Barkur: ಕೂಲಿಕಾರ್ಮಿಕನ ಗುಂಡಿಕ್ಕಿ ಹತ್ಯೆ ಪ್ರಕರಣ: ಐಜಿಪಿ ಭೇಟಿ, ಸ್ಥಳ ಪರಿಶೀಲನೆ
Team Udayavani, Mar 6, 2024, 10:29 PM IST
ಬ್ರಹ್ಮಾವರ: ದುಷ್ಕರ್ಮಿಗಳಿಂದ ಗುಂಡಿನ ದಾಳಿಗೆ ಒಳಗಾಗಿ ಮೃತಪಟ್ಟ ಬಾರಕೂರು ಹನೆಹಳ್ಳಿ ಬಾಳೆಹಿತ್ಲಿನ ಕೃಷ್ಣ (37) ಅವರ ಮನೆಗೆ ಬುಧವಾರ ಐಜಿಪಿ ಡಾ| ಬೋರಲಿಂಗಯ್ಯ ಅವರು ಭೇಟಿ ನೀಡಿ ಘಟನಾ ಸ್ಥಳ ಪರಿಶೀಲಿಸಿದರು.
ಹತ್ಯೆಗೆ ಸಂಬಂಧಿಸಿ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದು ಶೀಘ್ರ ಪ್ರಕರಣ ಭೇದಿಸುವ ನಿಟ್ಟಿನಲ್ಲಿ ಸೂಕ್ತ ಸಲಹೆ ಸೂಚನೆ, ಮಾರ್ಗದರ್ಶನ ನೀಡಿದರು. ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಸೆಂಟ್ರಿಂಗ್ ವೃತ್ತಿ ಮಾಡಿಕೊಂಡಿದ್ದ ಕೃಷ್ಣ ಅವರನ್ನು ಅಪರಿಚಿತರು ಶನಿವಾರ ರಾತ್ರಿ ಪಿಸ್ತೂಲ್ನಿಂದ ಗುಂಡು ಹಾರಿಸಿ ಕೊಲೆ ಮಾಡಿದ್ದರು.