ಕ್ಷೌರಿಕರ ತುತ್ತಿಗೂ ಕತ್ತರಿ ಹಾಕಿದ ಕೋವಿಡ್-19

ಗ್ರಾಹಕರಿಂದ ಒತ್ತಡ; ಉಭಯ ಸಂಕಟದಲ್ಲಿ ಕ್ಷೌರಿಕರು

Team Udayavani, Apr 23, 2020, 6:19 AM IST

ಕ್ಷೌರಿಕರ ತುತ್ತಿಗೂ ಕತ್ತರಿ ಹಾಕಿದ ಕೋವಿಡ್-19

ಸಾಂದರ್ಭಿಕ ಚಿತ್ರ..

ವಿಶೇಷ ವರದಿ-ಮಂಗಳೂರು: ಕೋವಿಡ್-19 ಲಾಕ್‌ಡೌನ್‌ ಕ್ಷೌರಿಕರ ಬದುಕನ್ನು ಕೂಡ ಸಂಕಷ್ಟಕ್ಕೆ ದೂಡಿದೆ. ಒಂದು ತಿಂಗಳಿನಿಂದ ತಮ್ಮ ಸೆಲೂನ್‌ಗಳನ್ನು ಮುಚ್ಚಿರುವ ಕ್ಷೌರಿಕರು ದಿನಕಳೆಯಲು ಪರದಾಡು ವಂತಾಗಿದೆ. ದ.ಕ. ಜಿಲ್ಲೆಯಲ್ಲಿ ಸುಮಾರು 3,000 ಹಾಗೂ ಉಡುಪಿ ಜಿಲ್ಲೆಯಲ್ಲಿ ಸುಮಾರು 1,500 ಸೆಲೂನ್‌ಗಳಿದ್ದು ಉಭಯ ಜಿಲ್ಲೆಗಳಲ್ಲಿ ಒಟ್ಟು ಸುಮಾರು 4,500 ಮಂದಿ ಕ್ಷೌರಿಕರಿದ್ದು ಅವರಿಗೆ ದಿಕ್ಕು ಇಲ್ಲದಂತಾಗಿದೆ. ಇದರಲ್ಲಿ ಇತರ ಜಿಲ್ಲೆ, ರಾಜ್ಯಗಳ ಕಾರ್ಮಿಕರೂ ಇದ್ದಾರೆ.

ನಿರಂತರ ಕರೆ,ಒತ್ತಡ
ಕ್ಷೌರಿಕರು ಸರಕಾರದ ಆದೇಶಕ್ಕೆ ಬೆಲೆ ಕೊಟ್ಟು ಮನೆಯಲ್ಲೇ ಉಳಿದು ಕೊಂಡಿ ದ್ದರೂ ಸಾರ್ವಜನಿಕರ ಬೇಡಿಕೆ ಮಾತ್ರ ನಿಂತಿಲ್ಲ. ಲಾಕ್‌ಡೌನ್‌ ಆದ ಮೊದಲ ವಾರದಲ್ಲಿ ಅಷ್ಟಾಗಿ ಯಾರು ಕೂಡ ಕ್ಷೌರದ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಆದರೆ ದಿನಗಳು ಕಳೆಯುತ್ತಿರುವಂತೆ ತಮ್ಮ ಊರಿನ, ಪರಿಚಯದ, ಮಾಮೂಲಾಗಿ ಹೋಗುತ್ತಿದ್ದ ಸೆಲೂನ್‌ನ ಕ್ಷೌರಿಕರಿಗೆ ಗ್ರಾಹಕರಿಂದ ಕರೆಗಳು ಬರಲು ಆರಂಭವಾದವು. ಇಂತಹ ಕರೆಗಳಿಂದ ತಪ್ಪಿಸಿಕೊಳ್ಳುವುದೇ ಕ್ಷೌರಿಕರಿಗೆ ದೊಡ್ಡ ಕೆಲಸವಾಗಿದೆ. ಮಾಮೂಲು ಗಿರಾಕಿಗಳನ್ನು ಬಿಡುವಂತೆಯೂ ಇಲ್ಲ. ಲಾಕ್‌ಡೌನ್‌ ಉಲ್ಲಂಘನೆ ಮಾಡುವಂತೆಯೂ ಇಲ್ಲ ಎಂಬ ಸ್ಥಿತಿ ಉಂಟಾಗಿದೆ.

ಅಸಂಘಟಿತ ವಲಯದ ಕಾರ್ಮಿಕರು
“ನಮಗೆ ನಿರಂತರವಾಗಿ ಕರೆ, ಮೆಸೇಜ್‌ಗಳು ಬರುತ್ತಿವೆ. ಆದರೂ ಗ್ರಾಹಕರ ಬಳಿ ತೆರಳಲಿಲ್ಲ. ಕ್ಷೌರಿಕರು ಗರಿಷ್ಠ ಪ್ರಮಾಣದಲ್ಲಿ ಜಿಲ್ಲಾಡಳಿತದ ಜತೆಗೆ ಸಹಕರಿಸಿದ್ದಾರೆ. ಕೆಲವು ಗ್ರಾಹಕರ ಜತೆ ತಲೆಮಾರುಗಳ ಅನ್ಯೋನ್ಯ ಸಂಬಂಧವಿರುತ್ತದೆ. ಅಂತಹ ಮನೆಗಳಿಗೆ ಹೋಗಲೇಬೇಕಿರುವುದರಿಂದ ಇತ್ತೀಚಿನ ಎರಡು ವಾರಗಳಿಂದ ಕೆಲವು ಮಂದಿ ಕ್ಷೌರಿಕರು ಮಾತ್ರ ಇಂತಹ ಗ್ರಾಹಕರ ಕ್ಷೌರ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ನಗರದ ಕೆಲವೇ ಐಷಾರಾಮಿ ಸೆಲೂನ್‌ಗಳನ್ನು ನೋಡಿ ಎಲ್ಲ ಸೆಲೂನ್‌ನವರು ಸ್ಥಿತಿವಂತರು ಎಂದು ಜನಪ್ರತಿನಿಧಿಗಳು, ಅಧಿಕಾರಿಗಳು ಅಂದಾಜಿಸಬಾರದು. ಸೆಲೂನ್‌ ಕಾರ್ಮಿಕರು ದಿನಕೂಲಿಯಂತೆ ಇರುವವರು. ಅಸಂಘಟಿತ ಕಾರ್ಮಿಕರಿಗೆ ಸಿಗುವ ಸವಲತ್ತುಗಳು ಅವರಿಗೂ ಸಿಗಬೇಕು. ಸೆಲೂನ್‌ಗಳನ್ನು ತೆರೆಯಲು ಶೀಘ್ರ ಅನುಮತಿ ನೀಡುವಂತೆ ಜಿಲ್ಲಾ ಧಿಕಾರಿಯವರಿಗೆ ಪದೇ ಪದೆ ಮನವಿ ಮಾಡಿಕೊಳ್ಳುತ್ತಿದ್ದೇವೆ’ ಎನ್ನುತ್ತಾರೆ ಉಡುಪಿ ಜಿಲ್ಲಾ ಸವಿತಾ ಸಮಾಜದ ಗೌರವಾಧ್ಯಕ್ಷ ಬನ್ನಂಜೆ ಗೋವಿಂದ ಭಂಡಾರಿ ಅವರು.

ಸ್ವಯಂಪ್ರೇರಿತ ಸಹಕಾರ
ಲಾಕ್‌ಡೌನ್‌ಗಿಂತ ಮೊದಲು ಕೆಲವು ದಿನ ದ.ಕ. ಮತ್ತು ಉಡುಪಿ ಜಿಲ್ಲೆಯ ಹೆಚ್ಚಿನ ಸೆಲೂನ್‌ಗಳಲ್ಲಿ ಮಾಸ್ಕ್ ಬಳಕೆ ಮಾಡಲಾಗಿತ್ತು. ಅಲ್ಲದೆ ಲಾಕ್‌ಡೌನ್‌ಗಿಂತ ಮೊದಲು ಮೂರು ದಿನ ಕ್ಷೌರಿಕರೇ ಸ್ವಯಂಪ್ರೇರಿತರಾಗಿ ಸೆಲೂನ್‌ ಬಂದ್‌ ಮಾಡಿದ್ದರು. ಒಟ್ಟಾರೆ ಒಂದು ತಿಂಗಳುಗಳಿಂದ ಕೆಲಸವನ್ನೇ ಮಾಡಿಲ್ಲ.

ಷರತ್ತು ವಿಧಿಸಿ ಅವಕಾಶ ಕೊಡಿ
ಕ್ಷೌರಿಕರು ತೀರಾ ಸಂಕಷ್ಟದಲ್ಲಿದ್ದಾರೆ. ಈ ವಾರದಲ್ಲಾದರೂ ಸೆಲೂನ್‌ಗಳನ್ನು ತೆರೆಯಲು ಅವಕಾಶ ನೀಡಬೇಕು. ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯ ಬಳಕೆ, ಅಂಗಡಿಯೊಳಗೆ ಓರ್ವ ಗ್ರಾಹಕನಿಗೆ ಮಾತ್ರ ಪ್ರವೇಶ ಮೊದಲಾದ ಷರತ್ತುಗಳನ್ನು ವಿಧಿಸಿ ಅವಕಾಶ ನೀಡಬೇಕು. ಬೆಳಗ್ಗೆ 7ರಿಂದ 11 ಗಂಟೆಯವರೆಗಾದರೂ ಕೆಲಸ ಮಾಡಲು ಅವಕಾಶ ನೀಡಬೇಕು ಎಂದು ಈಗಾಗಲೇ ಜಿಲ್ಲಾಧಿಕಾರಿ, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದೇವೆ.
 - ವಸಂತ್‌ ಬೆಳ್ಳೂರ್‌,
ಪ್ರಧಾನ ಕಾರ್ಯದರ್ಶಿ, ದ.ಕ. ಜಿಲ್ಲಾ ಸವಿತಾ ಸಮಾಜ

ಟಾಪ್ ನ್ಯೂಸ್

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.