ಕೊಲ್ಲೂರು ದೇಗುಲದ ಆನೆ ಇಂದಿರಾ ಸಾವು
Team Udayavani, Aug 14, 2019, 12:26 AM IST
ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಆನೆ ಇಂದಿರಾ ಅಸೌಖ್ಯದಿಂದ ಮಂಗಳವಾರ ರಾತ್ರಿ ಮೃತಪಟ್ಟಿದೆ.
ಕಳೆದ ಮೂರು ದಿನಗಳ ಹಿಂದೆ ಆನೆಗೆ ಜ್ವರ ಬಾಧಿಸಿತ್ತು. ಸ್ಥಳೀಯವಾಗಿ ಔಷಧೋಪಚಾರ ಮಾಡಿದರೂ ಜ್ವರ ಕಡಿಮೆಯಾಗದೆ ಉಲ್ಬಣಗೊಂಡ ಕಾರಣ ಮಂಗಳವಾರ ಸಕ್ರೆಬೈಲ್ನ ಆನೆ ವೈದ್ಯ ಡಾ| ವಿನಯ ಅವರನ್ನು ಕರೆಸಿ ಚಿಕಿತ್ಸೆ ನೀಡಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದ ಆನೆ ರಾತ್ರಿ ವೇಳೆಗೆ ಕೊನೆಯುಸಿರೆಳೆಯಿತು.
ಈ ಆನೆಯನ್ನು 22 ವರ್ಷಗಳ ಹಿಂದೆ ಬಾಳೆಹೊನ್ನೂರಿನ ಭಕ್ತರೋರ್ವರು ದೇಗುಲಕ್ಕೆ ಕಾಣಿಕೆ ರೂಪದಲ್ಲಿ ಅರ್ಪಿಸಿದ್ದರು. ಪ್ರಸ್ತುತ ಆನೆಗೆ 62 ವರ್ಷಗಳಾಗಿದ್ದು, ದೇಗುಲದಿಂದ ನಾಲ್ಕೈದು ಕಿ.ಮೀ. ದೂರದ ಕಲ್ಯಾಣಿ ಗುಡ್ಡೆಯಲ್ಲಿ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿತ್ತು.