ಮನೆ, ದೇವಾಲಯಕ್ಕಷ್ಟೇ ಸೀಮಿತ ಗಣಪತಿ ಹಬ್ಬ;  ಗಣೇಶ ಮೂರ್ತಿಗಳಿಗೆ ಕುಸಿದ ಬೇಡಿಕೆ


Team Udayavani, Aug 21, 2020, 4:59 AM IST

ಮನೆ, ದೇವಾಲಯಕ್ಕಷ್ಟೇ ಸೀಮಿತ ಗಣಪತಿ ಹಬ್ಬ;  ಗಣೇಶ ಮೂರ್ತಿಗಳಿಗೆ ಕುಸಿದ ಬೇಡಿಕೆ

ಗಣಪತಿ ವಿಗ್ರಹ ತಯಾರಿಕೆ.

ಕುಂದಾಪುರ: ಗಣೇಶ ಚತುರ್ಥಿ ಹಬ್ಬಕ್ಕೆ ನಾಲ್ಕು ದಿನಗಳ ಮೊದಲು ರಾಜ್ಯ ಸರಕಾರ ಸಾರ್ವಜನಿಕ ಚೌತಿ ಆಚರಣೆಗೆ ಅನುಮತಿ ನೀಡಿದ ಕಾರಣ ಪೆಂಡಾಲ್‌ಗ‌ಳಲ್ಲಿ ಸಾರ್ವಜನಿಕ ಉತ್ಸವ ಆಚರಣೆಯೇ ಈ ಬಾರಿ ಅನುಮಾನ. ಮನೆಗಳಲ್ಲಿ ಹಾಗೂ ದೇವಾಲಯಗಳಲ್ಲಷ್ಟೇ ಆಚರಣೆಗೆ ಸೀಮಿತವಾದಂತಿದೆ. ವಿನಾಯಕನ ವಿಗ್ರಹಕ್ಕೂ ಕಳೆದ ವರ್ಷದಷ್ಟು ಬೇಡಿಕೆ ಇಲ್ಲ. ಹಿಂದಿನ ವರ್ಷಗಳಿಗಿಂತ ಶೇ. 40ರಷ್ಟು ವಿಗ್ರಹ ತಯಾರಿಕೆ ಇಳಿಮುಖಗೊಂಡಿದೆ.

ಆದೇಶ
ಪ್ರತಿ ವರ್ಷ ನಾಗರ ಪಂಚಮಿಯಂದು ಗಣಪತಿಯ ಪೀಠ, ಮಣೆಯನ್ನು ವಿಗ್ರಹ ರಚನೆಕಾರರಿಗೆ ನೀಡಿ ಭಕ್ತರ ಆಶಯದಂತೆ ವಿಗ್ರಹಗಳ ರಚನೆ ನಡೆಯುತ್ತದೆ. ಈ ಬಾರಿ ಸಾರ್ವಜನಿಕ ಆಚರಣೆಗೆ ಸರಕಾರ ಅನುಮತಿ ಕೊಡದಿದ್ದ ಕಾರಣ ವಿಗ್ರಹ ತಯಾರಿಗೆ ಆದೇಶಗಳೇ ಬಂದಿರಲಿಲ್ಲ. ದೇವಾಲಯ, ಮನೆಗಳಲ್ಲಿ ಪೂಜಿಸುವ ಗಣಪತಿ ವಿಗ್ರಹಗಳಿ ಗಷ್ಟೇ ಬೇಡಿಕೆ ಬಂದಿತ್ತು.

8-9 ದೇಗುಲ ಮಾತ್ರ
ಕುಂದಾಪುರದ ವಸಂತ ಗುಡಿಗಾರ್‌ ಅವರು ಕಳೆದ 39 ವರ್ಷಗಳಿಂದ ವೆಂಕಟರಮಣ ದೇವಸ್ಥಾನ ರಸ್ತೆ ಬಳಿಯ ಕಟ್ಟಡವೊಂದರಲ್ಲಿ ಗಣಪತಿ ವಿಗ್ರಹ ತಯಾರಿಸುತ್ತಿದ್ದಾರೆ. ಪ್ರತಿ ವರ್ಷ 90ಕ್ಕೂ ಅಧಿಕ ಪರಿಸರಸ್ನೇಹಿ ಗಣಪತಿ ವಿಗ್ರಹವನ್ನು ತಯಾರಿಸುತ್ತಿದ್ದಾರೆ. ಆದರೆ ಈ ಬಾರಿ 69 ವಿಗ್ರಹಗಳನ್ನು ತಯಾರಿಸಲಾಗುತ್ತಿದೆ. ಹಿಂದೆ 15-20 ಸಾರ್ವಜನಿಕ ಗಣೇಶೋತ್ಸವ ಸಮಿತಿಗಳಿಂದ ಬೇಡಿಕೆ ಬರುತ್ತಿತ್ತು. ಈ ಬಾರಿ ಮಹಾಂಕಾಳಿ, ಕುಂದೇಶ್ವರ, ರಾಮಮಂದಿರ, ಹೆಮ್ಮಾಡಿ, ಹೀಗೆ 8-9 ದೇವಸ್ಥಾನಗಳಿಂದ ಬೇಡಿಕೆ ಬಂದಿದೆ. ರಾತ್ರಿ ಹಗಲು 6-7 ಜನ ಕಾರ್ಯನಿರ್ವಹಿಸುತ್ತಿದ್ದಾರೆ. ಕಡಿಮೆ ಅವಧಿಯಾದ ಕಾರಣ ಹೊಸ ವಿನ್ಯಾಸದ ವಿಗ್ರಹ ಮಾಡಿಲ್ಲ. ಭಕ್ತರ ಬೇಡಿಕೆಯ ಎತ್ತರದ ವಿಗ್ರಹ ತಯಾರಿಸಲಾಗಿದೆ. ಸರಕಾರ 2, 4 ಅಡಿಗಳ ಮಿತಿ ಇಟ್ಟಿರುವುದು ಸಂಪ್ರದಾಯದ ಆಚರಣೆ ನಿಟ್ಟಿನಲ್ಲಿ ಸರಿಯಲ್ಲ ಎನ್ನುತ್ತಾರೆ ವಸಂತ ಗುಡಿಗಾರ್‌.

ಬೇಡಿಕೆ ಕಡಿಮೆ
ಹೊಸಂಗಡಿಯ ಎಚ್‌. ಲಕ್ಷ್ಮೀನಾರಾಯಣ ಮಲ್ಯ ಅವರ ಕುಟುಂಬ ಸುಮಾರು 8 ದಶಕ ಗಳಿಗೂ ಹೆಚ್ಚು ಕಾಲದಿಂದ ಗಣೆೇಶ ಮೂರ್ತಿ ತಯಾರಿಸುವ ಕುಲಕಸುಬನ್ನಾಗಿಸಿಕೊಂಡಿದೆ. ಆದರೆ ಈ ಬಾರಿ ವಿಗ್ರಹ ರಚನೆಗೆ ಅಷ್ಟೇನೂ ಬೇಡಿಕೆ ಇದ್ದಂತಿಲ್ಲ. ಕಳೆದ ವರ್ಷ 22 ಗಣಪನ ವಿಗ್ರಹಗಳನ್ನು ತಯಾರಿಸಿದ್ದೆ. ಈ ಸಲ ಈ ವರೆಗೆ 12 ವಿಗ್ರಹಗಳಿಗೆ ಬೇಡಿಕೆ ಬಂದಿದೆ. ಸಾರ್ವಜನಿಕ ಆಚರಣೆ ಬಗ್ಗೆ ಗೊಂದಲ ಇರುವುದರಿಂದ ಬೇಡಿಕೆ ಕಡಿಮೆಯಿದೆ ಎನ್ನುತ್ತಾರೆ ಅವರು.

ಯಾವ ವರ್ಷ ಎಷ್ಟೆಷ್ಟು?
ಕುಂದಾಪುರ ಉಪ ವಿಭಾಗದಲ್ಲಿ ಕಳೆದ ವರ್ಷ ಹಾಗೂ ಅದಕ್ಕೂ ಹಿಂದಿನ ವರ್ಷ ಒಟ್ಟು 179 ಕಡೆಗಳಲ್ಲಿ ಸಾರ್ವಜನಿಕ ಗಣೇಶೋತ್ಸವ ನಡೆದಿತ್ತು. ಪೊಲೀಸ್‌ ಠಾಣೆಗಳಾದ ಕುಂದಾಪುರ ನಗರ – 37, ಕುಂದಾಪುರ ಗ್ರಾಮಾಂತರ – 22, ಗಂಗೊಳ್ಳಿ – 30, ಬೈಂದೂರು – 45, ಕೊಲ್ಲೂರು – 14, ಶಂಕರನಾರಾಯಣ – 30 ಹಾಗೂ ಅಮಾಸೆಬೈಲು – 8 ಕಡೆಗಳಲ್ಲಿ ಆಚರಿಸಲಾಗಿತ್ತು.

ಮನೆ ಗಣಪನಿಗೆ ಬೇಡಿಕೆ
ಸುಮಾರು 25 ವರ್ಷಗಳಿಂದ ಗಣಪನ ವಿಗ್ರಹ ತಯಾರಿಸುತ್ತಿದ್ದು, ಕಳೆದ ಬಾರಿ 79 ವಿಗ್ರಹಗಳನ್ನು ತಯಾರಿಸಿದ್ದೆವು. ಅದರಲ್ಲಿ 16 ಸಾರ್ವಜನಿಕ ವಿಗ್ರಹಗಳಿದ್ದವು. ಆದರೆ ಈ ಬಾರಿ ಈ ವರೆಗೆ 10 ವಿಗ್ರಹಗಳಿಗಷ್ಟೇ ಬೇಡಿಕೆ ಬಂದಿದೆ. ಆದರೆ ಈ ಬಾರಿ ಮನೆಗಳಲ್ಲಿ ಪೂಜಿಸುವ ಗಣಪನಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಕಳೆದ ಬಾರಿಗಿಂತ ಈ ಸಲ 3 ಮನೆ ಗಣಪನಿಗೆ ಹೆಚ್ಚುವರಿ ಬೇಡಿಕೆಯಿದೆ.
– ಚಂದ್ರಶೇಖರ್‌ ನಾಯಕ್‌, ಹುಣ್ಸೆಮಕ್ಕಿ ವಿಗ್ರಹ ತಯಾರಕರು

ಟಾಪ್ ನ್ಯೂಸ್

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Anegudde Temple: ಭಕ್ತರ ಸಂಖ್ಯೆ ಹೆಚ್ಚಳ; ವಿಶೇಷ ಪಾನಕ ವಿತರಣೆ 

Anegudde Temple: ಭಕ್ತರ ಸಂಖ್ಯೆ ಹೆಚ್ಚಳ; ವಿಶೇಷ ಪಾನಕ ವಿತರಣೆ 

Thekkatte: ಕಾರು ಮರಕ್ಕೆ ಢಿಕ್ಕಿ; ಯುವತಿ ಸ್ಥಳದಲ್ಲೇ ಸಾವು, ನಾಲ್ವರಿಗೆ ಗಂಭೀರ ಗಾಯ

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.