಸಲಿ
ನಾನು ಬೋಳ್ಕಕಟ್ಟೆಯ ನಿವಾಸಿಯಾಗಿದ್ದು, ಈಗಾಗಲೇ ಮಾವಿನಕಟ್ಟೆಯಿಂದ ಗುಲ್ವಾಡಿಗೆ ಬಸ್ ಸಂಚರಿಸುತ್ತಿದ್ದು ಈಗ ಲಾಕ್ ಡೌನ್ ಕಾರಣ ನಿಂತಿದೆ. ಈ ಬಸ್ ಸೌಕೂರಿನವರೆಗೂ ಸಂಚರಿಸಿದರೆ ಇಲ್ಲಿಗೆ ಬರುವ ಭಕ್ತರಿಗೆ ಅನುಕೂಲವಾಗುತ್ತದೆ. ಬೋಳ್ಕಕಟ್ಟೆ- ಕಂಡ್ಲೂರು ರಸ್ತೆ ಕಾಮಗಾರಿ ಪೂರ್ಣವಾದ ಮೇಲೆ ಈ ಮಾರ್ಗದಲ್ಲೂ ಬಸ್ ಸಂಚರಿಸಿದರೆ ಸೌಕೂರಿಗೆ ಬರುವ ಭಕ್ತರಿಗೆ ಮತ್ತಷ್ಟು ಅನುಕೂಲವಾಗುತ್ತದೆ.
-ನಾಗರಾಜ ಪೂಜಾರಿ, ಬೋಳ್ಕಕಟ್ಟೆ ನಿವಾಸಿ.
ಟಾಪ್ ನ್ಯೂಸ್
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-415x252.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-150x91.jpg)
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
![Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ](https://www.udayavani.com/wp-content/uploads/2024/07/Vidhana-Soudha-24-150x100.jpg)
Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ
![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-150x100.jpg)
Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ
![Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!](https://www.udayavani.com/wp-content/uploads/2024/07/Pilikula-Biological-150x91.jpg)
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
![1-aaasdeqweqw](https://www.udayavani.com/wp-content/uploads/2024/07/1-aaasdeqweqw-150x100.jpg)
India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್ ಯುಗಾರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.