Telangana: ಕಾಂಗ್ರೆಸ್ನ ಆರು ಗ್ಯಾರಂಟಿ- 42 ಪುಟಗಳ ಅಭಯ ಹಸ್ತಂ ಪ್ರಣಾಳಿಕೆ ಬಿಡುಗಡೆ
ಈ ಪ್ರಣಾಳಿಕೆ ನಮಗೆ ಗೀತೆ, ಕುರಾನ್, ಬೈಬಲ್ ಇದ್ದಂತೆ - ಜಾರಿ ಮಾಡಿಯೇ ಸಿದ್ಧ ಎಂದ ಎಐಸಿಸಿ ಅಧ್ಯಕ್ಷ ಖರ್ಗೆ
Team Udayavani, Nov 17, 2023, 8:50 PM IST
ಹೈದರಾಬಾದ್: ತೆಲಂಗಾಣ ವಿಧಾನಸಭೆ ಚುನಾವಣೆಗೆ 14 ದಿನಗಳು ಬಾಕಿಯಿರುವಂತೆಯೇ ರಾಜ್ಯಕ್ಕೆ ಕಾಂಗ್ರೆಸ್ “ಬಂಪರ್ ಗ್ಯಾರಂಟಿ’ಗಳನ್ನು ಘೋಷಿಸಿದೆ. ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ “ಗ್ಯಾರಂಟಿಗಳು” ಪಕ್ಷದ “ಕೈ” ಹಿಡಿದ ಬೆನ್ನಲ್ಲೇ ತೆಲಂಗಾಣದಲ್ಲೂ ಇದೇ ಮಾದರಿಯ ಆಶ್ವಾಸನೆಗಳನ್ನು ನೀಡುವ ಮೂಲಕ ಕಾಂಗ್ರೆಸ್ ಅದೃಷ್ಟ ಪರೀಕ್ಷೆಗೆ ಇಳಿದಿದೆ.
ಶುಕ್ರವಾರ ಪಕ್ಷದ 42 ಪುಟಗಳ “ಅಭಯ ಹಸ್ತಂ’ ಹೆಸರಿನ ಪ್ರಣಾಳಿಕೆ ಬಿಡುಗಡೆ ಮಾಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, 6 ಗ್ಯಾರಂಟಿಗಳು ಮತ್ತು ರಾಜ್ಯಕ್ಕಾಗಿ ಹಲವು ನಿರ್ಣಯಗಳನ್ನೂ ಪ್ರಕಟಿಸಿದ್ದಾರೆ. “ಆಗಿದ್ದಾಗಲಿ, ಈ ಬಾರಿ ಕಾಂಗ್ರೆಸ್ ಅನ್ನೇ ಅಧಿಕಾರಕ್ಕೆ ತರಬೇಕು’ ಎಂಬ ನಿರ್ಧಾರಕ್ಕೆ ತೆಲಂಗಾಣದ ಜನರು ಬಂದಾಗಿದೆ ಎಂದೂ ಖರ್ಗೆ ನುಡಿದಿದ್ದಾರೆ.
ಯುಪಿಎಸ್ಸಿ ಮಾದರಿಯಲ್ಲೇ ಟಿಎಸ್ಪಿಎಸ್ಸಿ(ತೆಲಂಗಾಣ ರಾಜ್ಯ ನಾಗರಿಕ ಸೇವಾ ಆಯೋಗ)ಯನ್ನು ಪುನಶ್ಚೇತನಗೊಳಿಸಲು ಹೊಸ ಕಾನೂನು ರಚಿಸಲಾಗುವುದು, ಅಧಿಕಾರಕ್ಕೆ ಬಂದ ಮೊದಲ ವರ್ಷದಲ್ಲೇ ಖಾಲಿಯಿರುವ 2 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲಾಗುವುದು, ಬಸಾರಾ ಐಐಐಟಿಯಂತೆ ಇನ್ನೂ 4 ಐಐಐಟಿಗಳನ್ನು ಸ್ಥಾಪಿಸಲಾಗುವುದು ಎಂದೂ ಖರ್ಗೆ ತಿಳಿಸಿದ್ದಾರೆ.
6 ಗ್ಯಾರಂಟಿಗಳು ಯಾವುವು?
ಮಹಿಳೆಯರಿಗೆ ಮಾಸಿಕ 2,500 ರೂ. ಆರ್ಥಿಕ ನೆರವು, 500ರೂ.ಗೆ ಅಡುಗೆ ಅನಿಲ ಸಿಲಿಂಡರ್, ಬಸ್ ಪ್ರಯಾಣ ಉಚಿತ, ಎಲ್ಲ ಕುಟುಂಬಗಳಿಗೂ 200 ಯೂನಿಟ್ವರೆಗೆ ವಿದ್ಯುತ್ ಉಚಿತ, ರೈತ ಬಂಧು ಭರೋಸಾದಡಿ ಪ್ರತಿ ವರ್ಷ ರೈತರಿಗೆ 15 ಸಾವಿರ ರೂ.ಗಳ ಹೂಡಿಕೆ ಸಹಾಯಧನ, ಕೃಷಿ ಕಾರ್ಮಿಕರಿಗೆ 12 ಸಾವಿರ ರೂ.ಗಳ ಸಹಾಯಧನ, ಚೇಯುತ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ 4,000 ರೂ.ಗಳ ಸಾಮಾಜಿಕ ಪಿಂಚಣಿ ಮತ್ತು 10 ಲಕ್ಷ ರೂ.ಗಳ ವಿಮೆ, ಇಂದಿರಮ್ಮ ಇಂಡ್ಲು ಯೋಜನೆಯಡಿ ಮನೆಯಿಲ್ಲದವರಿಗೆ ನಿವೇಶನ ಮತ್ತು ಮನೆ ನಿರ್ಮಾಣಕ್ಕೆ 5 ಲಕ್ಷ ರೂ. ಆರ್ಥಿಕ ನೆರವು, ವಿದ್ಯಾರ್ಥಿಗಳಿಗೆ ಯುವ ವಿಕಾಸಮ್ ಯೋಜನೆಯಡಿ 5 ಲಕ್ಷ ರೂ. ಧನಸಹಾಯ, ತೆಲಂಗಾಣ ಚಳವಳಿಯಲ್ಲಿ ಹೋರಾಡಿದ ಎಲ್ಲರಿಗೂ 250 ಚದರ ಯಾರ್ಡ್ ನಿವೇಶನ ನೀಡುವುದಾಗಿ ಕಾಂಗ್ರೆಸ್ ಆಶ್ವಾಸನೆ ನೀಡಿದೆ.
ಕರ್ನಾಟಕದ ಪ್ರಸ್ತಾಪ
ಕರ್ನಾಟಕದಲ್ಲಿ ನಾವು ಘೋಷಿಸಿದ್ದ ಗ್ಯಾರಂಟಿಗಳನ್ನು ಅನುಷ್ಠಾನ ಮಾಡಿದ್ದೇವೆ. ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆಯಿಂದಾಗಿ ಕರ್ನಾಟಕದ ಮಹಿಳೆಯರು ವಿವಿಧ ದೇವಾಲಯಗಳಿಗೆ ಭೇಟಿ ನೀಡುವಂತಾಗಿದೆ. ಈ ಪ್ರಣಾಳಿಕೆಯು ನಮಗೆ ಭಗವದ್ಗೀತೆ, ಕುರಾನ್ ಅಥವಾ ಬೈಬಲ್ ಇದ್ದಂತೆ. ಇದನ್ನು ಜಾರಿ ಮಾಡುವುದು ನಿಶ್ಚಿತ. ಮೊದಲ ಸಂಪುಟ ಸಭೆಯಲ್ಲೇ ಎಲ್ಲ ಗ್ಯಾರಂಟಿಗಳನ್ನೂ ಅನುಷ್ಠಾನ ಮಾಡಲಾಗುತ್ತದೆ ಎಂದಿದ್ದಾರೆ ಖರ್ಗೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
MUST WATCH
ಹೊಸ ಸೇರ್ಪಡೆ
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !