ವರದಾನದ ನಿರೀಕ್ಷೆಯಲ್ಲಿ ಹೆಮ್ಮಾಡಿ ಸೇವಂತಿಗೆ ಬೆಳೆಗಾರರು

ತೀವ್ರಗೊಳ್ಳುತ್ತಿರುವ ಚಳಿ

Team Udayavani, Dec 22, 2021, 6:57 PM IST

ವರದಾನದ ನಿರೀಕ್ಷೆಯಲ್ಲಿ ಹೆಮ್ಮಾಡಿ ಸೇವಂತಿಗೆ ಬೆಳೆಗಾರರು

ಹೆಮ್ಮಾಡಿ: ಆಗಾಗ ಸುರಿಯುತ್ತಿದ್ದ ಮಳೆಯಬ್ಬರ ಕೆಲವು ದಿನಗಳಿಂದ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದ್ದು, ಈಗ ಕರಾವಳಿಯಾದ್ಯಂತ ಚಳಿ ಶುರುವಾಗಿದ್ದು, ಇದರಿಂದ ಹೆಮ್ಮಾಡಿ ಭಾಗದಲ್ಲಿ ಬೆಳೆಯುವ ಸೇವಂತಿಗೆ ಬೆಳೆಗೆ ಅನುಕೂಲದ ನಿರೀಕ್ಷೆ ಬೆಳೆಗಾರರದ್ದಾಗಿದೆ.

ಚಳಿ – ಇಬ್ಬನಿಯಿಂದ ಸೇವಂತಿಗೆ ಗಿಡ ಉತ್ತಮ ವಾಗಿ ಬೆಳೆಯುತ್ತದೆ. ಈಗ ಗಿಡ ಬೆಳೆದು, ಮೊಗ್ಗು ಬಿಡುವ ಸಮಯವಾಗಿದ್ದು, ಸಕಾಲದಲ್ಲಿ ಚಳಿಯೂ ಆರಂಭವಾಗಿರುವುದರಿಂದ ಸೂಕ್ತ ವಾತಾವರಣ ಇದ್ದಂತಿದೆ.

ನಿರಂತರ ಮಳೆ, ವಿಪರೀತ ಸೆಖೆ ಹೀಗೆ ಪ್ರತಿಕೂಲ ಹವಾಮಾನದಿಂದಾಗಿ ಆರಂಭದಲ್ಲಿ ಕಂಗೆಟ್ಟಿದ್ದ ಹೆಮ್ಮಾಡಿಯ ಸೇವಂತಿಗೆ ಬೆಳೆಗಾರರು ಈಗ ಚಳಿ ಆರಂಭಗೊಂಡಿರುವುದರಿಂದ ಸ್ವಲ್ಪ ಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದೆ.
ಹೆಮ್ಮಾಡಿ, ಕಟ್‌ಬೆಲೂ¤ರು ಗ್ರಾಮಗಳ ಸುತ್ತ ಮುತ್ತಲಿನ ಕಟ್ಟು, ಜಾಲಾಡಿ, ಸಂತೋಷನಗರ, ಬುಗರಿಕಡು, ಹರೇಗೋಡು, ಕೆಂಚನೂರು ಸಹಿತ ಇನ್ನಿತರ ಪ್ರದೇಶಗಳ ಸುಮಾರು 50- 60ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ 35ರಿಂದ 40 ಮಂದಿ ಬೆಳೆಗಾರರು ಸೇವಂತಿಗೆ ಹೂವನ್ನು ಬೆಳೆಯುತ್ತಾರೆ. ಇಲ್ಲಿನ ರೈತರು ಮುಂಗಾರಿನಲ್ಲಿ ಭತ್ತದ ಕೃಷಿಯನ್ನು ಅವಲಂಬಿಸಿದ್ದರೆ, ಹಿಂಗಾರಿನಲ್ಲಿ ಈ ಸೇವಂತಿಗೆ ಕೃಷಿಯನ್ನೇ ನೆಚ್ಚಿಕೊಂಡಿದ್ದಾರೆ.

ಕಳೆ ಕಾಟ
ಪ್ರತೀ ಬಾರಿ ಜುಲೈ, ಆಗಸ್ಟ್‌ನಿಂದ ಸೇವಂತಿಗೆ ಹೂವಿನ ಗಿಡದ ಬೀಜ ಬಿತ್ತನೆ ಕಾರ್ಯ ಶುರು ವಾಗುವುದು ವಾಡಿಕೆ. ಜ. 14ರ ವೇಳೆಗೆ ಹೂವಿನ ಕೊಯ್ಲು ಶುರುವಾಗುತ್ತದೆ. ಆದರೆ ಈ ಬಾರಿ ತೀರಾ ಇತ್ತೀಚಿನವರೆಗೂ ಮಳೆ ಬರುತ್ತಿದ್ದುದರಿಂದ ಸೇವಂತಿಗೆ ಕೃಷಿಗೆ ಅಡ್ಡಿಯಾಗಿದೆ.

ಅದರಲ್ಲೂ ಮಳೆ ಪ್ರಮಾಣ ಜಾಸ್ತಿಯಾಗಿದ್ದರಿಂದ ಸೇವಂತಿಗೆ ಗಿಡದ ಜತೆ- ಜತೆಗೆ ಕಳೆ ಗಿಡಗಳು ಬೆಳೆದು, ತೊಂದರೆ ಉಂಟು ಮಾಡಿದೆ. ಕಳೆ ಗಿಡಗಳನ್ನು ತೆಗೆಯುವುದೇ ಬೆಳೆಗಾರರಿಗೆ ದೊಡ್ಡ ಸವಾಲಿನ ಕೆಲಸವಾಗಿದೆ.

ಬ್ರಹ್ಮಲಿಂಗೇಶ್ವರನಿಗೆ ಪ್ರಿಯ
ಜನವರಿ ತಿಂಗಳ ಮಕರ ಸಂಕ್ರಮಣದಂದು ನಡೆಯುವ ಮಾರಣಕಟ್ಟೆ ಜಾತ್ರೆಯಲ್ಲಿ ಹೆಮ್ಮಾಡಿ ಸೇವಂತಿಗೆಗೆ ಭಾರೀ ಬೇಡಿಕೆಯಿದೆ. ಬ್ರಹ್ಮಲಿಂಗೇಶ್ವರನಿಗೆ ಹೆಮ್ಮಾಡಿ ಸೇವಂತಿಗೆ ಅತ್ಯಂತ ಪ್ರಿಯವಾಗಿದ್ದು, ಈ ಹೂವನ್ನು ಅರ್ಪಿಸಿ, ಭಕ್ತಿಯಿಂದ ಕೇಳಿದರೆ, ಇಷ್ಟಾರ್ಥವೆಲ್ಲ ಈಡೇರುತ್ತದೆ ಎನ್ನುವ ಪ್ರತೀತಿಯಿದೆ. ಮಾರಣಕಟ್ಟೆ ಜಾತ್ರೆಯಲ್ಲಿ ಗರಿಷ್ಠ ಪ್ರಮಾಣದಲ್ಲಿ ಹೆಮ್ಮಾಡಿ ಸೇವಂತಿಗೆಯು ಮಾರಾಟವಾಗುತ್ತಿದ್ದು, ಆ ಬಳಿಕ ಮಾರ್ಚ್‌ ವರೆಗೆ ಕುಂದಾಪುರ, ಬೈಂದೂರು ಭಾಗದೆಲ್ಲೆಡೆ ನಿತ್ಯವೂ ಜಾತ್ರೆ, ಕೆಂಡೋತ್ಸವಕ್ಕೆ ಹೂವು ಪೂರೈಕೆಯಾಗುತ್ತದೆ. ಮಾರಣಕಟ್ಟೆ ದೇವರ ಕೆಂಡ ಸೇವೆಗೆ ಈ ಹೂವನ್ನು ಮೊದಲಿಗೆ ಅರ್ಪಿಸಿದ ಬಳಿಕವೇ ಬಹುತೇಕ ಸೇವಂತಿಗೆ ಬೆಳೆಗಾರರು ಬೇರೆ – ಬೇರೆ ಕಡೆಗಳಿಗೆ ಮಾರಾಟ ಮಾಡಲು ಮುಂದಾಗುವುದು ವಾಡಿಕೆ.

ಉತ್ತಮ ಫಸಲು ನಿರೀಕ್ಷೆ
ದಿನೇ ದಿನೇ ಚಳಿ ತೀವ್ರತೆ ಏರುತ್ತಿದ್ದು, ಚಳಿ ಹೆಚ್ಚಾದಷ್ಟು ಸೇವಂತಿಗೆ ಹೂವಿನ ಬೆಳೆಗೆ ವರದಾನ. ಈಗ ನಿಧಾನಕ್ಕೆ ಒಂದೊಂದೇ ಗಿಡಗಳು ಮೊಗ್ಗು ಬಿಡಲಾರಂಭಿಸಿದ್ದು, ಹವಾ ಮಾನವು ಇದಕ್ಕೆ ಪೂರಕಯಾಗಿದೆ. ಈ ಬಾರಿ ಸೇವಂತಿಗೆ ಬೆಳೆಗಾರರು ಉತ್ತಮ ಫಸಲಿನ ನಿರೀಕ್ಷೆ ಯಲ್ಲಿದ್ದಾರೆ.
– ಪ್ರಶಾಂತ್‌ ಭಂಡಾರಿ ಹೆಮ್ಮಾಡಿ, ಸೇವಂತಿಗೆ ಬೆಳೆಗಾರರು

ಕರಟಿದ ಗಿಡ
ಈ ಬಾರಿ ನಿರಂತರ ಮಳೆಯಿಂದಾಗಿ ಕಳೆಗಿಡಗಳ ಕಾಟ ಹೆಚ್ಚಾಗಿತ್ತು. ಹೆಮ್ಮಾಡಿ ಭಾಗದಲ್ಲಿ ಬಹುತೇಕ ಎಲ್ಲ ಬೆಳೆಗಾರರು ಈ ಬಾರಿ ಸೇವಂತಿಗೆ ಕೃಷಿ ಮಾಡಿದ್ದಾರೆ. ಆದರೆ ಪ್ರತಿಕೂಲ ಹವಾಮಾನದಿಂದಾಗಿ ನಿರೀಕ್ಷಿತ ಮಟ್ಟದಲ್ಲಿ ಗಿಡ ಬೆಳೆದಿಲ್ಲ. ಅದರಲ್ಲೂ ಆಗಾಗ ಮಳೆ- ಬಿಸಿಲಿನ ಆಟದಿಂದಾಗಿ ಗಿಡಗಳು ಸಹ ಕರಟಿ ಹೋಗಿವೆ.
– ಮಹಾಬಲ ದೇವಾಡಿಗ, ಅಧ್ಯಕ್ಷರು, ಹೆಮ್ಮಾಡಿ ಸೇವಂತಿಗೆ ಬೆಳೆಗಾರರ ಸಂಘ

-ಪ್ರಶಾಂತ್‌ ಪಾದೆ

 

ಟಾಪ್ ನ್ಯೂಸ್

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Siddapura ಬಸ್‌ನಲ್ಲಿ ಹೃದಯಾಘಾತ ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Siddapura ಬಸ್‌ನಲ್ಲಿ ಹೃದಯಾಘಾತ; ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

IPL ಚೆನ್ನೈಯಲ್ಲಿ ಮೆರೆದಾಡಿದ ಪಂಜಾಬ್‌ ಕಿಂಗ್ಸ್‌

IPL ಚೆನ್ನೈಯಲ್ಲಿ ಮೆರೆದಾಡಿದ ಪಂಜಾಬ್‌ ಕಿಂಗ್ಸ್‌

T20 World Cup; ಅಫ್ಗಾನಿಸ್ತಾನ ತಂಡಕ್ಕೆ ರಶೀದ್ ಖಾನ್ ನಾಯಕ

T20 World Cup; ಅಫ್ಗಾನಿಸ್ತಾನ ತಂಡಕ್ಕೆ ರಶೀದ್ ಖಾನ್ ನಾಯಕ

T20 World Cup; ಪಾಕಿಸ್ಥಾನ ತಂಡದ ಆಯ್ಕೆ ವಿಳಂಬ

T20 World Cup; ಪಾಕಿಸ್ಥಾನ ತಂಡದ ಆಯ್ಕೆ ವಿಳಂಬ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Siddapura ಬಸ್‌ನಲ್ಲಿ ಹೃದಯಾಘಾತ ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Siddapura ಬಸ್‌ನಲ್ಲಿ ಹೃದಯಾಘಾತ; ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Kundapura; ಹಲ್ಲೆ , ಬೆದರಿಕೆ, ಚಿನ್ನದ ಸರ ಲೂಟಿ: ದೂರು

Kundapura; ಹಲ್ಲೆ,ಬೆದರಿಕೆ, ಚಿನ್ನದ ಸರ ಲೂಟಿ: ದೂರು

Speed ​​Boat ಹೊರಟದ್ದು ಅಳಸಮುದ್ರಕ್ಕೆ; ತಲುಪಿದ್ದು ತೀರಕ್ಕೆ!

Speed ​​Boat ಹೊರಟದ್ದು ಅಳಸಮುದ್ರಕ್ಕೆ; ತಲುಪಿದ್ದು ತೀರಕ್ಕೆ!

Gangolli ಕಾರಿನಲ್ಲಿ ಬಂದು ದನ ಕಳವಿಗೆ ಯತ್ನ

Gangolli ಕಾರಿನಲ್ಲಿ ಬಂದು ದನ ಕಳವಿಗೆ ಯತ್ನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Siddapura ಬಸ್‌ನಲ್ಲಿ ಹೃದಯಾಘಾತ ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Siddapura ಬಸ್‌ನಲ್ಲಿ ಹೃದಯಾಘಾತ; ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Kundapura; ಹಲ್ಲೆ , ಬೆದರಿಕೆ, ಚಿನ್ನದ ಸರ ಲೂಟಿ: ದೂರು

Kundapura; ಹಲ್ಲೆ,ಬೆದರಿಕೆ, ಚಿನ್ನದ ಸರ ಲೂಟಿ: ದೂರು

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.