Bagalkot: ತೇಜಸ್ವಿನಿ ಹಿರೇಮಠಗೆ ಮಿಸೆಸ್ ಇಂಡಿಯಾ ಕಿರೀಟ; ಸಾಮಾಜಿಕ ಸೇವೆಯಲ್ಲೂ ಖ್ಯಾತಿ
Team Udayavani, May 17, 2023, 4:00 PM IST
ಬಾಗಲಕೋಟೆ: ತೇಜಸ್ವಿನಿ ಹಿರೇಮಠಗೆ ಮಿಸೆಸ್ ಸಾಮಾಜಿಕ ಸೇವೆಯಲ್ಲೂ ಖ್ಯಾತಿ ಬಾಗಲಕೋಟೆ: ರಾಷ್ಟ್ರ ಮಟ್ಟದ ಮಿಸೆಸ್ ಇಂಡಿಯಾ ಕ್ವೀನ್-2023-24ರ ಪೆಹಚಾನ್ ಮೇರಿ ಸ್ಪರ್ಧೆಯಲ್ಲಿ ಬಾಗಲಕೋಟೆಯ ಒಂದು ಮಗುವಿನ ತಾಯಿ, ಎರಡು ಕಿರೀಟ ಮುಡಿಗೇರಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.
ನಿಜ, ಎಸ್.ಆರ್. ಕ್ವೀನ್ಸ್ ಮೀಡಿಯಾ ಸಂಸ್ಥೆಯಿಂದ ದುಬೈನಲ್ಲಿ ಆಯೋಜಿಸಿದ್ದ ಮಿಸೆಸ್ ಇಂಡಿಯಾ ಕ್ವೀನ್-2023-2024
ಪೆಹಚಾನ್ ಮೇರಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಬಾಗಲಕೋಟೆಯ ತೇಜಸ್ವಿನಿ ಹಿರೇಮಠ, ವಿಶಿಷ್ಟ ಸಾಧನೆ ಮಾಡಿದ್ದಾರೆ.
ಒಂದೇ ಸ್ಪರ್ಧೆಯಲ್ಲಿ ಎರಡು ಕಿರೀಟ ಮುಡಿಗೇರಿಸುವ ಮೂಲಕ ತಮ್ಮದೇ ಆದ ಛಾಪು ಮೂಡಿಸಿದ್ದು, ಈ ಸ್ಪರ್ಧೆಯಲ್ಲಿ
ಮಿಸೆಸ್ ಕರ್ನಾಟಕ ಹಾಗೂ ಮಿಸೆಸ್ ಗಾಡೆಸ್ ಅಂಬಾಸೆಡರ್ ಎಂಬ ಟೈಟಲ್ಗಳನ್ನು ಮುಡಿಗೇರಿಸಿರುವ ತೇಜಸ್ವಿನಿ, ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ಎಸ್.ಆರ್ ಕ್ವೀನ್ ಮೀಡಿಯಾ ಸಂಸ್ಥೆಯು, ಮಿಸೆಸ್ ಇಂಡಿಯಾ ಇಂಟರ್ನಾಷನಲ್ ಬ್ಯುಟಿ ಪೇಜೆಂಟ್ ಸ್ಪರ್ಧೆ ಏರ್ಪಡಿಸುವ ಮೂಲಕ ಭಾರತೀಯ ಮಹಿಳೆಯರನ್ನು ಗೌರವಿಸುವ ಕೆಲಸ ಮಾಡಿಕೊಂಡು ಬರುತ್ತಿದೆ. ತಾಯಿ, ಹೆಂಡತಿ,ಗೃƒಹಿಣಿ, ಕೆಲಸ ಮಾಡುತ್ತಿರುವ ಮಹಿಳೆ ಹೀಗೆ ಯಾರೇ ಇದ್ದರೂ, ಅವರಿಗೆ ವೇದಿಕೆ ಕಲ್ಪಿಸುವುದು ಈ ಸ್ಪರ್ಧೆಯ ಉದ್ದೇಶ. ವಿಶ್ವದ ಎಲ್ಲೆಡೆ ಮಹಿಳೆಯರಿಗಾಗಿಯೇ ಈ ಸ್ಪರ್ಧೆ ವಿಶೇಷವಾಗಿ ಆಯೋಜಿಸುತ್ತಿದ್ದು, ಸಾಮಾಜಿಕವಾಗಿ ಅವರಿಗೆ ವಿಶೇಷ ಸ್ಥಾನ-ಮಾನ
ಕಲ್ಪಿಸುವ ಉದ್ದೇಶವೂ ಹೊಂದಿದೆ. ವಿನ್ಯಾಸಗಾರರು, ತರಬೇತುದಾರರು, ವೃತ್ತಿಪರರು ಸೇರಿದಂತೆ ಫ್ಯಾಷನ್ ಜಗತ್ತಿನ ವಿವಿಧ ಆಯಾಮಗಳ ದಿಗ್ಗಜರುಪಾಲ್ಗೊಳ್ಳುವ ಈ ಸ್ಪರ್ಧೆಯಲ್ಲಿ ಮಹಿಳೆಯರ ಪರಿಪೂರ್ಣ ವ್ಯಕ್ತಿತ್ವವನ್ನು ಅಳತೆಗೋಲಾಗಿಸಿ,
ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ. ತೇಜಶ್ವಿನಿ ಹಿರೇಮಠ ಅವರು, ಬಾಗಲಕೋಟೆಯ ವಿದ್ಯಾಗಿರಿಯ ನಿವಾಸಿಯಾಗಿದ್ದು, ಓರ್ವ ಮಗುವಿನ ತಾಯಿಯಾಗಿದ್ದಾರೆ. ಮುಖ್ಯವಾಗಿ ಬಾಲ್ಯ ವಿವಾಹ ನಿಷೇಧ ಕಾನೂನು, ಜಿಲ್ಲೆಯಲ್ಲಿ ವ್ಯವಸ್ಥಿತ ಹಾಗೂ ಕಟ್ಟುನಿಟ್ಟಾಗಿಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಸಮಿತಿಯ ಸದಸ್ಯರಾಗಿ, ಸಾಮಾಜಿಕ ಸೇವೆಯಲ್ಲೂ ವಿಶೇಷ
ಹೆಸರು ಮಾಡಿದ್ದಾರೆ. ಸ್ಪರ್ಧೆಯಲ್ಲಿ ಬಾಲಿಸರು ಮಾಡಿದ್ದಾರೆ. ಸ್ಪರ್ಧೆಯಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ, ಡಾ| ವರುಣ್ ಕುಟಿಯಾಲ್, ಶ್ವೇತಾ ರಾಯ್, ಪೂಜಾ ಪರಮೇಶ್ವರ ಅವರಂತಹ ದಿಗ್ಗಜರು ತೀರ್ಪುಗಾರರಾಗಿದ್ದರು
ಎಂದು ಪ್ರಕಟಣೆ ತಿಳಿಸಿದೆ.
ಎಲ್ಲ ಸೌಂದರ್ಯ ಸ್ಪರ್ಧೆಗಳಲ್ಲಿ ದೇಹದ ವಿನ್ಯಾಸ, ಸೌಂದರ್ಯಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಆದರೆ, ಈ ಸ್ಪರ್ಧೆಯಲ್ಲಿ
ಮಹಿಳೆಯ ವ್ಯಕ್ತಿತ್ವಕ್ಕೆ ಪ್ರಾಧಾನ್ಯತೆ ನೀಡುವುದು ಗಮನ ಸೆಳೆಯುತ್ತದೆ. ಮಹಿಳೆಯರೂ ಆತ್ಮವಿಶ್ವಾಸದಿಂದ ಪಾಲ್ಗೊಂಡಿದ್ದು,
ಅವರಿಗೆ ಅವರ ಪತಿ ಕೂಡ ಪ್ರೋತ್ಸಾಹ ನೀಡುತ್ತಿರುವುದು ಹೆಮ್ಮೆಯ ಸಂಗತಿ.
ಶಿಲ್ಪಾ ಶೆಟ್ಟಿ, ಬಾಲಿವುಡ್ ನಟಿ
ವಶೇಷ ವರದಿ