Puttur; ಅಡಿಕೆ ಸಾಗಾಟ ಲಾರಿಯಲ್ಲಿದ್ದ 10 ಲಕ್ಷ ರೂ. ನಗದು ನಾಪತ್ತೆ: ದೂರು
Team Udayavani, Jul 22, 2023, 6:09 AM IST
ಪುತ್ತೂರು: ಅಡಿಕೆ ಸಾಗಾಟದ ಲಾರಿಯಿಂದ ಲಕ್ಷಾಂತರ ರೂ. ನಗದು ಕಳವಾಗಿರುವ ಮತ್ತು ಲಾರಿಯ ನಿರ್ವಾಹಕ ನಾಪತ್ತೆಯಾಗಿರುವ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪುತ್ತೂರಿನ ಅಝರ್ ಟ್ರಾನ್ಸ್ಪೊàರ್ಟ್ ಸಂಸ್ಥೆಯ ಮಾಲಕ ಬನ್ನೂರು ನಿವಾಸಿ ಅಝರ್ ಕಾಂಪೌಂಡ್ನ ಕಲಂದರ್ ಇಬ್ರಾಹಿಂ ನೌಷದ್ ದೂರು ನೀಡಿದವರು. ಅವರು ಲಾರಿಯ ಮೂಲಕ ಪುತ್ತೂರಿನಿಂದ ಪುಣೆಗೆ ಅಡಿಕೆ ಸಾಗಾಟ ಮಾಡಿಸಿ ಜು. 18ರಂದು ಲಾರಿ ಹಿಂದಿರುಗುವಾಗ ಪುಣೆಯ ಅಝರ್ ಟ್ರೇಡಿಂಗ್ ಸಂಸ್ಥೆಯ ಸಿಬಂದಿ ಸಫಝ್ ಅವರು ಲಾರಿ ಚಾಲಕ ಅಬ್ದುಲ್ ರವೂಫ್ ಕಬಕ ಮತ್ತು ನಿರ್ವಾಹಕ ಶಿವಕುಮಾರ್ ಯಾನೆ ಶಿವು ಅವರಲ್ಲಿ ಕಲಂದರ್ ಇಬ್ರಾಹಿಂ ನೌಷದ್ ಅವರಿಗೆ ನೀಡಲೆಂದು 10 ಲಕ್ಷ ರೂ. ನಗದು ನೀಡಿದ್ದರು.
ಬಳಿಕ ಲಾರಿ ಅಲ್ಲಿಂದ ಹೊರಟು ತೊಕ್ಕೊಟ್ಟುವಿನಲ್ಲಿ ಚಾಲಕ ಅಬ್ದುಲ್ ರವೂಫ್ ಅವರು ಲಾರಿ ನಿಲ್ಲಿಸಿ ಮಾರುಕಟ್ಟೆಗೆ ಹೋಗಿ ಹಿಂದಿರುಗುವಾಗ ಕಂಡಕ್ಟರ್ ಶಿವಕುಮಾರ್ ಯಾನೆ ಶಿವು ನಾಪತ್ತೆಯಾಗಿದ್ದ. ಲಾರಿಯಲ್ಲಿಟ್ಟಿದ್ದ ಹಣವೂ ಇರಲಿಲ್ಲ. ಘಟನೆ ಕುರಿತು ಲಾರಿ ಚಾಲಕ ಮಾಲಕರಿಗೆ ತಿಳಿಸಿದ್ದು, ಅದರಂತೆ ಕಲಂದರ್ ಇಬ್ರಾಹಿಂ ಅವರು ನಿರ್ವಾಹಕನ ವಿರುದ್ಧ ದೂರು ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್