Snake Bite: 9ನೇ ತರಗತಿ ವಿದ್ಯಾರ್ಥಿಗೆ 9 ಸಲ ಕಚ್ಚಿದ ಸರ್ಪ!
Team Udayavani, Aug 30, 2023, 12:12 AM IST
ವಾಡಿ: ಹಾವು ಕಣ್ಣಿಗೆ ಬಿದ್ದರೆ ಸಾಕು ಎದೆಯೊಡೆಯುತ್ತದೆ. ಇನ್ನೂ ಸರ್ಪ ಕಚ್ಚಿತೆಂದರೆ ಹೃದಯದ ಬಡಿತವೇ ನಿಂತು ಬಿಡುತ್ತದೆ. ಆದರೆ ಇಲ್ಲೊಬ್ಬ ಹುಡುಗನಿಗೆ ಹಾವು ಪದೇ ಪದೆ ಕಚ್ಚುತ್ತಿದ್ದು, ಅದರ ಕಾಟಕ್ಕೆ ಬೇಸತ್ತು ಊರು ತೊರೆದು ಮತ್ತೂಂದು ಊರಿಗೆ ಹೋಗಿ ನೆಲೆಸಿದರೂ ಅಲ್ಲಿಯೂ ಕಚ್ಚಿದೆ. ಬರೋಬ್ಬರಿ ಒಂಬತ್ತು ಸಲ ಹಾವು ಕಚ್ಚಿದ್ದು, ಬಾಲಕನ ಕುಟುಂಬಸ್ಥರ ನೆಮ್ಮದಿ ಕೆಡಿಸಿದೆ.
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ನಾಲವಾರ ವಲಯದ ಹಳಕರ್ಟಿ ಗ್ರಾಮದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಗ್ರಾಮದ ನಿವಾಸಿ ವಿಜಕುಮಾರ ರಾವೂರಕರ ಅವರ ಪುತ್ರ ರಾವೂರ ಶ್ರೀ ಸಿದ್ಧಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯಲ್ಲಿ ಒಂಬತ್ತನೇ ತರಗತಿ ಯಲ್ಲಿ ಓದುತ್ತಿರುವ ಪ್ರಜ್ವಲ್ ವಿಜಯಕುಮಾರ (13) ಪದೇ ಪದೆ ಹಾವು ಕಡಿತಕ್ಕೊಳಗಾಗುತ್ತಿದ್ದ. ಆರಂಭದಲ್ಲಿ ಆರು ಸಲ ಮನೆಯಲ್ಲೇ ಕಾಲಿಗೆ ಕಡಿದಿತ್ತು. ಇದರಿಂದ ಬೇಸತ್ತು ಊರು ತೊರೆದು ವಾಡಿ ಪಟ್ಟಣದ ಬಳಿರಾಮ ಚೌಕ್ ಬಡಾವಣೆಯಲ್ಲಿ ಬಾಡಿಗೆ ಮನೆ ಪಡೆದು ವಾಸವಿದ್ದರೂ ಬಿಡದ ಸರ್ಪ ಮೂರು ಸಲ ಕೈ ಬೆರಳಿಗೆ ಕಡಿದಿದೆ. ಆ. 26ರಂದು ಬಾಲಕನಿಗೆ ಹಾವು ಕಡಿದಿದ್ದು, ಸದ್ಯ ಕಲಬುರಗಿ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಒಂಬತ್ತು ಬಾರಿ ಹಾವು ಕಡಿದರೂ ಮಗನ ಪ್ರಾಣಕ್ಕೆ ತೊಂದರೆಯಾಗಿಲ್ಲ. ಚಿಕಿತ್ಸೆ ಪಡೆದು ಆರೋಗ್ಯವಾಗಿದ್ದಾನೆ. ಈ ಹಾವುಗಳು ನಮ್ಮ ಮಗನ ಬೆನ್ನಟ್ಟಿದ್ದೇಕೆ ಎಂಬುದೇ ಅರ್ಥ ವಾಗುತ್ತಿಲ್ಲ ಎಂದು ಆತನ ತಂದೆ ವಿಜಕುಮಾರ ರಾವೂರಕರ “ಉದಯವಾಣಿ’ ಜತೆ ಆತಂಕ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್
MUST WATCH
ಹೊಸ ಸೇರ್ಪಡೆ
Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ
Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ
Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ