ಬಂಟರ ಸಂಘ ಪೆರ್ಡೂರು: ಫೆ.11ರಂದು ಸಮುದಾಯ ಭವನ, Conventional Hall ಉದ್ಘಾಟನೆ

ಅತ್ಯಾಕರ್ಷಕ ಒಳಾಂಗಣ ವಿನ್ಯಾಸದ ಭವ್ಯ ಸಮುದಾಯ ಭವನ

Team Udayavani, Feb 6, 2024, 12:58 PM IST

ಬಂಟರ ಸಂಘ ಪೆರ್ಡೂರು: ಫೆ.11ರಂದು ಸಮುದಾಯ ಭವನ, Conventional Hall ಉದ್ಘಾಟನೆ

ಉಡುಪಿ: ಬಾಳೆ ಹಣ್ಣಿಗೆ ಒಲಿವ ಭಗವಂತ ನೆಂದ ಖ್ಯಾತಿಯಾದ ಪೆರ್ಡೂರು ಕದಳೀಪ್ರಿಯ ಶ್ರೀ ಅನಂತಪದ್ಮನಾಭನದ ಪುಣ್ಯ ಕ್ಷೇತ್ರದಲ್ಲಿ ಇದೀಗ ಸಂಭ್ರಮ. ಈಗಾಗಲೇ ಹತ್ತು ಹಲವಾರು ಸಮಾಜಮುಖೀ ಚಟುವಟಿಕೆಯಲ್ಲಿ ಗುರುತಿಸಿಕೊಂಡ ಬಂಟರ
ಸಂಘ ಪೆರ್ಡೂರು ಮಂಡಲದಿಂದ ಅತ್ಯಾಧುನಿಕ ಸೌಲಭ್ಯದ ಆಕರ್ಷಕ ಸಮುದಾಯ ಭವನ ನಿರ್ಮಾಣಗೊಂಡಿದ್ದು ಫೆ.11ರಂದು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಲೋಕಾರ್ಪಣೆಗೊಳ್ಳಲಿದೆ.

ಉಡುಪಿ ಆಗುಂಬೆ ರಾಷ್ಟ್ರೀಯ ಹೆದ್ದಾರಿ 169(ಎ)ಗೆ ತಾಗಿ ಕೊಂಡು ಪೆಡೂ೯ರಿನಲ್ಲಿ ಹಚ್ಚ ಹಸಿರಿನ ಪರಿಸರದ ನಡುವೆ 3.5 ಎಕರೆ ವಿಶಾಲವಾದ ಪ್ರದೇಶದಲ್ಲಿ ನಿಮಾ೯ಣಗೊಂಡಿರುವ ಈ ಸಮುದಾಯ ಭವನವನ್ನು ಅತ್ಯಾಧುನಿಕ ಹಾಗೂ ಗುಣಮಟ್ಟದ ಪರಿಕರಗಳನ್ನು ಬಳಸಿಕೊಂಡು ಪರಿಸರ ಸ್ನೇಹಿ ಕಟ್ಟಡವಾಗಿ ನಿರ್ಮಿಸಲಾಗಿದೆ.

2022 ಮೇ 8 ರಂದು ಮಣಿಪಾಲ ಮಾಹೆಯ ಕುಲಪತಿ ಎಚ್ .ಎಸ್ .ಬಲ್ಲಾಳ್ ಅವರ ಅಮೃತ ಹಸ್ತದಿಂದ ಶಿಲಾನ್ಯಾಸಗೊಂಡ ಕಟ್ಟಡ ಅತೀ ಕಡಿಮೆ ಅವಧಿಯಲ್ಲಿ ಪರಿಸರ ಪೂರಕವಾಗಿ ನಿಮಾ೯ಣಗೊಂಡಿದೆ.

ಈ ಸಮುದಾಯ ಭವನ ಕೇವಲ ಉಡುಪಿ ,ದ.ಕ.ಜಿಲ್ಲೆ ಮಾತ್ರವಲ್ಲದೆ ರಾಜ್ಯ ಹಾಗೂ ಹೊರ ರಾಜ್ಯದ ಜನರನ್ನು ಆಕಷಿ೯ಸುವಂತೆ ಇದೆ. ಅದ್ದೂರಿ ಮದುವೆ ನಡೆಸಲು ಅದ್ದೂರಿ ಸಮುದಾಯ ಭವನ ಹುಡುಕಿಕೊಂಡು ನಗರಗಳಿಗೆ ಹೋಗೋದು ಇನ್ನು ಬೇಡ. ಬಂಟರ ಸಂಘ ಪೆರ್ಡೂರು ಮಂಡಲದ ಸಮುದಾಯ ಭವನದಲ್ಲೇ ಸಿಗಲಿದೆ ಸಕಲ ಸೌಲಭ್ಯ. ಏಕಕಾಲದಲ್ಲಿ ಸಾವಿರಾರು ಮಂದಿ ಸೇರಿ, ಮದುವೆ ಸಮಾರಂಭ ಹಾಗೂ ಇನ್ನಿತರ ಕಾರ್ಯಕ್ರಮಗಳನ್ನು ನಡೆಸಿ ಸಂಭ್ರಮಿಸಲು ಗ್ರಾಮೀಣ ಪ್ರದೇಶವಾದ ಪೆರ್ಡೂರಿನಲ್ಲೇ ಇದೆ ಸುಸಜ್ಜಿತ ಸಮುದಾಯಭವನ.

ಬಂಟರ ಸಂಘ ಪೆರ್ಡೂರು ಮಂಡಲ ಹೇಗಾಯಿತು
ಹಿಂದೆ ಒಂದು ಬಾರಿ ಮಂಡಲ ಪಂಚಾಯತ್‌ ವ್ಯವಸ್ಥೆ ಜಾರಿಯಾದಾಗ ಬೈರಂಪಳ್ಳಿ , 41ನೇ ಶೀರೂರು, ಬೆಳ್ಳರ್ಪಾಡಿ ಪೆರ್ಡೂರು ಗ್ರಾಮಗಳು ಸೇರಿ ಪೆರ್ಡೂರು ಮಂಡಲ ಪಂಚಾಯತ್‌ ಆಯಿತು.ಅನಂತರ ಮತ್ತೆ ಪುನಃ ಮೊದಲಿನಂತೆ ಪಂಚಾಯತ್‌ ವ್ಯವಸ್ಥೆ ಜಾರಿಯಾಗಿ ಮೂರು ಗ್ರಾಮಗಳು ಸೇರಿ ಬೆ„ರಂಪಳ್ಳಿ ಗ್ರಾಮ ಪಂಚಾಯತ್‌ ಹಾಗೂ ಪೆರ್ಡೂರು ಗ್ರಾಮ ಪಂಚಾಯತ್‌ ಆಗಿ ಪ್ರತ್ಯೇಕವಾಯಿತು. ಆದರೆ ಹಿರಿಯರು ಪೆರ್ಡೂರಿನಲ್ಲಿ 1991ರಲ್ಲಿ ಬಂಟರ ಸಂಘವನ್ನು ಪ್ರಾರಂಭಿಸಿದಾಗ ಮೊದಲಿನಂತೆ 4 ಗ್ರಾಮಗಳನ್ನು ಸೇರಿಸಿಕೊಂಡು ಬಂಟರ ಸಂಘ ಪೆರ್ಡೂರು ಮಂಡಲ ಎಂದು ನಾಮಕರಣ ಮಾಡಿದರು.

ಅತೀ ಸಣ್ಣ ಗ್ರಾಮ ಹಾಗೂ ಕಡಿಮೆ ಬಂಟ ಸಮಾಜದವರು ಇರುವ ಈ ಮೂರು ಗ್ರಾಮದಲ್ಲಿ ಬಂಟರ ಜನ ಸಂಖ್ಯೆ ಪೆರ್ಡೂರು ಗ್ರಾಮಕ್ಕೆ ಹೋಲಿಸಿದರೆ ಮೂರನೇ ಒಂದರಷ್ಟು ಇರಬಹುದು. ಅದ್ದರಿಂದ 3 ಗ್ರಾಮಗಳನ್ನು ಪೆರ್ಡೂರು ಬಂಟರ ಸಂಘಕ್ಕೆ ಸೇರಿಸಿಕೊಂಡಿರುವುದು ಈ ಭಾಗದ ಬಂಟರ ಅದೃಷ್ಟ ಎಂದು ಇಲ್ಲಿನ ಬಂಟ ಸಮಾಜ ಭಾಂದವರ ಅನಿಸಿಕೆ. 2018ರಲ್ಲಿ ಶಾಂತಾರಾಮ ಸೂಡ ಅವರ ಅಧ್ಯಕ್ಷತೆಯಲ್ಲಿ ನೂತನ ಕಾರ್ಯಕಾರಿ ಸಮಿತಿ ಆಯ್ಕೆಯಾಗುವಾಗ ಈ ಮೂರು ಗ್ರಾಮಗಳಿಗೂ ಪದಾಧಿಕಾರಿಗಳ ಅವಕಾಶ ಸಿಕ್ಕಿರುವುದನ್ನು ಸಮಾಜ ಭಾಂದವರು ನೆನಪಿಸಿಕೊಳ್ಳುತ್ತಾರೆ. ಇದೀಗ ನೂತನ ಸಮುದಾಯ ಭವನ ನಿರ್ಮಾಣಗೊಂಡು ಬಂಟರ ಸಂಘದ ಪ್ರಮುಖ ಭಾಗವಾಗಿ ಸಂಭ್ರಮಿಸುವ ಅವಕಾಶ ಸಿಕ್ಕಿರುವುದು ನಮ್ಮ ಭಾಗ್ಯ ಎಂದು ಈ ಭಾಗದ ಬಂಟ ಸಮಾಜ ಭಾಂದವರು ಹೇಳುತ್ತಾರೆ.

ಶ್ರೀಧರ್‌ ಕೆ. ಶೆಟ್ಟಿ ಕುತ್ಯಾರುಬೀಡು

ಸಮುದಾಯ ಭವನದ ವೈಶಿಷ್ಟ್ಯತೆ
•ಅತ್ಯಾಕರ್ಷಕ ಒಳಾಂಗಣ ವಿನ್ಯಾಸದ ಭವ್ಯ ಸಮುದಾಯ ಭವನ
•ಸುಮಾರು 900ಕ್ಕೂ ಮಿಕ್ಕಿ ಆಸನವುಳ್ಳ ಹವಾನಿಯಂತ್ರಿತ ಸಭಾಭವನ
•600ಕ್ಕೂ ಮಿಕ್ಕಿ ಜನರಿಗೆ ಆಸನ ವ್ಯವಸ್ಥೆಯ ಊಟದ ಹಾಲ್‌
•ಸಸ್ಯಹಾರ ಮತ್ತು ಮಾಂಸಹಾರಕ್ಕೆ ಪ್ರತ್ಯೇಕ ಅತ್ಯಾಧುನಿಕ ಕಿಚನ್‌ ಹಾಲ್‌
•ವಿಶಾಲವಾದ ವೇದಿಕೆ, ಬೃಹತ್‌ ಗ್ರೀನ್‌ ರೂಮ್‌
•ಉಳಿದುಕೊಳ್ಳಲು ಯೋಗ್ಯವಾದ ಆಧುನಿಕ ಹವಾನಿಯಂತ್ರಿತ ಅತಿಥಿಗೃಹ
•ದಿನದ 24 ಗಂಟೆ ಲಿಫ್ಟ್‌ ಹಾಗೂ ನೀರಿನ ವ್ಯವಸ್ಥೆ
•ಪೆರ್ಡೂರು ಬಂಟರ ಸೌಹಾರ್ದ ಸಹಕಾರಿಯ ಮುಖ್ಯ ಕಚೇರಿ
•ಭದ್ರತಾ ಸಿಬ್ಬಂದಿ ಯೊಂದಿಗೆ ವಿಶಾಲವಾದ ಪಾರ್ಕಿಂಗ್‌ ವ್ಯವಸ್ಥೆ

ಸಾಂಸ್ಕೃತಿಕ ಕಾರ್ಯಕ್ರಮ
ದಿನಾಂಕ : 11-02-2024

ಬೆಳಿಗ್ಗೆ 8.30ರಿಂದ: ಕಲರ್ ಕನ್ನಡ ಖ್ಯಾತಿಯ ತುಳುನಾಡ ಗಾನ ಗಂಧರ್ವ ಬಿರುದಾಂಕಿತ ಪುತ್ತೂರು ಜಗದೀಶ್‌ ಆಚಾರ್ಯ ಮತ್ತು ಬಳಗದವರಿಂದ ಭಕ್ತಿ ಸಂಗೀತ ರಸಮಂಜರಿ.

ಸಮಯ : ಮಧ್ಯಾಹ್ನ 2.30ರಿಂದ ಯಕ್ಷಧ್ರುವ ಪಟ್ಲ ಸತೀಶ್‌ ಶೆಟ್ಟಿ ಹಾಗೂ ಸುರೇಶ್‌ ಶೆಟ್ಟಿ ಶಂಕರನಾರಾಯಣ ಇವರ ದಕ್ಷ ಸಾರಥ್ಯದಲ್ಲಿ ತೆಂಕು ಮತ್ತು ಬಡಗುತಿಟ್ಟಿನ ಹೆಸರಾಂತ ಕಲಾವಿದರ ಕೂಡುವಿಕೆಯಿಂದ ಪಾಂಚಜನ್ಯ -ಅಸಿಕಾ ಪರಿಣಯ ಅಮೋಘ ಯಕ್ಷಗಾನ ಪ್ರದರ್ಶನ.

ಟಾಪ್ ನ್ಯೂಸ್

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.