Kundapur: ಸರಣಿ ಅಪಘಾತ: ಹಲವರಿಗೆ ಗಾಯ
Team Udayavani, May 9, 2024, 8:05 PM IST
ಕುಂದಾಪುರ: ಹೆಮ್ಮಾಡಿಯ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತ ಸಂಭವಿಸಿದೆ.
ಅಮತೆ ಅವರು ಚಲಾಯಿಸುತ್ತಿದ್ದ ಲಾರಿ ಕಾರಿನ ಹಿಂಭಾಗಕ್ಕೆ ಢಿಕ್ಕಿ ಹೊಡೆದ ಪರಿಣಾಮ ಕಾರು ಡಿವೈಡರ್ ದಾಟಿ ರಸ್ತೆಯ ಇನ್ನೊಂದು ಬದಿಯಲ್ಲಿ ಹೋಗುತ್ತಿದ್ದ ಕಾರಿಗೆ ಢಿಕ್ಕಿಯಾಗಿ ಸರಣಿ ಅಪಘಾತವಾಗಿದೆ. ಇದರಿಂದ ಆ ಕಾರಿನಲ್ಲಿದ್ದ ಪದ್ಮಿನಿ, ವಿಜಯಾ, ವಿಕ್ಷಾ, ಜಯಷ್ಣವಿ, ಷಣ್ಮುಖ, ವಿಜೀಷಾ ಅವರಿಗೆ ಗಾಯಗಳಾಗಿವೆ.
ಕಾರು ಚಾಲಕರಾದ ವಿಪಿನ್ ಲಾಲ್ ಹಾಗೂ ವಿಜಿತ್ಗೆ ಯಾವುದೇ ಗಾಯ ಆಗಿಲ್ಲ. ಗಾಯಾಳುಗಳನ್ನು ಚಿಕಿತ್ಸೆಗೆ ಕುಂದಾಪುರ ಖಾಸಗಿ ಆಸ್ಪತ್ರೆಗೆ ತಂದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.