ನಗರದಲ್ಲಿ ಅನ್ನಕ್ಕಾಗಿ ಭಿಕ್ಷುಕರ ಅಲೆದಾಟ
Team Udayavani, May 12, 2020, 7:23 AM IST
ಉಡುಪಿ: ವಿಶ್ವಕ್ಕೆ ವ್ಯಾಪಿಸಿದ ಕೋವಿಡ್-19 ಮಹಾಮಾರಿಗೆ ಜಗತ್ತು ತಲ್ಲಣವಾಗಿದೆ. ಪ್ರತಿಯೊಬ್ಬರ ಹೊಟ್ಟೆಗೂ ಅದು ಏಟು ನೀಡಿದೆ. ಜನ ಹಸಿವಿನಿಂದ ಅನ್ನಕ್ಕಾಗಿ ಅಂಗಲಾಚುವ ಪರಿಸ್ಥಿತಿ ಇದೆ. ಇದೇ ಲಾಕ್ಡೌನ್ ಬಿಸಿ ಭಿಕ್ಷುಕರಿಗೂ ತಟ್ಟಿದೆ. ನಗರದಲ್ಲಿ ಬೀಡು ಬಿಟ್ಟಿದ್ದ ಕೆಲ ಭಿಕ್ಷುಕರಿಗೆ ಈಗ ದಿಕ್ಕು ತೋಚದಾಗಿದೆ.
ಮೊದಲೆಲ್ಲ ಅಂಗಡಿ, ಹೊಟೇಲ್ಗಳು ತೆರೆದಿದ್ದಾಗ ಅವುಗಳ ಮುಂದೆ ಭಿಕ್ಷೆ ಬೇಡಿ ಹೊಟ್ಟೆ ತುಂಬಿಸಿಕೊಳ್ಳು
ತ್ತಿದ್ದರು. ಲಾಕ್ಡೌನ್ ಬಳಿಕ ಅವರ ಹೊಟ್ಟೆಗೂ ತಣ್ಣೀರು ಬಟ್ಟೆಯೇ ಗತಿ ಎಂಬಂತಾಗಿದೆ. ಇತ್ತೀಚಿನ ತನಕ ವಿವಿಧ ಸಂಘ ಸಂಸ್ಥೆಗಳು ನಗರದಲ್ಲಿ ಉಳಿದುಕೊಂಡ ವಲಸೆ ಕಾರ್ಮಿಕರಿಗೆ ಊಟ ನೀಡುತ್ತಿದ್ದಾಗ ಅದನ್ನು ಪಡೆದು ಭಿಕ್ಷುಕರು ಹಸಿವು ನೀಗಿಸಿಕೊಳ್ಳುತ್ತಿದ್ದರು. ಅದಾದ ಬಳಿಕ ಹೊಟೇಲ್ಗಳು ಈಗ ತೆರೆದಿದ್ದರೂ ಪಾರ್ಸೆಲ್ ವಿತರಣೆಗಷ್ಟೆ ಸೀಮಿತವಾಗಿವೆ. ಹೀಗಾಗಿ ಹಸಿವಿನಿಂದ ಬಳಲುತ್ತಿರುವ ಭಿಕ್ಷುಕರು ನಗರದ ಆಸುಪಾಸುಗಳ ಮನೆಗಳಿಗೆ ತೆರಳಿ ಭಿಕ್ಷೆ ಬೇಡುತ್ತಿದ್ದಾರೆ.