ಒಮಿಕ್ರಾನ್‌ ಏಟಿಗೆ ಕಳೆಗುಂದಿದ ವರ್ಷಾಚರಣೆ

ಕಳೆದ ವರ್ಷ ಸಿಮೀತ ಆಯೋಜನೆ ಮಾಡಿ ಒಂದಿಷ್ಟು ಆಯೋಜಕರು ನಷ್ಟ ಅನುಭವಿಸಿದ್ದರು.

Team Udayavani, Jan 1, 2022, 5:42 PM IST

ಒಮಿಕ್ರಾನ್‌ ಏಟಿಗೆ ಕಳೆಗುಂದಿದ ವರ್ಷಾಚರಣೆ

ಹುಬ್ಬಳ್ಳಿ: 2021ರ ಅದ್ಧೂರಿ ಸ್ವಾಗತಕ್ಕೆ ಕೊರೊನಾ ಕಂಟಕವಾಗಿ ಕಾಡಿದ್ದರೆ, ಇದೀಗ 2022ರ ಸ್ವಾಗತಕ್ಕೆ ಒಮಿಕ್ರಾನ್‌ ಸಂಪೂರ್ಣ ಬ್ರೇಕ್‌ ಹಾಕಿದೆ. ಕ್ಲಬ್‌, ಹೋಟೆಲ್‌ಗ‌ಳಲ್ಲಿ ಪಾರ್ಟಿಗಳ ಮೂಲಕ ಹೊಸ ವರ್ಷ ಬರಮಾಡಿಕೊಳ್ಳುತ್ತಿದ್ದ ಸಂಭ್ರಮ ಕೇವಲ ಮನೆಗೆ ಸೀಮಿತವಾಗಿತ್ತು. ಸರಕಾರದ ಮಾರ್ಗಸೂಚಿ ಪ್ರಕಾರ ಡಿಜೆ ಹಚ್ಚುವಂತಿಲ್ಲ, ನೈಟ್‌ ಕರ್ಫ್ಯೂ ಹಿನ್ನೆಲೆಯಲ್ಲಿ ರಾತ್ರಿ 10 ಗಂಟೆ ನಂತರ ವಿನಾಕಾರಣ ಹೊರಗೆ ಓಡಾಡುವಂತಿಲ್ಲ. ಇಂತಹ ಕಠಿಣ ಕ್ರಮಗಳಿಂದಾಗಿ ಹೊಸ ವರ್ಷ ಸ್ವಾಗತದ ಅದ್ಧೂರಿತನ ಕಳೆಗುಂದಿತ್ತು. ಕೋವಿಡ್‌ ಪೂರ್ವದಲ್ಲಿ ಮಧ್ಯರಾತ್ರಿ 1 ಗಂಟೆಯವರೆಗೂ ಸಂಭ್ರಮದಿಂದ ಕುಣಿದು ಕುಪ್ಪಳಿಸುತ್ತಿದ್ದರು. ಆದರೆ ಕಳೆದ ವರ್ಷದಂತೆ ಈ ವರ್ಷವೂ ಯಾವುದೇ ಅದ್ಧೂರಿತನ ಇರಲಿಲ್ಲ. ಹೆಚ್ಚಿನವರು ಮನೆಗಳಲ್ಲಿಯೇ ಹೊಸ ವರ್ಷಕ್ಕೆ ಸ್ವಾಗತ ಕೋರಿದರು.

ಇನ್ನೂ ಕೆಲವರು ರಾತ್ರಿ 10 ಗಂಟೆವರೆಗೆ ಹೋಟೆಲ್‌, ಬಾರ್‌ ಗಳಲ್ಲಿ ಸಮಯ ಕಳೆದು ಮನೆಯತ್ತ ಸಾಗಿದರು. ಒಮಿಕ್ರಾನ್‌ ಭೀತಿ ಹಿನ್ನೆಲೆಯಲ್ಲಿ ಹೋಟೆಲ್‌, ಕ್ಲಬ್‌ಗಳಲ್ಲಿ ಯಾವುದೇ ಪಾರ್ಟಿಗಳನ್ನು ಆಯೋಜಿಸಲು ಅವಕಾಶ ಇರಲಿಲ್ಲ. 10 ಗಂಟೆಯೊಳಗೇ ಪಾರ್ಟಿಗಳಿದ್ದರೂ ಶೇ.50 ಮಾತ್ರ ಜನರಿಗೆ ಅವಕಾಶವಿತ್ತು. ಹೀಗಾಗಿ ಹೋಟೆಲ್‌, ಕ್ಲಬ್‌ಗಳಲ್ಲಿ ಪಾರ್ಟಿ ಆಯೋಜನೆಗೆ ಕೈ ಹಾಕಿರಲಿಲ್ಲ. ಕಳೆದ ವರ್ಷ ಸಿಮೀತ ಆಯೋಜನೆ ಮಾಡಿ ಒಂದಿಷ್ಟು ಆಯೋಜಕರು ನಷ್ಟ ಅನುಭವಿಸಿದ್ದರು.

ಹೋಟೆಲ್‌ನವರ ಆಕ್ರೋಶ
ಕಳೆದ ಎರಡು ವರ್ಷಗಳಿಂದ ಯಾವುದೇ ವ್ಯಾಪಾರ-ವಹಿವಾಟು ಇಲ್ಲದೇ ಪರಿತಪಿಸುತ್ತಿರುವ ಇಂತಹ ಸಮಯದಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ ಇದ್ದ ಒಂದು ಅವಕಾಶವನ್ನು ಸರಕಾರ ಕಸಿದುಕೊಂಡಿದೆ. ಹತ್ತು ಹಲವು ಕಾರ್ಯಕ್ರಮಗಳು, ಚುನಾವಣೆಗಳು, ರಾಜಕೀಯ ಕಾರ್ಯಕ್ರಮಗಳು, ಮದುವೆಗಳಿಗಿರದ ನಿಯಮಗಳನ್ನು ಹೊಸ ವರ್ಷದ ಆಚರಣೆಗೆ ರೂಪಿಸಿ ಹೋಟೆಲ್‌ ಉದ್ಯಮ ನಷ್ಟ ಅನುಭಿಸುವಂತೆ ಮಾಡಿದೆ ಎನ್ನುವುದು ಹೋಟೆಲ್‌ ಉದ್ಯಮಿಗಳ ಆಕ್ರೋಶವಾಗಿದೆ.

ಎಲ್ಲಿಯೂ ಆಚರಣೆ ಇಲ್ಲ ನಗರದ ಡೆನಿಸನ್‌ ಹೋಟೆಲ್‌, ಓಶಿಯನ್‌ ಪರ್ಲ್, ನವೀನ ಹೋಟೆಲ್‌, ಹಂಸ್‌ ಹೋಟೆಲ್‌, ಕ್ಯೂಬಿಕ್ಸ್‌ ಹೋಟೆಲ್‌, ಫಾರ್ಚೂನ್‌ ಹೋಟೆಲ್‌, ಗ್ರ್ಯಾಂಡ್ ಹೋಟೆಲ್‌, ಫರ್ಲ್ ಹೋಟೆಲ್‌, ಪ್ರಸಿಡೆಂಟ್‌, ತಾರಾ ಎಮರಾಯಲ್ಡ್‌ ಹೋಟೆಲ್‌, ಕಾಟನ್‌ ಕೌಂಟಿ, ಲೋಟಸ್‌ ಗಾರ್ಡನ್‌ ಸೇರಿದಂತೆ ಎಲ್ಲ ಹೋಟೆಲ್‌ ಗಳಲ್ಲಿರುತ್ತಿದ್ದ ಹಬ್ಬದ ಕಳೆ ಈ ಬಾರಿ ಇರಲಿಲ್ಲ.

ಒಮಿಕ್ರಾನ್‌ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರಕಾರ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದ್ದು, ನೈಟ್‌ ಕರ್ಫ್ಯೂ ಜಾರಿಯಲ್ಲಿರುವುದರಿಂದ ಸರಕಾರದ ಆದೇಶ ಉಲ್ಲಂಘಿಸಿ ಏನೂ ಮಾಡುವಂತಿಲ್ಲ. ಇದರಿಂದ ಹೊಸ ವರ್ಷದ ಸಂಭ್ರಮಾಚರಣೆಗೆ ಸಂಪೂರ್ಣ ಬ್ರೇಕ್‌ ಬಿದ್ದಿದೆ. ಹೋಟೆಲ್‌ ಉದ್ಯಮದ ಮೇಲೆ ದೊಡ್ಡ ಹೊಡೆತ ಬಿದ್ದಿದೆ.
ಪ್ರದೀಪ್‌ ಶಾಹ್‌,
ಓಷಿಯನ್‌ ಪರ್ಲ್ ಹೋಟೆಲ್‌

ಹೊಸ ವರ್ಷದ ಆಚರಣೆ ಏನೂ ಇಲ್ಲ, ಕಳೆದ ವರ್ಷವೂ ಇದೇ ರೀತಿ ಆಗಿತ್ತು. ಸರಕಾರ ಹಾಗೂ ಜಿಲ್ಲಾಡಳಿತ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ರಾತ್ರಿ 9 ಗಂಟೆಗೆ ಬಂದ್‌ ಮಾಡಿ, ರಾತ್ರಿ 10 ಗಂಟೆಗೆ ಒಳಗಡೆ ಯಾರನ್ನು ತೆಗೆದುಕೊಳ್ಳುವಂತಿಲ್ಲ. ಹೀಗಾಗಿ ಈ ಬಾರಿಯೂ ಯಾವುದೇ ಸಂಭ್ರಮಾಚರಣೆಯಿಲ್ಲ.
ಅರುಣ ಸವದತ್ತಿ,
ವ್ಯವಸ್ಥಾಪಕ, ಡೆನಿಸನ್ಸ್‌ ಹೋಟೆಲ್‌

ಟಾಪ್ ನ್ಯೂಸ್

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ

ec-aa

AAP ಚುನಾವಣ ಪ್ರಚಾರ ಹಾಡಿಗೆ ಆಯೋಗದ ನಿರ್ಬಂಧ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ

ec-aa

AAP ಚುನಾವಣ ಪ್ರಚಾರ ಹಾಡಿಗೆ ಆಯೋಗದ ನಿರ್ಬಂಧ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ

ec-aa

AAP ಚುನಾವಣ ಪ್ರಚಾರ ಹಾಡಿಗೆ ಆಯೋಗದ ನಿರ್ಬಂಧ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.