Hubballi: ನಾಟಕ ಕಂಪನಿಗಳಿಗೆ ಅನಾಥ ಸ್ಥಿತಿ ಖೇದಕರ
ಸಾಂಸ್ಕೃತಿಕ ಕಲೆಗಳು ವೃತ್ತಿ ರಂಗಭೂಮಿ ಬೆಳೆಯಲಿಕ್ಕೆ ಕಾರಣವಾಗಿವೆ
Team Udayavani, Nov 20, 2023, 1:27 PM IST
ಹುಬ್ಬಳ್ಳಿ: ಕರ್ನಾಟಕ ರಂಗಭೂಮಿಯ ಪ್ರಭಾವ ದಿಂದ ಮರಾಠಿ ರಂಗಭೂಮಿ ಹುಟ್ಟಿ ಕನ್ನಡ ರಂಗಭೂಮಿ ಯನ್ನು ಮೀರಿ ಬೆಳೆದಿದೆ ಎಂದು ಮಾಜಿ ಮಹಾಪೌರ ಡಾ| ಪಾಂಡುರಂಗ ಪಾಟೀಲ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಬಾಳಾಚಾರ್ಯ ಸಕ್ರಿ ಶಾಂತಕವಿ ಟ್ರಸ್ಟ್ ಧಾರವಾಡ, ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘ ಹಾಗೂ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಆಧುನಿಕ ಕನ್ನಡ ರಂಗಭೂಮಿ ದಿನಾಚರಣೆ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ “ಕರ್ನಾಟಕ ರಂಗಭೂಮಿ ಅಂದು, ಇಂದು’ ವಿಷಯ ಕುರಿತು
ಉಪನ್ಯಾಸ ನೀಡಿದರು.
ಕನ್ನಡ ಸಾಹಿತ್ಯದಲ್ಲಿ ಏಕವ್ಯಕ್ತಿ ಅಭಿನಯ, ಗೊಂಬೆ ಆಟಗಳು ರಂಗಭೂಮಿಗೆ ಅಸ್ಥಿಭಾರ ಹಾಕಿದ ಕಲೆಗಳು. ದೊಡ್ಡಾಟ, ಬಯಲಾಟ, ಕೃಷ್ಣ ಪಾರಿಜಾತ, ರಾಧಾನಾಟ, ಸಂಗ್ಯಾ-ಬಾಳ್ಯಾ, ಯಕ್ಷಗಾನ ಮೊದಲಾದ ಸಾಂಸ್ಕೃತಿಕ ಕಲೆಗಳು ವೃತ್ತಿ ರಂಗಭೂಮಿ ಬೆಳೆಯಲಿಕ್ಕೆ ಕಾರಣವಾಗಿವೆ ಎಂದರು.
ವೃತ್ತಿ ರಂಗಭೂಮಿ ಸಂಕೀರ್ಣವಾದುದು. ನಾಟಕಕಾರ, ನಾಟಕ ಕಂಪನಿ ಮಾಲೀಕ, ಕಲಾವಿದರು, ಪ್ರೇಕ್ಷಕರು, ಕಥಾವಸ್ತು, ಸಂಗೀತ, ನೃತ್ಯ ರಂಗ ಪರಿಕರಗಳು, ಪ್ರಚಾರ ಇವೆಲ್ಲವುಗಳು ಸಂಸ್ಕೃತಿ ಬದಲಾದಂತೆ ಪರಂಪರೆಯೊಂದಿಗೆ ಹೊಂದಿಕೊಳ್ಳುತ್ತ ವಿವಿಧ ರೂಪದಲ್ಲಿ ಬೆಳೆದು ಬಂದಿದೆ. ಕಲಾವಿದರ ಬದುಕು ಅತಂತ್ರವಾಗಿರುವುದು ಖೇದದ ವಿಷಯ. ನಾಟಕ ಕಂಪನಿಗಳು ಅನಾಥ ಸ್ಥಿತಿಯನ್ನು ಅನುಭವಿಸುತ್ತಿವೆ ಎಂದು ಹೇಳಿದರು.
ಪ್ರೊ| ಕೆ.ಎಸ್. ಕೌಜಲಗಿ ಮಾತನಾಡಿದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ರಂಗಕರ್ಮಿ ಸರೋಜಮ್ಮ ಎಚ್.ವಿ., ಪ್ರಗತಿಪರ ರೈತರಾದ ಡಿ.ಟಿ. ಪಾಟೀಲ, ರಂಗ ಸೇವಾಕೃತರಾದ ಮಹಾಬಳೇಶ್ವರ ಯಕ್ಕುಂಡಿ ಅವರನ್ನು ಸನ್ಮಾನಿಸಲಾಯಿತು. ಹಿರಿಯ ನಾಗರಿಕ ವೇದಿಕೆ ರಾಜ್ಯಾಧ್ಯಕ್ಷ ಬಿ.ಎ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ಬಿ.ಎಸ್.ಸೊಪ್ಪಿನ, ಡಾ| ಶಾಮಸುಂದರ ಬಿದರಕುಂದಿ, ಬಾಬುರಾವ ಸಕ್ಕರಿ, ಪ್ರೊ| ಎಸ್. ಕೆ. ಆದಪ್ಪನವರ, ಸುನಂದಾ ಬೆನ್ನೂರ, ವಿ.ಜಿ. ಪಾಟೀಲ, ಗದಿಗಯ್ಯ ಹಿರೇಮಠ, ಪಿ.ಬಿ. ಹಿರೇಮಠ ಮೊದಲಾದವರಿದ್ದರು. ಕುಮಾರ ಶಿವಸ್ವಾಮಿ ಹಿರೇಮಠ ರಂಗಗೀತೆಗಳನ್ನು ಪ್ರಸ್ತುತ ಪಡಿಸಿದರು. ಅನಸೂಯಾ ನವಲಗುಂದ ಪ್ರಾರ್ಥಿಸಿದರು. ಡಾ| ಲಿಂಗರಾಜ ಅಂಗಡಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ವಿರೂಪಾಕ್ಷ ಕಟ್ಟಿಮನಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ಕರ್ನಾಟಕವು ಗೂಂಡಾ ರಾಜ್ಯವಾಗುತ್ತಿದೆ: ಜಗದೀಶ ಶೆಟ್ಟರ್
Anjali Ambigera Case; ಹಂತಕ ಗಿರೀಶ್ ಗೂ ಅಂಜಲಿಗೂ 15 ದಿನಗಳ ಮೊದಲೇ ಮದುವೆಯಾಗಿತ್ತು!
Anjali Ambigera Case; ದಾವಣಗೆರೆಯಲ್ಲಿ ಹಂತಕನನ್ನು ಬಂಧಿಸಿದ ಪೊಲೀಸರು
Anjali ಹತ್ಯೆ: ಹುಬ್ಬಳ್ಳಿಯಲ್ಲಿ ಭುಗಿಲೆದ್ದ ಪ್ರತಿಭಟನೆ; ಬಿಜೆಪಿ ಕಾರ್ಯಕರ್ತರು ವಶಕ್ಕೆ
Anjali Ambigera Case; ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ
MUST WATCH
ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ
ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ
ಹೊಸ ಸೇರ್ಪಡೆ
PU ಕಂಪ್ಯೂಟರ್ ಸೈನ್ಸ್, ಸೈಕಾಲಜಿಗೂ ಎನ್ಸಿಇಆರ್ಟಿ ಪಠ್ಯ
ಕೇರಳದಲ್ಲಿ 2 ವಾರದಲ್ಲಿ 2 ಲಕ್ಷ ಮಂದಿಗೆ ಸಾಂಕ್ರಾಮಿಕ ರೋಗ; 10 ಸಾವು
Karkala ಸಾಗರದಾಚೆಯಿಂದ ತವರಿಗೆ ಕರೆ ತಂದ ಕೃಷಿ ಪ್ರೀತಿ
Hyderabad: ನಟಿ ಪವಿತ್ರ ಜಯರಾಂ ಕಾರು ಅಪಘಾತದಲ್ಲಿ ಗಾಯಗೊಂಡಿದ್ದ, ಗೆಳೆಯ ಚಂದು ಆತ್ಮಹತ್ಯೆ
ರಾಜ್ಯದಲ್ಲಿ 12 ವರ್ಷಗಳಲ್ಲಿ 881ಸಾವು! ಸಿಡಿಲಾಘಾತದಿಂದ ಸಾವು ಬೆಳಗಾವಿ,ಬೀದರ್ನಲ್ಲೇ ಹೆಚ್ಚು