ಗ್ರಾಹಕರ ಜೇಬಿಗೆ ಕತ್ತರಿ; ದಿನದಿಂದ ದಿನಕ್ಕೆ ತರಕಾರಿ ಬೆಲೆ ಗಗನಮುಖಿ

ಎಲ್ಲ ಸೊಪ್ಪುಗಳ ದರವೂ ಒಂದು ಪಟ್ಟು, ಎರಡು ಪಟ್ಟು ಏರಿಕೆಯಾಗಿರುವುದು ಕಂಡು ಬಂದಿದೆ.

Team Udayavani, Jun 21, 2023, 1:20 PM IST

ಗ್ರಾಹಕರ ಜೇಬಿಗೆ ಕತ್ತರಿ; ದಿನದಿಂದ ದಿನಕ್ಕೆ ತರಕಾರಿ ಬೆಲೆ ಗಗನಮುಖಿ

ಹುಬ್ಬಳ್ಳಿ: ಮುಂಗಾರು ಮಳೆ ಕೈಕೊಟ್ಟಿದ್ದರಿಂದ ತರಕಾರಿಗಳ ಬೆಲೆಗಳ ಗಗನಮುಖೀಯಾಗಿದೆ. ಕಳೆದ 10 ದಿನಗಳಿಂದ ಏರಿಕೆ ಕಂಡ ತರಕಾರಿ ದರ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಮಳೆ ಇಲ್ಲದೇ ತರಕಾರಿ ಬೆಳೆಗಳ ಇಳುವರಿ ಕುಸಿತ ಕಂಡಿದ್ದು, ಮಾರುಕಟ್ಟೆಗೆ ಪೂರೈಕೆಯಾಗುವ ತರಕಾರಿ ಪ್ರಮಾಣ ಗಣನೀಯವಾಗಿ ತಗ್ಗಿದೆ. ಹೀಗಾಗಿ ದರ ದುಬಾರಿಯಾಗಿದ್ದು ಗ್ರಾಹಕರ ಜೇಬಿಗೆ ಕತ್ತರಿ ಬೀಳುವಂತಾಗಿದೆ.

ಉತ್ತಮ ಗುಣಮಟ್ಟದ ಕ್ಯಾರೆಟ್‌ ದರ ಕೆಜಿಗೆ 40 ರೂ.ಇದ್ದದ್ದು ಇಂದು 60- 80 ರೂ.ಗಳಾಗಿದೆ. ಬದನೆಕಾಯಿ 50 ರೂ.ಇದ್ದದ್ದು 70-80 ರೂ. ಗಳಾಗಿವೆ. ಸೌತೆಕಾಯಿ 60 ರೂ.ಗಳಿದ್ದು, ಇದೀಗ 80-100 ರೂ.ಗಳಾಗಿವೆ. ಡೊಣ್ಣ ಮೆಣಸಿನಕಾಯಿ 60 ರೂ.ಗಳಿದ್ದದ್ದು 80 ರೂ.ಗಳಾಗಿದೆ. ಹಸಿ ಮೆಣಸಿನಕಾಯಿ 60 ರೂ.ಗಳಿದ್ದದ್ದು, 80-100 ಗಡಿ ತಲುಪಿದೆ. ಟೊಮಾಟೊ 20 ರೂ.ಗಳಿರುವುದು ಇದೀಗ 50 ರೂ.ಗಳಿಗೆ ತಲುಪಿದೆ. ಇನ್ನು ಪಲ್ಯಗಳು ದರವೂ ಏರಿಕೆಯಾಗಿದ್ದು, ಕೋತಂಬರಿ 10 ರೂ.ಗಳಿಗೆ ಎರಡು ಸಿವುಡು ಎನ್ನುತ್ತಿದ್ದವರು ಇಂದು 25 ರೂ.ಗಳಿಗೆ ಒಂದು ಎನ್ನುತ್ತಿದ್ದಾರೆ. ಅದೇ ರೀತಿ ಕಿರಕಸಾಲಿ 10 ರೂ.ಗಳಿಗೆ ಎರಡು ಇರುವುದು, ಇದೀಗ ಒಂದು ಆಗಿದೆ. ರಾಜಗಿರಿ, ಪಾಲಕ, ಪುದಿನಾ ಸೇರಿದಂತೆ ಎಲ್ಲ ಸೊಪ್ಪುಗಳ ದರವೂ ಒಂದು ಪಟ್ಟು, ಎರಡು ಪಟ್ಟು ಏರಿಕೆಯಾಗಿರುವುದು ಕಂಡು ಬಂದಿದೆ.

ಆವಕ ಕಡಿಮೆ: ಎಂದಿನಂತೆ ಮಾರುಕಟ್ಟೆಗೆ ಬರುತ್ತಿದ್ದ ತರಕಾರಿಗಳಲ್ಲಿ ಇಳಿಕೆ ಕಂಡಿರುವುದರಿಂದ ದರದಲ್ಲಿ ಏರಿಕೆ ಕಂಡಿದೆ. ಆವಕ ಹೆಚ್ಚಾದಲ್ಲಿ ದರದಲ್ಲಿ ಕೊಂಚು ಇಳಿಕೆ ಕಂಡು ಬರಬಹುದು. ಆದರೆ ಸದ್ಯ ಮಳೆಯ ಕೊರತೆ ಹಾಗೂ ನೀರಿನ ಮಿತವ್ಯಯದಿಂದ ತರಕಾರಿ ಸೇರಿದಂತೆ ಸೊಪ್ಪುಗಳಲ್ಲಿ ದರ ಏರಿಕೆ ಕಂಡು ಬಂದಿದೆ.

ಕಳೆದ 10-15 ದಿನಗಳಿಂದ ದಿನದಿಂದ ದಿನಕ್ಕೆ ತರಕಾರಿ ದರಗಳು ಏರಿಕೆ ಕಾಣುತ್ತಿದ್ದು, ಕಳೆದ 10 ದಿನಗಳ ಹಿಂದೆ ಕೋತಂಬರಿ 10 ರೂ.ಗೆ ಒಂದು ಅಥವಾ ಎರಡು ಇರುವುದು ಇಂದು 25 ರೂ.ಗಳಿಗೆ ಒಂದಾಗಿದೆ. ಬದನೆಕಾಯಿ, ಸೌತೆಕಾಯಿ, ಕ್ಯಾರೆಟ್‌, ಹಿರೇಹಾಕಿ, ಬಿನ್ಸ್‌, ಪಡವಲಕಾಯಿ, ಚವಳಿಕಾಯಿ, ಬೆಂಡೆಕಾಯಿ ಸೇರಿದಂತೆ ಎಲ್ಲದರ ದರವೂ 30 ರಿಂದ 40 ರೂ.ಗಳಷ್ಟು ಏರಿಕೆಯಾಗಿದೆ.
ಗಂಗವ್ವ ಧಾರವಾಡ, ಸಾರ್ವಜನಿಕರು

ಎಂದಿನಂತೆ ಮಾರುಕಟ್ಟೆಗೆ ತರಕಾರಿ ಬರುತ್ತಿಲ್ಲ. ನೀರಸೌತೆ, ಅವರೆಕಾಯಿ ದರ ದುಪ್ಪಟ್ಟಾಗಿದೆ. ಕೊತ್ತಂಬರಿ, ಟೊಮೆಟೊ, ಬೀ®Õ… ಸೇರಿದಂತೆ ಎಲ್ಲ ತರಕಾರಿ, ಸೊಪ್ಪುಗಳ ದರ ತುಂಬಾ ಏರಿಕೆಯಾಗಿವೆ. ಮಾರುಕಟ್ಟೆಗೆ ಪೂರೈಕೆ ಕಡಿಮೆಯಾಗಿರುವ ಕಾರಣ ಸಹಜವಾಗಿಯೇ ದರ ಏರಿಕೆಯಾಗಿದೆ. ಮಳೆಯಾದಲ್ಲಿ ಕೊಂಚು ದರ ಇಳಿಕೆ ಕಾಣಬಹುದು.
ವಿಜಯಲಕ್ಷ್ಮಿಹಿರೇಮಠ ಹಾಗೂ ಸಿದ್ದಮ್ಮ, ತರಕಾರಿ ವ್ಯಾಪಾರಿಗಳು

ಬಸವರಾಜ ಹೂಗಾರ

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ

Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ

Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ

Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Hubli; ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡ ಶಕ್ತಿ: ದಿಂಗಾಲೇಶ್ವರ ಸ್ವಾಮೀಜಿ

ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.