Divorce: 89ರ ವೃದ್ಧನ ವಿಚ್ಛೇದನದ ಹೋರಾಟಕ್ಕೆ ಕಡೆಗೂ ಸೋಲು!
-27 ವರ್ಷದಿಂದ ಪತ್ನಿಯಿಂದ ವಿಚ್ಛೇದನ ಬಯಸಿ ಪತಿ ಹೋರಾಟ-ಪತ್ನಿಯ ಪ್ರಾರ್ಥನೆಗೆ ಕರಗಿ ವಿಚ್ಛೇದನ ನಿರಾಕರಣೆ
Team Udayavani, Oct 13, 2023, 10:44 PM IST
ನವದೆಹಲಿ: ಸರ್ವೋಚ್ಚ ನ್ಯಾಯಾಲಯದಲ್ಲಿ ಒಂದು ವಿಶೇಷ ಪ್ರಕರಣ ಕಡೆಗೂ ವಿಚಿತ್ರವಾಗಿ ಮುಗಿದಿದೆ. 89 ವರ್ಷದ ನಿರ್ಮಲ್ ಸಿಂಗ್ ಪನೇಸರ್ 27 ವರ್ಷದ ಹಿಂದೆಯೇ, ತಮಗೆ ಪತ್ನಿ ಪರಮ್ಜಿತ್ ಕೌರ್ರಿಂದ ವಿಚ್ಛೇದನ ಬೇಕು ಎಂದು ಅರ್ಜಿ ಸಲ್ಲಿಸಿದ್ದರು. 1996ರಲ್ಲಿಯೇ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಕೊನೆಗೂ 2023ರ ಅಕ್ಟೋಬರ್ ತಿಂಗಳಲ್ಲಿ ಮುಗಿದಿದೆ. ಆದರೆ ನ್ಯಾಯಪೀಠ ವಿಚ್ಛೇದನ ನಿರಾಕರಿಸಿದೆ!
ಭಾರತದಲ್ಲಿ ಸರಾಸರಿ ಪ್ರತೀ 100 ಮದುವೆಗಳಲ್ಲಿ ಒಂದು ವಿಚ್ಛೇದನದಲ್ಲೇ ಮುಕ್ತಾಯವಾಗುತ್ತದೆ. ಪ್ರಸ್ತುತ ಪ್ರಕರಣದಲ್ಲಿ ಶತಾಯಗತಾಯ ಸೆಣೆಸಾಡಿ ಪತ್ನಿ ವಿಚ್ಛೇದನವನ್ನು ತಪ್ಪಿಸಿಕೊಂಡಿದ್ದಾರೆ. ವಾಯುಪಡೆಯಲ್ಲಿ ಕೆಲಸ ಮಾಡುತ್ತಿದ್ದ ನಿರ್ಮಲ್, 1984ರಲ್ಲಿ ಮದುವೆಯಾಗಿದ್ದರು. ಆ ವೇಳೆ ತನಗೆ ಚೆನ್ನೈಗೆ ವರ್ಗಾವಣೆಯಾದಾಗ ಪತ್ನಿ ಬರಲು ಒಪ್ಪಲಿಲ್ಲ, ಅದರಿಂದ ನನಗೆ ಹಿಂಸೆಯಾಗಿದೆ, ಆಕೆ ನನ್ನನ್ನು ದೂರ ಮಾಡಿದ್ದಾರೆ ಎಂದು ಜಿಲ್ಲಾ ನ್ಯಾಯಾಲಯದಲ್ಲಿ ನಿರ್ಮಲ್ ಅರ್ಜಿ ಸಲ್ಲಿಸಿದ್ದರು. ಪತ್ನಿ ಪರಮ್ಜಿತ್ ಪ್ರತಿವಾದ ಹೂಡಿ ವಿಚ್ಛೇದನದಿಂದ ತಪ್ಪಿಸಿಕೊಂಡಿದ್ದರು. ಅಂತಿಮವಾಗಿ ಸರ್ವೋಚ್ಚ ನ್ಯಾಯಾಲಯ ಆಕೆಯ ಹೃದಯಪೂರ್ವಕ ಪ್ರಾರ್ಥನೆಗೆ ಕರಗಿದೆ. 82ರ ಈ ಇಳಿವಯಸ್ಸಿನಲ್ಲಿ ನನಗೆ ವಿಚ್ಛೇದಿತೆ ಎಂಬ ನೋವಿನಿಂದ ಸಾಯುವ ಇಚ್ಛೆಯಿಲ್ಲ, ಈಗಲೂ ನಾನು ಅವರ ಸೇವೆ ಮಾಡಲು ಸಿದ್ಧನಿದ್ದೇನೆ.
ಈ ವಿವಾಹವನ್ನು ಪವಿತ್ರವಾಗಿಡುವ ಎಲ್ಲ ಯತ್ನವನ್ನೂ ನಾನು ಮಾಡಿದ್ದೇನೆಂದು ಪತ್ನಿ ಪರಮ್ಜಿತ್ ವಾದಿಸಿದ್ದರು. ಅದನ್ನು ಸರ್ವೋಚ್ಚ ಪೀಠ ಮಾನ್ಯ ಮಾಡಿದೆ. ಭಾರತದಲ್ಲಿ ಮದುವೆಯನ್ನು ದೈವೀಕ, ಧಾರ್ಮಿಕ, ಬೆಲೆಕಟ್ಟಲಾಗದ ಭಾವನಾತ್ಮಕ ಬೆಸುಗೆಯೆಂದು ಭಾವಿಸಲಾಗುತ್ತದೆ. ಹೀಗಾಗಿ ವಿಚ್ಛೇದನ ನೀಡಿದರೆ ಪರಮ್ಜಿತ್ಗೆ ಅನ್ಯಾಯವಾಗುತ್ತದೆ ಎಂದು ನ್ಯಾಯಪೀಠ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಲ್ಮಾನ್ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ
Panaji: ವಿಮಾನ ನಿಲ್ದಾಣದಲ್ಲಿ ಬಾಂಬ್! ಇ-ಮೇಲ್ ಮೂಲಕ ಬೆದರಿಕೆ
Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ
ಧ್ರುವ್ ರಾಠಿ ಮುಸ್ಲಿಂ, ಆತನ ಪತ್ನಿ ಪಾಕಿಸ್ತಾನಿ: ವೈರಲ್ ಪೋಸ್ಟ್ನ ಸತ್ಯಾಸತ್ಯತೆ ಏನು?
ಇನ್ಸ್ಟಾ ಪ್ರೊಫೈಲ್ ಮಾಯೆ: ಯುವತಿ ಎಂದು 45ರ ಆಂಟಿ ಜೊತೆ 20ರ ಯುವಕನ ಚಾಟ್: ಮುಂದೆ ಆದದ್ದು..
MUST WATCH
ಹೊಸ ಸೇರ್ಪಡೆ
Manipal ಆಸ್ಪತ್ರೆಯ ಡಾ.ರಾಮದಾಸ್ ಪೈ ಬ್ಲಾಕ್; 161 ವಿಶೇಷ ಹಾಸಿಗೆಗಳ ವಾರ್ಡ್ ಸೇವೆ ಆರಂಭ
ರಜಿನಿಕಾಂತ್ ʼಕೂಲಿʼಯಲ್ಲಿ ಅನುಮತಿಯಿಲ್ಲದೆ ಹಾಡು ಬಳಕೆ: ಲೀಗಲ್ ನೋಟಿಸ್ ಕಳುಹಿಸದ ಇಳಯರಾಜ
Viral: ಮದುವೆಯ ದಿನ ವಧುವಿಗೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಭಾವಚಿತ್ರ ಉಡುಗೊರೆ ನೀಡಿದ ವರ
ಅಯ್ಯೋ ಬಿಸಿಲು! ಕರಾವಳಿಯಲ್ಲಿ ಮಣ್ಣಿನ ತೇವಾಂಶ ಕಡಿಮೆ: ನೀರಿಲ್ಲ, ಫಸಲಿಲ್ಲ
Sandalwood: ಪ್ರೇಕ್ಷಕಳಾಗಿ ಕಾಂಗರೂ ನನಗೆ ಇಷ್ಟವಾಯಿತು..