ತಾರಸಿ ಮೇಲೂ ಬೆಳೆಯಬಲ್ಲ ಕುಬ್ಜ ಗೇರು ತಳಿಗಳ ಪ್ರವೇಶ

ರಾಷ್ಟ್ರೀಯ ಗೇರು ಸಂಶೋಧನ ಕೇಂದ್ರದಿಂದ ಅಭಿವೃದ್ಧಿ

Team Udayavani, Feb 19, 2021, 5:35 AM IST

ತಾರಸಿ ಮೇಲೂ ಬೆಳೆಯಬಲ್ಲ ಕುಬ್ಜ ಗೇರು ತಳಿಗಳ ಪ್ರವೇಶ

ಪುತ್ತೂರು: ಮನೆಯ ಹಿತ್ತಿಲಿನಲ್ಲಿ, ತಾರಸಿಯಲ್ಲಿ ಬೆಳೆಯಬಲ್ಲ ಕುಬ್ಜ ಗೇರು ತಳಿ ಈಗ ಬಂದಿದೆ.
ಪುತ್ತೂರಿನ ರಾಷ್ಟ್ರೀಯ ಗೇರು ಸಂಶೋಧನಾ ಕೇಂದ್ರದ ಡಾ| ಎಂ.ಜಿ. ನಾಯಕ್‌ ನೇತೃತ್ವದ ತಂಡ “ನೇತ್ರಾ ವಾಮನ್‌’ ಹೆಸರಿನ ಕುಬ್ಜ ಗೇರು ತಳಿಯನ್ನು ಅಭಿವೃದ್ಧಿಗೊಳಿಸಿದೆ. ಇದು ಗೇರು ಸಂಶೋಧನಾ ಕೇಂದ್ರ ಅಭಿವೃದ್ಧಿ ಪಡಿಸಿದ ಐದನೇ ತಳಿ.

ಗೇರು ಕೃಷಿಯಲ್ಲೂ ಬಂತು ಕುಬ್ಜ ತಳಿ
ಮೂಲತಃ ಬ್ರೆಜಿಲ್‌ನಿಂದ ಬಂದಂತಹ ಗೇರು ತಳಿಯ ಬೀಜವಿದು. ಇದ‌ನ್ನು ಕುಬ್ಜ ತಳಿಯಾಗಿ ಅಭಿವೃದ್ಧಿಪಡಿಸಲಾಗಿದೆ. ನಾಟಿ ಮಾಡಿದ ವರ್ಷದೊಳಗೆ ಫಸಲು ನೀಡಬಲ್ಲದು. ನಾಲ್ಕನೇ ವರ್ಷದಲ್ಲಿ ಎರಡು ಕೆ.ಜಿ. ಇಳುವರಿ ಸಿಗಬಹುದು. ಸಾಮಾನ್ಯವಾಗಿ ದೊಡ್ಡ ಗಾತ್ರದ ಗೇರು ತಳಿಯನ್ನು ಎಕರೆಗೆ 60ರಿಂದ 70ರಷ್ಟು ನಾಟಿ ಮಾಡಿದರೆ, ನೇತ್ರಾ ವಾಮನ್‌ ಎಕ್ರೆಗೆ 400 ತನಕ ನಾಟಿ ಮಾಡಲು ಸಾಧ್ಯವಿದೆ. ಕಡಿಮೆ ಜಾಗದಲ್ಲಿ ಹೆಚ್ಚು ಬೆಳೆ ಬೆಳೆಯಲು ಸಾಧ್ಯ.

ನಿರ್ವಹಣೆಗೆ ಸೂಕ್ತ
ಸಾಮಾನ್ಯವಾಗಿ ಗೇರು ಎತ್ತರಕ್ಕೆ ಬೆಳೆ ಯುವ ಮರ. 35ರಿಂದ 40 ಅಡಿ ತನಕವೂ ಇದು ಬೆಳೆಯಬಲ್ಲುದು. ಗೇರು ಕೃಷಿಯನ್ನು ಆರ್ಥಿಕ ದೃಷ್ಟಿಯಿಂದ ಬೆಳೆಯುವವರು ಪ್ರತೀ ವರ್ಷ ನಿರ್ವಹಣೆ ದೃಷ್ಟಿಯಿಂದ ಮರ ಎತ್ತರಕ್ಕೆ ಹೋಗದ ಹಾಗೆ 12 ರಿಂದ 15 ಅಡಿಯಲ್ಲಿ ಎತ್ತರ ಕತ್ತರಿಸಿ ಕುಬ್ಜವಾಗಿ ಇರುವಂತೆ ನೋಡಿಕೊಳ್ಳುತ್ತಾರೆ. ಹೊಸದಾಗಿ ಅಭಿವೃದ್ಧಿ ಪಡಿಸಿದ ನೇತ್ರಾ ವಾಮನ್‌ ತಳಿಯಲ್ಲಿ ಈ ಸಮಸ್ಯೆ ಇಲ್ಲ. ಇದು ಹತ್ತು ಅಡಿಗಳಿಗಿಂತ ಹೆಚ್ಚು ಎತ್ತರ ಬೆಳೆಯದು. ಅತಿಸಾಂದ್ರ ಪದ್ಧತಿಗೆ ಒಗ್ಗಿಕೊಳ್ಳುವ ಗುಣ ಹೊಂದಿದೆ. ಹತ್ತು ವರ್ಷಗಳ ಅವಧಿಯಲ್ಲಿ 7ರಿಂದ 8 ಅಡಿ ಎತ್ತರ ಬೆಳೆಯುತ್ತದೆ ಎನ್ನುತ್ತಾರೆ ವಿಜ್ಞಾನಿಗಳು.

ಸುಲಭ ನಿರ್ವಹಣೆ
ನೇತ್ರ ವಾಮನ್‌ ತಳಿಯನ್ನು ಕಡಿಮೆ ಜಾಗದಲ್ಲಿ ಹೆಚ್ಚು ನಾಟಿ ಮಾಡಬಹುದು. 1 ಎಕ್ರೆಯಲ್ಲಿ 400 ಗಿಡಗಳನ್ನು ನೆಡಬಹುದು. ನಾಲ್ಕನೇ ವರ್ಷದಲ್ಲಿ ಗಿಡವೊಂದಲ್ಲಿ ಎರಡು ಕೆ.ಜಿ.ಯಷ್ಟು ಇಳುವರಿ ಸಿಗುತ್ತದೆ. ಅಂದರೆ ಒಂದು ಎಕ್ರೆಗೆ 800 ಕೆ.ಜಿ. ಸಿಕ್ಕಂತಾಗುತ್ತದೆ. ಔಷಧ ಸಿಂಪಡಣೆ, ನಿರ್ವಹಣೆ ದೃಷ್ಟಿಯಿಂದ ಅತ್ಯಂತ ಸುಲಭ

-ಡಾ|ಎಂ.ಜಿ.ನಾಯಕ್‌, ತಳಿ ಅಭಿವೃದ್ಧಿಪಡಿಸಿದ ವಿಜ್ಞಾನಿ ರಾ.ಗೇ. ಸಂ. ಕೇಂದ್ರ, ಪುತ್ತೂರು.

90 ದಿನಗಳಿಗಿಂತ ಅಧಿಕ ಕಾಲ ಹೂ ಬಿಡುತ್ತದೆ
ಹತ್ತನೇ ವರ್ಷದಲ್ಲಿ ಇದರ ಎತ್ತರ ಸುಮಾರು ಎಂಟು ಅಡಿ. ಅಗಲ ಹದಿನೆಂಟು ಅಡಿಯಷ್ಟು ವಿಸ್ತಾರಗೊಳ್ಳಬಹುದು. ಅತ್ಯಂತ ಕಡಿಮೆ ಸವರುವಿಕೆಯಿಂದ ಇದರ ಆಕಾರ ಮತ್ತು ಗಾತ್ರ ನಿರ್ವಹಣೆ ಕೂಡ ಸುಲಭ. ನೆಟ್ಟ ವರ್ಷದೊಳಗೆ ಹೂ ಬಿಟ್ಟು ಫಸಲು ನೀಡುವ ಈ ತಳಿ ವರ್ಷದಲ್ಲಿ ಮೂರು ತಿಂಗಳಿಗೂ ಅಧಿಕ ಕಾಲ ಹೂ ಬಿಡುತ್ತದೆ. ಇಳುವರಿ ಒಂದೂವರೆಯಿಂದ ಎರಡು ಕೆಜಿ. ಬೀಜದ ತೂಕ ಐದೂವರೆಯಿಂದ ಆರು ಗ್ರಾಂ ಇರುತ್ತದೆ. ಹಣ್ಣಿನ ತೂಕ ಸುಮಾರು ಐವತ್ತು ಗ್ರಾಂ. ಕಡಿಮೆ ನಾರಿನಂಶ. ಕಾಂಡ ಗಂಟು ಗಂಟಾಗಿ ಇರುತ್ತದೆ.

ಕಡಿಮೆ ಬಿಸಿಲಿದ್ದರೂ ಸಾಕು
ಮಾಮೂಲಿ ಗೇರಿನ ಮರಗಳಿಗೆ ಬೇಕಾದ ಬಿಸಿಲಿನ ಪ್ರಮಾಣಕ್ಕಿಂತ ಸ್ವಲ್ಪ ಕಡಿಮೆ ಬಿಸಿಲಿದ್ದರೂ ಈ ತಳಿ ಫಸಲು ನೀಡುತ್ತದೆ. ಹಾಗಾಗಿ ಬಿಸಿಲು ಪ್ರವೇಶಿಸುವ ಅಂತರದ ತೆಂಗಿನ ಮರಗಳಿರುವ ತೋಟದಲ್ಲಿ ಉಪ ಬೆಳೆಯಾಗಿ ಬೆಳೆಯಬಹುದು. ತಾರಸಿಯ ಮೇಲೆ ಬೆಳೆ‌ಸಬಹುದು. ಮನೆ ಹಿತ್ತಲಿನಲ್ಲಿಯು ನಾಟಿ ಮಾಡಬಹುದು. ಇದು ಆದಾಯದ ದೃಷ್ಟಿಯಿಂದ ದೀರ್ಘ‌ ಕಾಲದ ತನಕ ಲಾಭ ನೀಡದಿದ್ದರೂ ನಿರ್ವಹಣೆಯ ದೃಷ್ಟಿಯಲ್ಲಿ ಅತ್ಯಂತ ಅನುಕೂಲಕಾರಿ.

“ನೇತ್ರಾ ವಾಮನ್‌’ ತಳಿಯ ವೈಶಿಷ್ಟ್ಯ
– ಇದು ಅತಿಸಾಂದ್ರಕ್ಕೆ ಸೂಕ್ತ
– ಸವರುವಿಕೆ ಇಲ್ಲದೆ ಅತಿ ಸಾಂದ್ರಕ್ಕೂ ಬಳಕೆ ಮಾಡಬಹುದು.
– ಗೇರು ತೋಟಗಳಲ್ಲಿ ಉಪ ಬೆಳೆಯಾಗಿ ಬೆಳೆಸಬಹುದು
– ಪಾಲಿಥೀನ್‌ ಚೀಲಗಳಲ್ಲೂ ಬೆಳೆಸಬಹುದು.
– ನೆಟ್ಟ ಒಂದು ವರ್ಷದಲ್ಲೇ ಹೂ ಬಿಡುತ್ತದೆ.
– ಒಂದು ಮರಕ್ಕೆ ಒಂದೂವರೆಯಿಂದ ಎರಡು ಕೆಜಿಯಷ್ಟು ಇಳುವರಿ
– ಬೀಜದ ತೂಕ ಐದೂವರೆಯಿಂದ ಆರು ಗ್ರಾಂನಷ್ಟು.
– ಹಣ್ಣಿನ ತೂಕ ಸುಮಾರು ಐವತ್ತು ಗ್ರಾಂನಷ್ಟು.

ಟಾಪ್ ನ್ಯೂಸ್

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ

Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

11

Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.