Anegondi ವಾಲೀಕಿಲ್ಲಾ,ಹೇಮಗುಡ್ಡ ದಸರಾಕ್ಕಿದೆ ಕುಮ್ಮಟದುರ್ಗದ ಇತಿಹಾಸದ ಮೆರಗು

9 ದಿನಗಳ ಕಾಲ ದೇವಿ ಪುರಾಣ ಪ್ರವಚನ...ವಿಜಯದಶಮಿಯಂದು ಉಚಿತ ಸಾಮೂಹಿಕ ವಿವಾಹ

Team Udayavani, Oct 15, 2023, 7:20 PM IST

AANEG

ಗಂಗಾವತಿ: ನಾಡ ಹಬ್ಬ ದಸರಾ ನವರಾತ್ರಿ ಹಬ್ಬ ತಾಲೂಕಿನ ಆನೆಗೊಂದಿ ವಾಲೀಕಿಲ್ಲಾ, ಹೇಮಗುಡ್ಡ ಸೇರಿ ನಗರ ಮತ್ತು ತಾಲೂಕಿನ ವಿವಿಧೆಡೆ 9 ದಿನಗಳ ಕಾಲ ದೇವಿಯ ಆರಾಧನೆ 10ನೇ ದಿನದಂದು ವಿಜಯದಶಮಿ ಆಚರಣೆಗೆ ರವಿವಾರದಂದು ಘಟಸ್ಥಾಪನೆ ಮೂಲಕ ಚಾಲನೆ ದೊರಕಿದೆ.

ಪ್ರಸ್ತುತ ಮೈಸೂರಿನ ನಾಡ ಹಬ್ಬ ದಸರಾದ ಮೂಲ ತಾಲೂಕಿನ ಕುಮ್ಮಟದುರ್ಗ, ಹೇಮಗುಡ್ಡ ಹಾಗೂ ಆನೆಗೊಂದಿಯಾಗಿದ್ದು ಕಾಲಾಂತರದಲ್ಲಿ ವಿಜಯನಗರ ಸಾಮ್ರಾಜ್ಯ ಪಥನವಾದ ನಂತರ ಮೈಸೂರಿನ ಅರಸರು ದಸರಾವನ್ನು ಆಚರಿಸಿಕೊಂಡು ಬಂದಿದ್ದು ಏಕೀಕರಣದ ನಂತರ ರಾಜ್ಯ ಸರಕಾರ ದಸರಾವನ್ನು ನಾಡ ಹಬ್ಬವೆಂದು ಮೈಸೂರಿನಲ್ಲಿ 9 ದಿನಗಳ ಕಾಲ ವಿವಿಧ ಕಾರ್ಯಕ್ರಮಗಳ ಮೂಲಕ ಆಚರಿಸಿ 10 ನೇ ದಿನ ಆನೆ ಅಂಬಾರಿಯಲ್ಲಿ ನಾಡದೇವತೆ ಚಾಮುಂಡಿ ತಾಯಿಯ ವಿಗ್ರಹವನ್ನು ಮೆರವಣಿಗೆ ಮಾಡಿ ವಿಜಯೋತ್ಸವದ ಮೂಲಕ ಬನ್ನಿ ಮುಡಿಯಲಾಗುತ್ತದೆ.

ಮೊದಲು ದಸರಾ ಹಬ್ಬವನ್ನು ಕುಮ್ಮಟದುರ್ಗ ಅರಸರು ಆಚರಣೆಗೆ ತಂದರು. ಶತ್ರುಗಳ ವಿರುದ್ಧ ದಸರಾ ಸಂದರ್ಭದಲ್ಲಿ ದೊರೆತ ವಿಜಯವನ್ನು ವಿಜಯದಶಮಿ ಎಂದು ಆಚರಿಸುವ ಮೂಲಕ ಆರಂಭವಾದ ನವರಾತ್ರಿ ಹಬ್ಬ ಪ್ರಸ್ತುತ ಧಾರ್ಮಿಕ ಕಾರ್ಯಕ್ರಮಗಳಿಗೆ ಮೀಸಲಾಗಿದೆ.

ತಾಲೂಕಿನ ಆನೆಗೊಂದಿಯ ವಾಲೀಕಿಲ್ಲಾ ದೇವಾಲಯ, ಪಂಪಾಸರೋವರದಲ್ಲಿ 9 ದಿನಗಳ ಕಾಲ ದೇವಿ ಪುರಾಣ, ಹೋಮ ಹವನ ಸೇರಿ ಹಲವು ಕಾರ್ಯಕ್ರಮಗಳು ನಡೆಯತ್ತವೆ. ಕುಮ್ಮಟದುರ್ಗ ಅರಸರ ದೈವ ಜಟ್ಟಂಗಿ ರಾಮೇಶ್ವರ ಮತ್ತು ದುರ್ಗಾಪರಮೇಶ್ವರಿಯಾಗಿದ್ದರು. ಪ್ರಸ್ತುತ ಹೇಮಗುಡ್ಡದಲ್ಲಿರುವ ದುರ್ಗಾಪರಮೇಶ್ವರಿ ದೇವಾಲಯವನ್ನು 35 ವರ್ಷಗಳ ಹಿಂದೆ ಮಾಜಿ ಸಂಸದ ಎಚ್.ಜಿ.ರಾಮುಲು ಜೀರ್ಣೋದ್ಧಾರ ಮಾಡಿದ ನಂತರ ಸತತವಾಗಿ ನವರಾತ್ರಿ ದಸರಾ ಹಬ್ಬವನ್ನು ಅವರ ಕುಟುಂಬದವರು ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ ನೇತೃತ್ವದಲ್ಲಿ ಶ್ರದ್ಧೆ, ಭಕ್ತಿಯಿಂದ ಆಚರಿಸಲಾಗುತ್ತದೆ. ಕೊನೆಯ ದಿನ ಉಚಿತ ಸಾಮೂಹಿಕ ಮದುವೆಗಳು ಹಾಗೂ ಆನೆ ಅಂಬಾರಿಯಲ್ಲಿ ದುರ್ಗಾ ಪರಮೇಶ್ವರಿಯ ಮೂರ್ತಿಯನ್ನಿರಿಸಿ ಜಂಬೂ ಸವಾರಿ ಜರುಗುತ್ತದೆ. ನಾಡಿನ ವಿವಿಧ ಭಾಗದಿಂದ ಸಂಸ್ಕೃತಿಕ ಕಲಾ ತಂಡಗಳು ಆಗಮಿಸಿ ಅಂಬಾರಿ ಮೆರವಣಿಗೆಗೆ ಶೋಭೆ ತರುತ್ತವೆ. 9 ದಿನಗಳ ಕಾಲ ಅನ್ನದಾಸೋಹದ ವ್ಯವಸ್ಥೆಯನ್ನು ಎಚ್‌ಆರ್‌ಜಿ ಕುಟುಂಬದವರು ಮಾಡುತ್ತಾರೆ.

ಗಂಗಾವತಿ ನಗರದ ವೆಂಕಟೇಶ್ವರ ದೇವಾಲಯ, ಇಸ್ಲಾಂಪೂರದಲ್ಲಿರುವ ಶ್ರೀ ರೇಣುಕಾ ಯಲ್ಲಮ್ಮ ದೇಗುಲ, ಜುಲೈನಗರದ ಉದ್ಭಲ ಮಹಾಲಕ್ಷ್ಮಿ ದೇಗುಲ, ಪ್ರಶಾಂತನಗರ, ಅಂಗಡಿ ಸಂಗಣ್ಣ ಕ್ಯಾಂಪ್ ಬನಶಂಕರಿ ದೇಗುಲ, ಹಿರೇಜಂತಗಲ್ ದ್ಯಾಮಮ್ಮ ದೇಗುಲ, ನೀಲಕಂಠೇಶ್ವರ ಕ್ಯಾಂಪಿನ ಬನ್ನಿಮಹಾಂಕಾಳಿ ದೇಗುಲ, ಬನ್ನಿಗಿಡದ ಕ್ಯಾಂಪಿನ ಬನ್ನಿಮಹಾಂಕಾಳಿ ದೇಗುಲಗಳಲ್ಲಿ 9 ದಿನಗಳ ಕಾಲ ದೇವಿಯ ಆರಾಧನೆ ಮತ್ತು ಹಲವು ಧಾರ್ಮಿಕ ಕಾರ್ಯಕ್ರಮಗಳು ಮತ್ತು ನಿತ್ಯ ಅನ್ನಸಂತರ್ಪಣೆ ಜರುಗುತ್ತದೆ.

ಕೆ.ನಿಂಗಜ್ಜ

ಟಾಪ್ ನ್ಯೂಸ್

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

13-bk-hariprasad

ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್

12-prakash-raj

April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ

Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ

Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.