ಹೊಸಪೇಟೆ: ಅಪ್ಪು ಅಭಿಮಾನ;ನೇತ್ರದಾನಕ್ಕೆ 1843 ಜನರ ನೋಂದಣಿ
ರಕ್ತದಾನ ಮಾಡಿದ 315ಕ್ಕೂ ಹೆಚ್ಚು ಜನ
Team Udayavani, Nov 19, 2021, 8:06 PM IST
ರಕ್ತದಾನ ಮಾಡಿದ 315ಕ್ಕೂ ಹೆಚ್ಚು ಜನ
ಹೊಸಪೇಟೆ: ನಟ ಪುನೀತ್ ರಾಜಕುಮಾರ್ ಅವರ 21ನೇ ದಿನದ ಪುಣ್ಯಸ್ಮರಣೆ ನಿಮಿತ್ತ ಅಪ್ಪು ಅಭಿಮಾನಿಗಳು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ನೇತ್ರದಾನ, ರಕ್ತದಾನ ಹಾಗೂ ಅನ್ನಸಂತರ್ಪಣೆ ನಡೆಸುವ ಮೂಲಕ ಅಭಿಮಾನ ಮೆರೆದರು.
ಬಿಜೆಪಿ ಮುಖಂಡ ಧಮೇಂದ್ರ ಸಿಂಗ್ ಹಾಗೂ ಸಿದ್ಧಾರ್ಥ ಸಿಂಗ್ ಅವರು ಅಪ್ಪು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಶಿಬಿರಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮನಷ್ಯ ಬದುಕಿದ್ದಾಗ ಅವನ ಬಗ್ಗೆ ತಿಳಿದಿರುವುದಿಲ್ಲ. ಆತ ಸತ್ತ ಮೇಲೆ ಅವನು ಮಾಡಿದ ಉತ್ತಮ ಕಾರ್ಯಗಳು ಬೆಳಕಿಗೆ ಬರುತ್ತವೆ. ಉಸಿರು ನಿಂತ ಮೇಲೆ ಅವರ ಹೆಸರು, ಸಾಮಾಜಿಕ ಕೆಲಸ-ಕಾರ್ಯಗಳು ಜನಮಾನಸದಲ್ಲಿ ಉಳಿಯುತ್ತವೆ. ಈ ನಿಟ್ಟಿನಲ್ಲಿ ನಟ ಪುನೀತ್ ರಾಜಕುಮಾರ್ ಅವರು ಅತ್ಯಂತ ಎತ್ತರದಲ್ಲಿ ನಿಲ್ಲುತ್ತಾರೆ. ಅವರು ವಿದ್ಯಾರ್ಥಿ-ಯುವಜನರಿಗೆ ಪ್ರೇರಣೆಯಾಗಿದ್ದಾರೆ. ಇಂದು ನಡೆದ ಸ್ವಯಂ ಪ್ರೇರಿತ ನೇತ್ರದಾನಕ್ಕೆ ನೋಂದಣಿ-ರಕ್ತದಾನ ಕಾರ್ಯಕ್ರಮದಲ್ಲಿ ಅನೇಕರು ನೇತ್ರ-ರಕ್ತದಾನ ಮಾಡಿರುವುದೇ ಸಾಕ್ಷಿಯಾಗಿದೆ. ನಟ ಪುನೀತ್ ಅವರ ಆದರ್ಶವನ್ನು ಯುವಜನರು ಮೈಗೂಡಿಸಿಕೊಂಡು ಸಮಾಜಮುಖೀಯಾಗಬೇಕು ಎಂದು ಸಲಹೆ ನೀಡಿದರು.
ಶಾನಬಾಗ್ ವೃತ್ತಕ್ಕೆ ಪುನೀತ್ ಹೆಸರಿಡಿ
ನಗರದ ಶಾನಬಾಗ್ ವೃತ್ತಕ್ಕೆ ನೂತನ ವರ್ಷ ಜನವರಿ-1ರಂದು ನಟ ಪುನೀತ್ ರಾಜಕುಮಾರ್ ನಾಮಕರಣ ಮಾಡಬೇಕು ಎಂದು ಅಭಿಮಾನಿಗಳು ಒತ್ತಾಯಿಸಿದರು. ಸಚಿವ ಆನಂದ ಸಿಂಗ್ ಅವರ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
ಕಿಚಿಡಿ ವಿಶ್ವ, ತಾಯಪ್ಪ ಜೋಗಿ, ಗುಡುಗಂಟಿ ಮಲ್ಲಿಕಾರ್ಜುನ, ಕಣ್ಣಿ ಶ್ರೀಕಂಠ, ಶ್ಯಾಮ್ ಸಿಂಗ್, ಕಿಚಿಡಿ ಶ್ರೀನಿವಾಸ, ಬೆಳಗೋಡ್ ಮಂಜುನಾಥ, ಫಕ್ಕಿರಪ್ಪ, ಕೆ.ಎಂ. ಸಂತೋಷ್, ಜೆ.ಡಿ. ಮಂಜುನಾಥ, ಗುಜ್ಜಲ್ ರಘು, ಜೆ.ಬಾಲಾಜಿ, ಪರಶುರಾಮ, ಪ್ರಭು, ರಾಜು, ಕೆ.ಮಂಜುನಾಥ, ಯಮನೂರಪ್ಪ ಸಾವಿರಾರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಇದ್ದರು. ಶಿಬಿರದಲ್ಲಿ ಸಿದ್ಧಾರ್ಥ ಸಿಂಗ್, ಶ್ಯಾಮ್ ಸಿಂಗ್, ಗುಜ್ಜಲರಾಘು, ಬೆಳಗೋಡ್ ಮಂಜುನಾಥ ಇನ್ನಿತರೆ ಗಣ್ಯರು ರಕ್ತದಾನ ಗೈದರು.
ಅನ್ನಸಂತರ್ಪಣೆ ಕಾರ್ಯದಲ್ಲಿ ಸಾವಿರಾರು ಜನರು ಊಟ ಮಾಡಿದರು. 18430ಕ್ಕೂ ಹೆಚ್ಚು ಜನರು, ನೇತ್ರದಾನಕ್ಕೆ ನೋಂದಣಿ ಮಾಡಿಸಿದರೆ, 315ಕ್ಕೂ ಹೆಚ್ಚು ಜನರು ರಕ್ತದಾನ ಮಾಡುವ ಮೂಲಕ ತಮ್ಮ ನೆಚ್ಚಿನ ನಾಯಕನಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ
BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ
ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
MUST WATCH
ಹೊಸ ಸೇರ್ಪಡೆ
Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ
Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ
Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ
ಬಿಗ್ಬಾಸ್ ವಿನ್ನರ್ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ