ಕೊಲ್ಲೂರು ದೇಗುಲಕ್ಕೆ ನೂತನ ರಥ ಸಮರ್ಪಣೆ
Team Udayavani, Feb 17, 2023, 5:25 AM IST
ಕೊಲ್ಲೂರು: ದಿ| ಮುರ್ಡೇಶ್ವರ ಆರ್.ಎನ್. ಶೆಟ್ಟಿ ಅವರ ಪುತ್ರ ಸುನಿಲ್ ಆರ್. ಶೆಟ್ಟಿ ಅವರು ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲಕ್ಕೆ ಹರಕೆ ರೂಪದಲ್ಲಿ ನೀಡಿರುವ ಬ್ರಹ್ಮರಥದ ಸಮರ್ಪಣೆ ಗುರುವಾರ ನೆರವೇರಿತು.
ರಥ ಸಮರ್ಪಣೆಯ ಬಳಿಕ ನಡೆದ ಸಭೆಯಲ್ಲಿ ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಮಾತನಾಡಿ, ನೂತನ ಬ್ರಹ್ಮರಥ ಸಮರ್ಪಣೆಯಿಂದ ಶ್ರೇಷ್ಠ ಪರಂಪರೆ, ಇತಿಹಾಸ ಹೊಂದಿರುವ ಮೂಕಾಂಬಿಕೆಯ ಸನ್ನಿ ಧಿಗೆ ಹೊಸ ಚೈತನ್ಯ ತುಂಬಿದಂತಾಗಿದೆ. ದೇವಿಯನ್ನು ಶ್ರದ್ಧಾ ಭಕ್ತಿಯಿಂದ ಆರಾಧಿಸಿದರೆ ಲೋಕಕಲ್ಯಾಣವಾಗುವುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಕೊಲ್ಲೂರು ದೇಗುಲ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಕೆರಾಡಿ ಮಾತನಾಡಿ, ದಿ| ಆರ್.ಎನ್. ಶೆಟ್ಟಿಯವರು ಸೇವಾರೂಪದಲ್ಲಿ ಅತಿಥಿಗೃಹ ನೀಡಿದ್ದರು. ಪುತ್ರ ಸುನಿಲ್ ಶೆಟ್ಟಿಯವರು ನೂತನ ರಥವನ್ನು ಸಮರ್ಪಿಸಿದ್ದಾರೆ ಎಂದರು.
ದಾನಿ ಸುನಿಲ್ ಆರ್. ಶೆಟ್ಟಿ, ಎಡಿಸಿ ವೀಣಾ ಬಿ.ಎನ್. ತಂತ್ರಿ, ಅರ್ಚಕ ಡಾ| ಕೆ. ರಾಮಚಂದ್ರ ಅಡಿಗ, ಮಾಜಿ ಶಾಸಕ ಕೆ. ಅಪ್ಪಣ್ಣ ಹೆಗ್ಡೆ, ಸಮಿತಿ ಸದಸ್ಯರಾದ ಡಾ| ಅತುಲ್ ಕುಮಾರ್ ಶೆಟ್ಟಿ, ಜಯಾನಂದ ಹೋಬಳಿದಾರ, ಗೋಪಾಲಕೃಷ್ಣ ನಾಡ, ಶೇಖರ ಪೂಜಾರಿ, ಗಣೇಶ ಕಿಣಿ ಬೆಳ್ವೆ, ರತ್ನಾ ಆರ್. ಕುಂದರ್, ಸಂಧ್ಯಾ ರಮೇಶ, ನಿಕಟಪೂರ್ವ ಕಾರ್ಯನಿರ್ವಹಣಾ ಧಿಕಾರಿ ಮಹೇಶ, ಉಪ ಕಾರ್ಯನಿರ್ವಹಣಾ ಧಿಕಾರಿ ಗೋವಿಂದ ನಾಯ್ಕ, ಮಂದರ್ತಿ ದೇಗುಲದ ಧರ್ಮದರ್ಶಿ ಧನಂಜಯ ಶೆಟ್ಟಿ, ಗ್ರಾ.ಪಂ. ಅಧ್ಯಕ್ಷ ಶಿವರಾಮಕೃಷ್ಣ ಭಟ್ ಮೊದಲಾದವರು ವೇದಿಕೆಯಲ್ಲಿದ್ದರು.
ಸಮ್ಮಾನ:
ರಥ ದಾನಿಗಳಾದ ಸುನಿಲ್ ಆರ್. ಶೆಟ್ಟಿ, ಮಕ್ಕಳಾದ ಅಂಚಲ್, ಅನ್ಮೋಲ್ ಅವರನ್ನು ಶಾಸಕರು ಸಮ್ಮಾನಿಸಿದರು. ರಥಶಿಲ್ಪಿಗಳಾದ ಲಕ್ಷ್ಮೀನಾರಾಯಣ ಆಚಾರ್ಯ, ರಾಜಗೋಪಾಲ ಆಚಾರ್ಯ, ಪುಷ್ಪಲತಾ ಆಚಾರ್ಯ, ವಾಸ್ತುತಜ್ಞ ಮಹೇಶ ಮುನಿಯಂಗಳ, ರಥ ನಿರ್ಮಾಣ ಸಮಿತಿಯ ಸದಸ್ಯರಾದ ಸುರತ್ಕಲ್ ಎನ್ಐಟಿಕೆಯ ಡಾ| ಎಚ್. ಎಂ. ಪ್ರಶಾಂತ, ದೇಗುಲದ ಎಂಜಿನಿಯರ್ ಪ್ರದೀಪ್ ಡಿ.ಕೆ., ನಿಕಟಪೂರ್ವ ಕಾರ್ಯನಿರ್ವಹಣಾ ಧಿಕಾರಿ ಮಹೇಶ ಅವರನ್ನು ಅತಿಥಿಗಳು ಸಮ್ಮಾನಿಸಿದರು.
ದೇಗುಲದ ಸಮಿತಿ ಸದಸ್ಯ ಜಯಾನಂದ ಹೋಬಳಿದಾರ ಸ್ವಾಗತಿಸಿದರು. ಇನ್ನೋರ್ವ ಸದಸ್ಯ ಡಾ| ಅತುಲ್ ಕುಮಾರ್ ಶೆಟ್ಟಿ ಪ್ರಸ್ತಾವನೆಗೈದರು. ರಾಜು ಶೆಟ್ಟಿ ಹಾಗೂ ಸಚಿನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶಿವರಾಮ ಭಟ್ ವಂದಿಸಿದರು.
ಜೀವ ಉಳಿಸಿದ ತಾಯಿಗೆ ರಥ! :
ರಥ ದಾನಿ ಸುನಿಲ್ ಶೆಟ್ಟಿ ಅವರು ಕೊಲ್ಲೂರು ಕ್ಷೇತ್ರದೊಡನೆ ಅವಿನಾಭಾವ ಸಂಬಂಧ ಹೊಂದಿದ್ದಾರೆ. ಬಾಲ್ಯದಲ್ಲಿ ಇಲ್ಲಿನ ಸೌಪರ್ಣಿಕಾ ನದಿಯಲ್ಲಿ ನೀರು ಪಾಲಾದ ಅವರನ್ನು ರಕ್ಷಿಸಿದ ತಾಯಿ ಮೂಕಾಂಬಿಕೆಗೆ ನೂತನ ರಥವನ್ನು ಸಮರ್ಪಿಸಿರುವುದು ಮಹತ್ಕಾರ್ಯ ಎಂದು ಸುಕುಮಾರ ಶೆಟ್ಟಿ ಶ್ಲಾ ಸಿದರು.