Kanpur: ಕಾನ್ಪುರದಲ್ಲಿ ಧ್ವನಿವರ್ಧಕಗಳ ತೆರವು
Team Udayavani, Nov 28, 2023, 9:46 PM IST
ಕಾನ್ಪುರ: ಉತ್ತರಪ್ರದೇಶದ ಕಾನ್ಪುರದ ಧಾರ್ಮಿಕ ಸ್ಥಳಗಳಲ್ಲಿ ಅಳವಡಿಸಲಾಗಿದ್ದ 300ಕ್ಕೂ ಅಧಿಕ ಧ್ವನಿವರ್ಧಕಗಳನ್ನು ಪೊಲೀಸರು ತೆರವುಗೊಳಿಸಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರದ ಆದೇಶದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ.
ಧ್ವನಿವರ್ಧಕಗಳು ನಿಗದಿತ ಡೆಸಿಬಲ್ ಮಿತಿ ಮೀರಿ ಕಾರ್ಯನಿರ್ವಹಿಸುತ್ತಿದ್ದರಿಂದ ಶಬ್ದ ಮಾಲಿನ್ಯ ಏರ್ಪಡುತ್ತಿತ್ತು. ಈ ನಿಟ್ಟಿನಲ್ಲಿ ಅಂತಹ ಧ್ವನಿವರ್ಧಕಗಳನ್ನು ತೆರವುಗೊಳಿಸಲು ಸರ್ಕಾರ ಸೂಚನೆ ನೀಡಿತ್ತು. ಅದರಂತೆ ನ.26ರಿಂದ ಪೊಲೀಸರು ಧ್ವನಿವರ್ಧಕ ತೆರವು ಅಭಿಯಾನ ನಡೆಸುತ್ತಿದ್ದು, ಕಾನ್ಪುರದಲ್ಲಿ ನಿಯಮ ಉಲ್ಲಂ ಸಿದ್ದ 300 ಮೈಕ್ಗಳನ್ನು ತೆರವು ಮಾಡಿದ್ದಾರೆ.