Brahmavar ಸ್ಕೂಟಿ ಢಿಕ್ಕಿ ಹೊಡೆದು ಸೈಕಲ್ ಸವಾರ ಸಾವು
Team Udayavani, Mar 16, 2024, 11:51 PM IST
ಬ್ರಹ್ಮಾವರ: ಬಾರಕೂರು ಹೇರಾಡಿ ಬಳಿ ಶನಿವಾರ ಬೆಳಗ್ಗೆ ಸ್ಕೂಟಿ ಢಿಕ್ಕಿ ಹೊಡೆದ ಪರಿಣಾಮ ಸೈಕಲ್ ಸವಾರ ಶೀನ ಮರಕಾಲ (76) ಮೃತಪಟ್ಟಿದ್ದಾರೆ.
ಅವರು ಬಾರಕೂರು ಕಡೆ ಬರುತ್ತಿದ್ದಾಗ ಸ್ಕೂಟಿ ಹಿಂದಿನಿಂದ ಢಿಕ್ಕಿ ಹೊಡೆಯತು. ತಲೆ, ಮುಖಕ್ಕೆ ತೀವ್ರ ಗಾಯಗಳಾಗಿ ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಸ್ಕೂಟಿ ಸವಾರ ರಾಮಚಂದ್ರ ಸೋಮಯಾಜಿ ಅವರಿಗೂ ಗಾಯಗಳಾಗಿವೆ.