ದಿನೇಶ್‌ ಕಾರ್ತಿಕ್‌ ಆಟ ಶ್ರೇಷ್ಠ: ಆರ್‌ಸಿಬಿ ನಾಯಕ ಫಾ ಡು ಪ್ಲೆಸಿಸ್‌


Team Udayavani, Apr 7, 2022, 4:45 AM IST

ದಿನೇಶ್‌ ಕಾರ್ತಿಕ್‌ ಆಟ ಶ್ರೇಷ್ಠ: ಆರ್‌ಸಿಬಿ ನಾಯಕ ಫಾ ಡು ಪ್ಲೆಸಿಸ್‌

ಮುಂಬಯಿ: ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ಮಂಗಳವಾರ ನಡೆದ ಪಂದ್ಯದಲ್ಲಿ ದಿನೇಶ್‌ ಕಾರ್ತಿಕ್‌ ಅದ್ಭುತ ಆಟದ ಪ್ರದರ್ಶನ ನೀಡಿದ್ದಾರೆ. ದಿನೇಶ್‌ ಅವರ ಮ್ಯಾಚ್‌ ವಿನ್ನಿಂಗ್‌ ಪ್ರಯತ್ನದಿಂದ ಅವರು ಮತ್ತೆ ಭಾರತೀಯ ತಂಡಕ್ಕೆ ಮರಳುವ ಪ್ರಯತ್ನ ಮಾಡಿದ್ದಾರೆ ಎಂದು ರಾಯಲ್‌ ಚಾಲೆಂಜರ್ ಬೆಂಗಳೂರು (ಆರ್‌ಸಿಬಿ) ತಂಡದ ನಾಯಕ ಫಾ ಡು ಪ್ಲೆಸಿಸ್‌ ಹೇಳಿದ್ದಾರೆ.

ದಿನೇಶ್‌ ಕೇವಲ 23 ಎಸೆತಗಳಿಂದ ಅಜೇಯ 44 ರನ್‌ ಸಿಡಿಸಿದ್ದರಿಂದ ಆರ್‌ಸಿಬಿ ಅಮೋಘ ಗೆಲುವು ಸಾಧಿಸುವಂತಾಯಿತು. ಒಂದು ಹಂತದಲ್ಲಿ ಬ್ಯಾಟಿಂಗ್‌ ಕುಸಿತ ಕಂಡಿದ್ದ ಆರ್‌ಸಿಬಿ ತಂಡವನ್ನು ದಿನೇಶ್‌ ತನ್ನ ಅಮೋಘ ಆಟದಿಂದ ಮೇಲಕ್ಕೆತ್ತಿದ್ದರು. ಅವರಿಗೆ ಶಾಬಾಜ್‌ ಅಹ್ಮದ್‌ ಉತ್ತಮ ಬೆಂಬಲ ನೀಡಿದ್ದರು.

ಡಿಕೆ (ದಿನೇಶ್‌ ಕಾರ್ತಿಕ್‌) ಅವರು ಅತ್ಯುತ್ತಮ ಕ್ರಿಕೆಟ್‌ ಆಡುತ್ತಿದ್ದಾರೆ. ಅವರು ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಬೇಕೆನ್ನುವುದು ನನ್ನ ಅಲೋಚನೆಯಾಗಿದೆ ಎಂದು ಪ್ಲೆಸಿಸ್‌ ತಿಳಿಸಿದರು.

ನಮ್ಮ ಸಾಮರ್ಥ್ಯವನ್ನು ಹೊರಗೆಡಹಲು ಒಳ್ಳೆಯ ನಿರ್ವಹಣೆಯ ಅಗತ್ಯವಿದೆ. ದಿನೇಶ್‌ ಕಾರ್ತಿಕ್‌ ಬಲುದೊಡ್ಡ ಒಳ್ಳೆಯ ನಿರ್ವಹಣೆಯ ವ್ಯಕ್ತಿಯಾಗಿದ್ದಾರೆ ಮತ್ತು ಅವರಿಂದ ಯಾವಾಗಲೂ ಒಳ್ಳೆಯ ನಿರ್ವಹಣೆಯನ್ನು ನಿರೀಕ್ಷಿಸಬಹುದು. ಎಷ್ಟೇ ಒತ್ತಡವಿದ್ದರೂ ಶಾಂತ ರೀತಿಯಲ್ಲಿ ಅವರು ಆಡುವ ಮೂಲಕ ಇತರರನ್ನು ಹುರಿದುಂಬಿಸುತ್ತಿದ್ದಾರೆ ಎಂದು ಪ್ಲೆಸಿಸ್‌ ಹೇಳಿದರು.

ಹಲವು ಬಾರಿ ರಾಷ್ಟ್ರೀಯ ತಂಡಕ್ಕೆ ಮರಳಿರುವ ಕಾರ್ತಿಕ್‌ 2019ರ ವಿಶ್ವಕಪ್‌ನಲ್ಲಿ ಭಾರತ ಪರ ಕೊನೆಯದಾಗಿ ಆಡಿದ್ದರು. ನಂಬಿಗಸ್ಥ ಫಿನಿಶರ್‌ ಆಗಿ ಭಾರತೀಯ ತಂಡಕ್ಕೆ ಮರಳಲು ಅವರು ಬಯಸಿದ್ದಾರೆ.

ಇದನ್ನೂ ಓದಿ:ಐಪಿಎಲ್‌ : ಏಕಪಕ್ಷೀಯವಾಗಿ ಗೆದ್ದ ಕೋಲ್ಕತ್ತ ನೈಟ್ ರೈಡರ್ಸ್

ರಾಜಸ್ಥಾನ್‌-ಬೆಂಗಳೂರು
– ಬೌಂಡರಿ ಹೊಡೆಯದೇ ಜೋಸ್‌ ಬಟ್ಲರ್‌ 70 ರನ್‌ ಗಳಿಸಿರುವುದು ಐಪಿಎಲ್‌ ಇನ್ನಿಂಗ್ಸ್‌ವೊಂದರ ಗರಿಷ್ಠ ಮೊತ್ತವಾಗಿದೆ. 2017ರಲ್ಲಿ ಪಂಜಾಬ್‌ ವಿರುದ್ಧ ನಿತೀಶ್‌ ರಾಣಾ ಅಜೇಯ 62 ರನ್‌ ಗಳಿಸಿದ್ದು ಈ ಹಿಂದಿನ ಗರಿಷ್ಠ ಮೊತ್ತವಾಗಿತ್ತು.
– ಬಟ್ಲರ್‌ ಐಪಿಎಲ್‌ನಲ್ಲಿ 100 ಸಿಕ್ಸರ್‌ ಬಾರಿಸಿದ ಇಂಗ್ಲೆಂಡಿನ ಮೊದಲ ಆಟಗಾರರಾಗಿದ್ದಾರೆ.
– ಐಪಿಎಲ್‌ನಲ್ಲಿ ಅತೀ ವೇಗವಾಗಿ 100 ಸಿಕ್ಸರ್‌ ಬಾರಿಸಿದವರಲ್ಲಿ ಬಟ್ಲರ್‌ ನಾಲ್ಕನೇ ಆಟಗಾರರಾಗಿದ್ದಾರೆ. ಬಟ್ಲರ್‌ 67 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಕ್ರಿಸ್‌ ಗೇಲ್‌, ಆ್ಯಂಡ್ರೆ ರಸೆಲ್‌ ಮತ್ತು ರಿಷಬ್‌ ಪಂತ್‌ ಇನ್ನುಳಿದ ಮೂವರು ಆಟಗಾರರಾಗಿದ್ದು ಅವರೆಲ್ಲ ಬಟ್ಲರ್‌ ಅವರಿಗಿಂತ ಕಡಿಮೆ ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರು.
– ಟಿ20 ಕ್ರಿಕೆಟ್‌ನಲ್ಲಿ ಸಂಜು ಸ್ಯಾಮ್ಸನ್‌ ಅವರನ್ನು ವನಿಂದು ಹಸರಂಗ ಅವರು ನಾಲ್ಕನೇ ಬಾರಿ ಕೆಡಹಿದ್ದಾರೆ.
– ಐಪಿಎಲ್‌ ಪಂದ್ಯದ ವೇಳೆ ವಿರಾಟ್‌ ಕೊಹ್ಲಿ ಒಂದಂಕಿ ಮೊತ್ತದಲ್ಲಿ ರನೌಟ್‌ ಔಟಾಗಿರುವುದು ಇದು ಎರಡನೇ ಸಲವಾಗಿದೆ. ಈ ಮೊದಲು 2012ರಲ್ಲಿ ಮುಂಬೈ ವಿರುದ್ಧ ಅವರು ಒಂದಂಕಿ ಮೊತ್ತಕ್ಕೆ ರನೌಟ್‌ ಔಟಾಗಿದ್ದರು.
– ಬಟ್ಲರ್‌ ಕಳೆದ ನಾಲ್ಕು ಐಪಿಎಲ್‌ ಇನ್ನಿಂಗ್ಸ್‌ಗಳಿಂದ 329 ರನ್‌ ಗಳಿಸಿದ್ದಾರೆ. ಸತತ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಇದಕ್ಕಿಂತ ಹೆಚ್ಚಿನ ಮೊತ್ತವನ್ನು ವಿರಾಟ್‌ ಕೊಹ್ಲಿ (351), ಶಿಖರ್‌ ಧವನ್‌ (333) ಮಾತ್ರ ಹೊಡೆದಿದ್ದರು.
– ಐಪಿಎಲ್‌ 2022ರಲ್ಲಿ ಬಟ್ಲರ್‌ 205 ರನ್‌ ಗಳಿಸಿದ್ದಾರೆ. ಈ ಋತುವಿನ ಗರಿಷ್ಠ ರನ್‌ ಸಾಧನೆಯಲ್ಲಿ ಇಶನ್‌ ಕಿಶನ್‌ ಮೊತ್ತವನ್ನು ಹಿಂದಿಕ್ಕಿರುವ ಬಟ್ಲರ್‌ ಆರೆಂಜ್‌ ಕ್ಯಾಪ್‌ ಹೊಂದಿದ್ದಾರೆ.
– ಶಾಬಾಜ್‌ ಮತ್ತು ದಿನೇಶ್‌ ಕಾರ್ತಿಕ್‌ ಅವರ 67 ರನ್‌ ಜತೆಯಾಟ ಐಪಿಎಲ್‌ನಲ್ಲಿ ಆರ್‌ಸಿಬಿ ಆರನೇ ವಿಕೆಟಿಗೆ ಪೇರಿಸಿದ ಎರಡನೇ ಗರಿಷ್ಠ ಮೊತ್ತವಾಗಿದೆ. 2013ರಲ್ಲಿ ಗೇಲ್‌ ಮತ್ತು ಅರುಣ್‌ ಕಾರ್ತಿಕ್‌ ಅಜೇಯ 76 ರನ್‌ ಪೇರಿಸಿದ್ದು ಈ ಹಿಂದಿನ ಗರಿಷ್ಠ ಮೊತ್ತವಾಗಿತ್ತು.

ಟಾಪ್ ನ್ಯೂಸ್

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kejriwal 2

CM ‘ಅಲಂಕಾರಿಕವಲ್ಲ’: ಕೇಜ್ರಿಗೆ ಮತ್ತೆ ಕೋರ್ಟ್‌ ಗುದ್ದು

1-wewqwq-eqw

Amit Shah ನಕಲಿ ವೀಡಿಯೋ :ತೆಲಂಗಾಣ ಸಿಎಂಗೆ ಪೊಲೀಸ್‌ ಸಮನ್ಸ್‌

1-wqqwqwqeqwe

Kodava Hockey: ಚೇಂದಂಡಕ್ಕೆ 3ನೇ ಪ್ರಶಸ್ತಿ

1-wwwewqe

IPL; ವಿಲ್‌ ಜಾಕ್ಸ್‌ ಭಾರೀ ಸಂಚಲನ: ಆರೇ ನಿಮಿಷದಲ್ಲಿ ಅರ್ಧ ಶತಕ!

BCCI

T20 World Cup: ಇಂದು ಭಾರತ ತಂಡ ಪ್ರಕಟ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

bjp-congress

E.C.ನೋಟಿಸ್‌ಗೆ ಉತ್ತರಿಸಲು ಸಮಯ ಕೇಳಿದ ಬಿಜೆಪಿ, ಕಾಂಗ್ರೆಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.