ಸಹಕಾರದಿಂದಲೇ ಕೋವಿಡ್ ಗೆ ತಡೆ
ಜಿಲ್ಲಾ ಗಡಿ ಭಾಗದಲ್ಲಿ ಡೀಸಿ ಅಭಿರಾಮ್ ಶಂಕರ್ ಪರಿಶೀಲನೆ
Team Udayavani, May 6, 2020, 12:09 PM IST
ಪಿರಿಯಾಪಟ್ಟಣದ ಗಡಿಭಾಗದ ಕೊಪ್ಪ, ಹಲಗನಹಳ್ಳಿಯಲ್ಲಿ ಡೀಸಿ ಅಭಿರಾಮ್ ಶಂಕರ್ ಪರಿಶೀಲನೆ ಮಾಡಿದರು.
ಪಿರಿಯಾಪಟ್ಟಣ: ತಾಲೂಕಿನ ಜಿಲ್ಲಾ ಗಡಿ ಭಾಗವಾದ ಹಲಗನಹಳ್ಳಿ ಹಾಗೂ ಕೊಪ್ಪ ಗ್ರಾಮಗಳಲ್ಲಿನ ಚೆಕ್ಪೋಸ್ಟ್ಗೆ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿ, ಹೊರ ರಾಜ್ಯ, ಜಿಲ್ಲೆಗಳಿಂದ ಸಂಚಾರ ಮಾಡುವವರನ್ನು ತಪಾಸಣೆ ಮಾಡಬೇಕು. ಜಿಲ್ಲೆ ಕೆಂಪು ವಲಯದಲ್ಲಿದ್ದು, ಎಲ್ಲರ ಸಹಕಾರದಿಂದ ಕೋವಿಡ್ ತಡೆ ಸಾಧ್ಯ ಎಂದರು. ಜಿಲ್ಲಾ ಗಡಿಭಾಗ ಹೊರತುಪಡಿಸಿ, ಬೇರೆ ಕಡೆಯಿಂದ ಜಿಲ್ಲೆಗೆ ಸಂಚಾರ ಮಾಡುವವರ ಮೇಲೆ ನಿಗಾವಹಿಸಿಬೇಕು.
ಅಂತಹ ಸ್ಥಳಗಳಲ್ಲಿ ಪೊಲೀಸ್ ಹಾಗೂ ಆರೋಗ್ಯ ಅಧಿಕಾರಿಗಳು ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು ಎಂದ ಅವರು, ತಾಲೂಕು ಆಡಳಿತ ಅಧಿಕಾರಿಗಳಿಂದ ಮಾಹಿತಿ ಪಡೆದರು. ಹಲನಗನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನರ್ಸ್ ಅವಶ್ಯವಿದೆ ಎಂದು ಅಲ್ಲಿನ ವೈದ್ಯಾಧಿಕಾರಿ ಡಾ.ಶೋಭ ಅವರು ಡೀಸಿ ಗಮನಕ್ಕೆ ತಂದಾಗ, ಶೀಘ್ರದಲ್ಲಿ ಸಮಸ್ಯೆ ಪರಿಹರಿಸುವುದಾಗಿ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್, ಜಿಪಂ ಸಿಇಒ ಪ್ರಶಾಂತ್ ಕುಮಾರ್ ಮಿಶ್ರಾ, ಹುಣಸೂರು ಉಪವಿಭಾಗಧಿಕಾರಿ ಬಿ.ಎನ್.ವೀಣಾ, ಡಿವೈಎಸ್ಪಿ ಸುಂದರ್ ರಾಜ್, ತಹಶೀಲ್ದಾರ್ ಶ್ವೇತಾ ಎನ್ ರವೀಂದ್ರ, ವೃತ್ತ ನಿರೀಕ್ಷಕ ಪ್ರದೀಪ್, ತಾಪಂನ ರಘುನಾಥ್, ಬೆಟ್ಟದಪುರ ಪೊಲೀಸ್ ಠಾಣಾಧಿಕಾರಿ ಲೋಕೇಶ್, ಉಪ ತಹಶೀಲ್ದಾರ್ ಶಶಿಧರ್, ಪಿಡಿಒ ಅಬಿಅಹ್ಮದ್, ಕಂದಾಯ ನಿರೀಕ್ಷಕ ಪ್ರದೀಪ್, ತಾಲೂಕು ಭೋವಿ ಸಮಾಜದ ಅಧ್ಯಕ್ಷ ಎನ್.ಟಿ ರವಿಕುಮಾರ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಚೆಕ್ ದುರ್ಬಳಕೆ; ಕ್ಯಾಷಿಯರ್, ಎಲ್ಐಸಿ ಏಜೆಂಟ್ಗೆ ಜೈಲು
Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್
Bengaluru: ಇನ್ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್; ಅಪರಿಚಿತನ ಮೇಲೆ ಕೇಸು
Namma Metro: ಮೆಟ್ರೋ ನಿಲ್ದಾಣಗಳ ಪಾದಚಾರಿ ಮಾರ್ಗಕ್ಕಿಲ್ಲ ಮುಕ್ತಿ
Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ