Bus; ವಾಯವ್ಯ ಸಾರಿಗೆಯಲ್ಲಿ ಯಶಸ್ವಿ ಜಾರಿ; ಕೆಎಸ್ಸಾರ್ಟಿಸಿ ಇನ್ನೂ ತಲುಪದ ಡಿಜಿಟಲ್‌ ಪಾವತಿ


Team Udayavani, Feb 25, 2024, 7:20 AM IST

Bus; ವಾಯವ್ಯ ಸಾರಿಗೆಯಲ್ಲಿ ಯಶಸ್ವಿ ಜಾರಿ; ಕೆಎಸ್ಸಾರ್ಟಿಸಿ ಇನ್ನೂ ತಲುಪದ ಡಿಜಿಟಲ್‌ ಪಾವತಿ

ಕುಂದಾಪುರ: ರಾಜ್ಯ ಸಾರಿಗೆ ಸಂಸ್ಥೆಗಳಲ್ಲಿ ಡಿಜಿಟಲ್‌ ಪಾವತಿಗೆ ಕ್ರಮ ಕೈಗೊಳ್ಳಲಾಗು ತ್ತಿದೆ ಎಂದು ಕಳೆದ ಅಧಿವೇಶನದಲ್ಲಿ ಸಾರಿಗೆ ಸಚಿವ ರಾಮ ಲಿಂಗಾರೆಡ್ಡಿ ಹೇಳಿದ್ದು, ಬಜೆಟ್‌ ಅಧಿವೇಶನ ಅಂತ್ಯಗೊಳ್ಳುತ್ತ ಬಂದರೂ ಎಲ್ಲೆಡೆ ಜಾರಿಯಾಗಿಲ್ಲ.

ಪ್ರಸ್ತುತ ವಾಯವ್ಯ ಸಾರಿಗೆಯಲ್ಲಿ ಬಹುತೇಕ ಅನುಷ್ಠಾನ ಹಂತ ತಲುಪಿದೆ. ಆದರೆ ಅತ್ಯಧಿಕ ಬಸ್‌ಗಳನ್ನು ಹೊಂದಿರುವ ಕೆಎಸ್ಸಾರ್ಟಿಸಿ, ಕಲ್ಯಾಣ ಸಾರಿಗೆ ಇತ್ಯಾದಿ ವಿಭಾಗಗಳಲ್ಲಿ ಇನ್ನೂ ಈ ಹೊಸ ಕ್ರಮ ಜಾರಿಯಾಗಿಲ್ಲ.

ಫೋನ್‌ ಪೇ
ಹುಬ್ಬಳ್ಳಿ ಭಾಗದಿಂದ ಮಂಗಳೂರು ಕಡೆಗೆ ಬರುವ ವಾಯವ್ಯ ಸಾರಿಗೆ ಕಂಡಕ್ಟರ್‌ಗಳನ್ನು ಗಮನಿಸಿದರೆ, ಕ್ಯುಆರ್‌ ಕೋಡ್‌ ಇರುವ ಪಟ್ಟಿಯನ್ನು ಐಡಿ ಕಾರ್ಡ್‌ನಂತೆ ಕೊರಳಿಗೆ ನೇತು ಹಾಕಿಕೊಂಡಿರುತ್ತಾರೆ. ಇದರಲ್ಲಿ ನಿರ್ವಾಹಕನ ಹೆಸರು, ದೂರವಾಣಿ ಸಂಖ್ಯೆ, ಹುದ್ದೆ ಸಂಖ್ಯೆ ವಿವರ ಹಾಗೂ ಕ್ಯುಆರ್‌ ಕೋಡ್‌ ಇರುತ್ತದೆ. ಪ್ರಯಾಣಿಕರು ಇದನ್ನು ಸ್ಕ್ಯಾನ್‌ ಮಾಡಿ ಹಣ ಪಾವತಿಸಿ ಟಿಕೆಟ್‌ ಪಡೆಯಬಹುದು. ಫೋನ್‌ ಪೇ ಆ್ಯಪ್‌ ಮೂಲಕ ಹಣ ಖಾತೆಗೆ ಜಮೆಯಾದ ಕುರಿತು ನಿರ್ವಾಹಕನ ಮೊಬೈಲ್‌ಗೆ ಅಕ್ಷರ ಸಂದೇಶ ಹಾಗೂ ಧ್ವನಿ ಸಂದೇಶ ಬರುತ್ತದೆ.
ಯಶಸ್ವಿ ಪ್ರಯೋಗ: ಸತತ ಮೂರು ತಿಂಗಳ ಕಾಲ ವಾಯವ್ಯ ಸಾರಿಗೆಯ 415 ಬಸ್‌ಗಳಲ್ಲಿ ನಡೆಸಿದ ಪ್ರಯೋಗ ಯಶಸ್ವಿಯಾಗಿದೆ. ದೀರ್ಘ‌ ಮಾರ್ಗದಲ್ಲಿ ಚಲಿಸುವ ಬಸ್‌ಗಳನ್ನು ಗುರುತಿಸಿ 5 ಡಿಪೋಗಳ ಮೂಲಕ ಇದನ್ನು ಜಾರಿಗೊಳಿಸಲಾಗಿತ್ತು. ಸೆಪ್ಟಂಬರ್‌ನಲ್ಲಿ ಪ್ರಾಯೋಗಿಕವಾಗಿ ವಾಯುವ್ಯ ಸಾರಿಗೆ ಆರಂಭಿಸಿತ್ತು. ಉತ್ತಮ ಪ್ರತಿಕ್ರಿಯೆ ಬಂದಿದ್ದರಿಂದ ನವೆಂಬರ್‌ನಲ್ಲಿ ಇನ್ನಷ್ಟು ಡಿಪೋಗಳಿಗೆ ವಿಸ್ತರಿಸಲಾಗಿತ್ತು. ಇಲ್ಲಿನ ಬಸ್‌ಗಳಲ್ಲಿ ಸುಮಾರು 1.2 ಲಕ್ಷ ವಹಿವಾಟುಗಳು ಡಿಜಿಟಲ್‌ ಮೂಲಕ ಆಗಿ ಒಟ್ಟು 2.3 ಕೋ.ರೂ. ನೇರವಾಗಿ ವಾಯವ್ಯ ಸಾರಿಗೆ ಬ್ಯಾಂಕ್‌ ಖಾತೆಗೆ ಜಮೆಯಾಗುತ್ತಿದೆ. ಈಗ ಕಿತ್ತೂರು ಕರ್ನಾಟಕ ಭಾಗದ ಆರು ಜಿಲ್ಲೆಗಳಿಗೆ ವಿಸ್ತರಿಸಿ 4,581 ಬಸ್‌ಗಳಲ್ಲೂ ಸದ್ಯದಲ್ಲೇ ಡಿಜಿಟಲ್‌ ಪೇಮೆಂಟ್‌ ವ್ಯವಸ್ಥೆ ಬರಲಿದೆ.

ಎಲ್ಲೆಲ್ಲಿ?: ಹುಬ್ಬಳ್ಳಿಯಲ್ಲಿ ಫೆ. 3ರಂದು ಸಚಿವರಿಂದ ಹೊಸ ಪದ್ಧತಿ ಉದ್ಘಾಟನೆಯಾಯಿತು. ಬಳಿಕ ಹುಬ್ಬಳ್ಳಿ ಗ್ರಾಮಾಂತರದ 5 ಡಿಪೋಗಳಲ್ಲೂ ಆರಂಭಿಸಲಾಗಿದೆ. ಬೆಳಗಾವಿಯ 1 ಮತ್ತು 3ನೆ ಡಿಪೋ, ಬೈಲಹೊಂಗಲ, ಧಾರವಾಡ, ಹಳಿಯಾಳ, ಚಿಕ್ಕೋಡಿ, ನಿಪ್ಪಾಣಿ, ಗೋಕಾಕ, ಗದಗ, ಶಿರಸಿ ಡಿಪೋಗಳ ಬಸ್‌ಗಳಲ್ಲಿ ಅಳವಡಿಸಿದ್ದು, ಭಟ್ಕಳ, ಕುಮಟಾ ಡಿಪೋದಲ್ಲೂ ಜಾರಿಯಾಗಲಿದೆ. ಡಿಜಿಟಲ್‌ ಪಾವತಿಗೆ ಪ್ರಯಾಣಿಕರಿಂದ ಈವರೆಗೂ ಒಳ್ಳೆಯ ಸ್ಪಂದನೆ ಇದೆ ಎನ್ನುತ್ತಾರೆ ವಾಯುವ್ಯ ಸಾರಿಗೆ ಮುಖ್ಯ ಸಂಚಾರ ವ್ಯವಸ್ಥಾಪಕ ಮಹಂತೇಶ್‌.
ಬಿಎಂಟಿಸಿ: ಡಿಜಿಟಲ್‌ ವ್ಯವಸ್ಥೆಯಲ್ಲಿ ಬಿಎಂಟಿಸಿ ಮುಂಚೂಣಿಯಲ್ಲಿದೆ. ಅಲ್ಲಿ ಹೆಚ್ಚಿನ ಪ್ರಯಾಣಿ ಕರು ಈ ವ್ಯವಸ್ಥೆಯನ್ನು ಬಳಸಿ ಕೊಳ್ಳುತ್ತಿದ್ದು, ಪ್ರತೀ ತಿಂಗಳು 4.5 ಕೋಟಿ ರೂ. ಡಿಜಿಟಿಲ್‌ ಪೇಮೆಂಟ್‌ ಮೂಲಕ ಬಂದರೆ, 13ರಿಂದ 18 ಕೋಟಿ ರೂ. ನೇರ ಪಾವತಿ ಆಗುತ್ತಿದೆ. ಸಾಮಾನ್ಯ ಟಿಕೆಟ್‌ ಜತೆಗೆ ಪಾಸ್‌ಗಳನ್ನು ಹೊಸ ವ್ಯವಸ್ಥೆ ಮೂಲಕ ಖರೀದಿಸಲಾಗುತ್ತಿದೆ.

ಕೆಎಸ್ಸಾರ್ಟಿಸಿಯಲ್ಲಿ ಸಿದ್ಧತೆ: ಹೆಚ್ಚು ಬಸ್‌ ರೂಟ್‌ಗಳನ್ನು ಹೊಂದಿರುವ ಕೆಎಸ್ಸಾರ್ಟಿಸಿ ಇನ್ನೂ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈಗಿರುವ ಟಿಕೆಟ್‌ ವಿತರಣಾ ಯಂತ್ರದಲ್ಲೇ ಹೊಸ ವ್ಯವಸ್ಥೆಯನ್ನು ಅಳವಡಿಸಲು ಯೋಚಿ ಸುತ್ತಿದೆ. ಸದ್ಯ 89 ಟಿಕೆಟ್‌ ಯಂತ್ರಗಳಲ್ಲಿ ಡಿಜಿಟಲ್‌ ಪೇಮೆಂಟ್‌ ವ್ಯವಸ್ಥೆಯಿದೆ. ಇದನ್ನು ಹಂತ ಹಂತವಾಗಿ ವಿಸ್ತರಿಸುವ ಆಲೋಚನೆ ಇದೆ ಎಂಬುದು ಅಧಿ ಕಾರಿಗಳ ಸ್ಪಷ್ಟನೆ. ಕಲ್ಯಾಣ ಕರ್ನಾಟಕ ಸಾರಿಗೆ ಕೂಡ ಸಿದ್ಧತೆಯ ಹಂತದಲ್ಲಿದೆ. ಬ್ಯಾಂಕ್‌ಗಳೊಂದಿಗೆ ಮೊದಲ ಹಂತವಾಗಿ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ. ಮುಂದಿನ ವರ್ಷದಲ್ಲಿ ಕಲ್ಯಾಣ ಕರ್ನಾಟಕ ಸಾರಿಗೆ ಬಸ್‌ಗಳಲ್ಲೂ ಹೊಸ ವ್ಯವಸ್ಥೆ ಜಾರಿಗೊಳ್ಳಬಹುದು.

ಬಸ್‌ಗಳು
ಕೆಎಸ್ಸಾರ್ಟಿಸಿ – 8,343
ಬಿಎಂಟಿಸಿ-6,222
ವಾಯವ್ಯ ಸಾರಿಗೆ- 4,857
ಕಲ್ಯಾಣ ಸಾರಿಗೆ- 4,854
ಒಟ್ಟು-24,276
(ಫೆ. 10ರ ವರೆಗಿನ ಅಂಕಿಅಂಶ)

ಕೆಎಸ್ಸಾರ್ಟಿಸಿಯಲ್ಲಿ ಡಿಜಿಟಲ್‌ ಪಾವತಿ ಇನ್ನೂ ಆರಂಭವಾಗಿಲ್ಲ. ಸದ್ಯದಲ್ಲಿಯೇ ಆರಂಭಿಸಲು ಸಿದ್ಧತೆ ನಡೆಸಲಾಗುತ್ತಿದೆ.
– ಜೆ. ಆಂಟನಿ ಜಾರ್ಜ್‌
ಮುಖ್ಯ ಸಂಚಾರ ವ್ಯವಸ್ಥಾಪಕರು, ಕೆಎಸ್ಸಾರ್ಟಿಸಿ, ಬೆಂಗಳೂರು

– ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Anegudde Temple: ಭಕ್ತರ ಸಂಖ್ಯೆ ಹೆಚ್ಚಳ; ವಿಶೇಷ ಪಾನಕ ವಿತರಣೆ 

Anegudde Temple: ಭಕ್ತರ ಸಂಖ್ಯೆ ಹೆಚ್ಚಳ; ವಿಶೇಷ ಪಾನಕ ವಿತರಣೆ 

Thekkatte: ಕಾರು ಮರಕ್ಕೆ ಢಿಕ್ಕಿ; ಯುವತಿ ಸ್ಥಳದಲ್ಲೇ ಸಾವು, ನಾಲ್ವರಿಗೆ ಗಂಭೀರ ಗಾಯ

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.