OBC ಸಿಎಂ ಬೇಕೋ, ಮನೆಮಗನೋ?- ಸಿಎಂ ಕೆಸಿಆರ್‌ ವಿರುದ್ಧ ತೊಡೆತಟ್ಟಿದ ಈಟೆಲ ರಾಜೇಂದರ್‌

ಗಜ್ವೇಲ್‌ನಲ್ಲಿ "ಕದನ" ಕುತೂಹಲ 

Team Udayavani, Nov 11, 2023, 12:55 AM IST

kcr eteala

ಹೊಸದಿಲ್ಲಿ: “ತೆಲಂಗಾಣದಲ್ಲಿ ಈ ಬಾರಿ ಹಿಂದುಳಿದ ವರ್ಗದ ನಾಯಕರನ್ನೇ ಮುಖ್ಯಮಂತ್ರಿ ಹುದ್ದೆ ಗೇರಿಸುವುದಾಗಿ ಪ್ರಧಾನಿ ನರೇಂದ್ರ ಮೋದಿಯವರೇ ಘೋಷಿಸಿದ್ದಾರೆ. ಹಾಗಾಗಿ ಇಲ್ಲಿ ಬಿಜೆಪಿ ಗೆದ್ದರೆ ನಾನೇ ಸಿಎಂ”.

ಇದು ತೆಲಂಗಾಣದಲ್ಲಿ ನೇರವಾಗಿ ಬಿಆರ್‌ಎಸ್‌ ಅಧ್ಯಕ್ಷ, ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ ರಾವ್‌ ವಿರುದ್ಧ ಗಜ್ವೇಲ್‌ ಕ್ಷೇತ್ರದಲ್ಲಿ ಕಣಕ್ಕಿಳಿದಿರುವ ಬಿಜೆಪಿ ನಾಯಕ ಈಟೆಲ ರಾಜೇಂದರ್‌ ಅವರ ಭರವಸೆಯ ಮಾತುಗಳು.

“ಒಬಿಸಿ ಸಮುದಾಯದವರೇ ಸಿಎಂ’ ಎಂಬ ಬಿಜೆಪಿಯ ಘೋಷಣೆಯು ರಾಜೇಂದರ್‌ ಅವರ ಕನಸಿಗೆ ರೆಕ್ಕೆಪುಕ್ಕ ಮೂಡಿಸಿದ್ದು, ರಾಜ್ಯಾದ್ಯಂತ “ನಾನೇ ಸಿಎಂ’ ಎಂದು ಹೇಳಿಕೊಂಡು ಅವರು ಹಿಂದುಳಿದ ವರ್ಗವನ್ನು ಸೆಳೆಯುವ ಪ್ರಯತ್ನ ನಡೆಸುತ್ತಿದ್ದಾರೆ. ಹುಜೂರಾಬಾದ್‌ ಕ್ಷೇತ್ರದಲ್ಲಿ ಸತತ 7 ಬಾರಿ ಗೆದ್ದಿರುವ ರಾಜೇಂದರ್‌, ತನ್ನ ಒಂದು ಕಾಲದ ಆಪ್ತರಾದ ಕೆಸಿಆರ್‌ ವಿರುದ್ಧ ತೊಡೆ ತಟ್ಟಿದ್ದಾರೆ. ಇವರಿಬ್ಬರ ನಡುವಿನ ಚುನಾ ವಣ ಕದನವು ಕುತೂಹಲಕಾರಿ “ಪ್ರತೀಕಾರದ ಪಂದ್ಯ’ವಾಗಿ ಮಾರ್ಪಟ್ಟಿದೆ.

ಸ್ವಾತಂತ್ರ್ಯದ ಬಳಿಕ ಅವಿಭಜಿತ ಆಂಧ್ರವಾಗಲೀ, ಈಗಿನ ತೆಲಂಗಾಣವಾಗಲೀ ಒಮ್ಮೆಯೂ ಒಬಿಸಿ ನಾಯಕನನ್ನು ಸಿಎಂ ಕುರ್ಚಿಯಲ್ಲಿ ಕಂಡಿಲ್ಲ. ಈ ಬಾರಿ ತೆಲಂಗಾಣವು ಒಬಿಸಿ ಸಿಎಂ ಅನ್ನು ನೋಡಲಿದೆ ಎನ್ನುತ್ತಾರೆ ಈಟೆಲ ರಾಜೇಂದರ್‌.

ಇನ್ನೊಂದೆಡೆ, ಗಜ್ವೇಲ್‌ ಕ್ಷೇತ್ರವು ಕೆಸಿಆರ್‌ ಅವರ ಭದ್ರಕೋಟೆ. “ಪೆದ್ದ ಕೊಡುಕು’ (ಹಿರಿಯ ಮಗ) ಬಗ್ಗೆ ಗಜ್ವೇಲ್‌ ಕ್ಷೇತ್ರದ ಮತದಾರರಿಗೂ ಅಪಾರ  ಒಲವಿದೆ. ಸಿಎಂ ಕ್ಷೇತ್ರವಾದ ಕಾರಣ ಮೂಲಸೌಕರ್ಯಗಳು ಸೇರಿದಂತೆ ಹಲ ವಾರು ಅಭಿವೃದ್ಧಿ ಕಾಮಗಾರಿಗಳನ್ನು ಗಜ್ವೇಲ್‌ ಕಂಡಿದೆ. ಕೆಸಿಆರ್‌ ಅವರ ಅನುಪಸ್ಥಿತಿಯನ್ನು ಹೊರತು ಪಡಿಸಿದರೆ ಉಳಿದಂತೆ ಎಲ್ಲವೂ ಓಕೆ ಎನ್ನುತ್ತಾರೆ ಇಲ್ಲಿನ ಜನ. ಸತತ 2 ಬಾರಿ ಇಲ್ಲಿ ಕೆಸಿಆರ್‌ ಗೆದ್ದಿ ದ್ದಾರೆ. ಅಲ್ಲದೇ 1983ರಿಂದಲೇ ಈವರೆಗೆ ಯಾವ ಚುನಾವಣೆಯಲ್ಲೂ ಸೋತಿದ್ದಿಲ್ಲ.

ಗಜ್ವೇಲ್‌ ಕ್ಷೇತ್ರದಲ್ಲಿ ಶೇ.65ರಷ್ಟು ಮತ ದಾರರು ಹಿಂದುಳಿದ ವರ್ಗಕ್ಕೆ ಸೇರಿದವರು. ಈ ಮತಗಳು ಬಿಜೆಪಿಯ “ಒಬಿಸಿ ಸಿಎಂ’ ಕಡೆ ವಾಲು ತ್ತದೋ ಅಥವಾ ನಮಗೆ “ಪೆದ್ದ ಕೊಡುಕು’ ವೇ ಸಾಕು ಎನ್ನುತ್ತದೋ ಕಾದು ನೋಡಬೇಕು.

59 ಕೋಟಿ ರೂ. ಆಸ್ತಿ: ತೆಲಂಗಾಣ ಸಿಎಂ ಕೆಸಿಆರ್‌ ಅವರು ತಮ್ಮ ಕುಟುಂಬದ ಆಸ್ತಿ ಮೌಲ್ಯ 59 ಕೋಟಿ ರೂ. ಎಂದು ಘೋಷಿಸಿ ದ್ದಾರೆ. ಗುರುವಾರ ನಾಮಪತ್ರ ಸಲ್ಲಿಕೆ ವೇಳೆ ಸಲ್ಲಿಸಿ ರುವ ಅಫಿದವಿತ್‌ನಲ್ಲಿ ಈ ವಿವರ ನೀಡಿದ್ದಾರೆ. ಪತ್ನಿ ಶೋಭಾ ಹೆಸರಲ್ಲಿ 7 ಕೋಟಿ ರೂ., 2.81 ಕೆ.ಜಿ. ಚಿನ್ನ, 1.5 ಕೋಟಿ ರೂ. ಮೌಲ್ಯದ ವಜ್ರಾಭರಣ ಇವೆ ಎಂದೂ ತಿಳಿಸಿ ದ್ದಾರೆ. ತಮ್ಮ ವಿರುದ್ಧ 9 ಕೇಸುಗಳು ಇತ್ಯರ್ಥ ವಾಗಲು ಬಾಕಿ ಇರುವುದಾಗಿ ಮಾಹಿತಿ ನೀಡಿದ್ದಾರೆ.

ಕಾಂಗ್ರೆಸ್‌ ಘೋಷಣೆ: ಶುಕ್ರವಾರ ತೆಲಂಗಾಣ ದಲ್ಲಿ ಕಾಂಗ್ರೆಸ್‌ “ಅಲ್ಪಸಂಖ್ಯಾಕ ಘೋಷಣ ಪತ್ರ’ ಬಿಡುಗಡೆ ಮಾಡಿದೆ. ಅದರಂತೆ ಅಲ್ಪ ಸಂಖ್ಯಾಕರ ಕಲ್ಯಾಣಕ್ಕಾಗಿ ಬಜೆಟ್‌ನಲ್ಲಿ 4 ಸಾವಿರ ಕೋಟಿ ರೂ. ವಾರ್ಷಿಕವಾಗಿ ಮೀಸಲಿಡುವು ದಾಗಿ ಘೋಷಿಸಿದೆ. ಅಧಿಕಾರಕ್ಕೆ ಬಂದ 6 ತಿಂಗಳುಗಳಲ್ಲೇ ಜಾತಿಗಣತಿ ನಡೆಸಲಾಗುವುದು, ಎಂಫಿಲ್‌ ಮತ್ತು ಪಿಎಚ್‌.ಡಿ ಪೂರ್ಣಗೊಳಿಸುವ ಮುಸ್ಲಿಂ, ಕ್ರಿಶ್ಚಿಯನ್‌, ಸಿಕ್ಖ್ ಹಾಗೂ ಇತರ ಅಲ್ಪಸಂಖ್ಯಾಕ ಯುವಜನರಿಗೆ 5 ಲಕ್ಷ ರೂ. ಆರ್ಥಿಕ ನೆರವು ನೀಡುವುದಾಗಿಯೂ ಭರವಸೆ ನೀಡಿದೆ.

253 ಅಭ್ಯರ್ಥಿಗಳು ಕೋಟ್ಯಧಿಪತಿಗಳು
ಇದೇ 17ರಂದು ಛತ್ತೀಸ್‌ಗಢದ 2ನೇ ಹಂತದ ಮತದಾನ ನಡೆಯಲಿದ್ದು, ಕಣದಲ್ಲಿರುವ ಅಭ್ಯರ್ಥಿಗಳ ಪೈಕಿ ಒಟ್ಟು 253 ಮಂದಿ ಕೋಟ್ಯಧಿಪತಿಗಳಂತೆ! ಅದರಲ್ಲೂ ಡಿಸಿಎಂ ಮತ್ತು ಕಾಂಗ್ರೆಸ್‌ ಹಿರಿಯ ನಾಯಕ ಟಿ.ಎಸ್‌. ಸಿಂಗ್‌ ದೇವ್‌ ಅವರು ಬರೋಬ್ಬರಿ 447 ಕೋಟಿ ರೂ.ಗಿಂತಲೂ ಹೆಚ್ಚು ಮೌಲ್ಯದ ಆಸ್ತಿ ಹೊಂದಿದ್ದಾರೆ. 2ನೇ ಹಂತದಲ್ಲಿ ಒಟ್ಟು 958 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಪ್ರತೀ ಅಭ್ಯರ್ಥಿಯ ಸರಾಸರಿ ಆಸ್ತಿ 2 ಕೋಟಿ ರೂ. ಎಂದು ಅಂದಾಜಿಸಲಾಗಿದೆ.

ಒಂದು ದಿನದಲ್ಲಿ ಪ್ರಧಾನಿ ಮೋದಿ ಲಕ್ಷಾಂತರ ರೂ.ಗಳ ಸೂಟ್‌ ಧರಿಸುತ್ತಾರೆ. ಅವರು ಎಂದಾದರೂ ಒಮ್ಮೆ ಧರಿಸಿದ ಸೂಟ್‌ ಅನ್ನೇ ಮತ್ತೂಮ್ಮೆ ಧರಿಸಿದ್ದನ್ನು ನೋಡಿದ್ದೀರಾ? ಅವರಿಗೆ ದಿನಕ್ಕೆ ಕನಿಷ್ಠ 1-2 ಉಡುಗೆ ಬೇಕು. ಆದರೆ ನಾನು ಕೇವಲ ಬಿಳಿ ಟಿಶರ್ಟ್‌ ಮಾತ್ರ ಧರಿಸುತ್ತೇನೆ.
ರಾಹುಲ್‌ ಗಾಂಧಿ, ಕಾಂಗ್ರೆಸ್‌ ನಾಯಕ

ಕಡಕ್‌ನಾಥ್‌ ಕೋಳಿಗೆ ಹೆಚ್ಚಿದ ಬೇಡಿಕೆ!
ಮಧ್ಯಪ್ರದೇಶದಲ್ಲಿ ಚುನಾವಣೆ ಸಮೀಪಿಸುತ್ತಿರುವಂತೆ ಪ್ರೊಟೀನ್‌ಯುಕ್ತ ಮತ್ತು ಕೊಬ್ಬಿನಂಶ ಕಡಿಮೆಯಿರುವ ಕಡಕ್‌ನಾಥ್‌ ಕೋಳಿಗೆ ಭಾರೀ ಬೇಡಿಕೆ ಬಂದಿದೆಯಂತೆ! ನ.17ರಂದು ಇಲ್ಲಿ ಚುನಾವಣೆ ನಡೆಯಲಿದೆ. ಇತ್ತೀಚಿನ ದಿನಗಳಲ್ಲಿ ಈ ತಳಿಯ ಕೋಳಿಗೆ ಬೇಡಿಕೆ ಶೇ.30-40ರಷ್ಟು ಹೆಚ್ಚಳವಾಗಿದೆ. ಇದನ್ನು ಕಪ್ಪು ಮಾಂಸವಿರುವ ಕೋಳಿ ಎನ್ನುತ್ತಾರೆ. ಜಬುವಾ ಪ್ರದೇಶದಲ್ಲಿ ಭಿಲ್‌ ಎಂಬ ಬುಡಕಟ್ಟು ಜನಾಂಗೀಯರು ಭಾರೀ ಸಂಖ್ಯೆಯಲ್ಲಿದ್ದಾರೆ. ಶುಭ ಸಮಾರಂಭ, ಪೂಜೆ ಮತ್ತಿತರ ವಿಧಿ ವಿಧಾನಗಳಿಗೆ ಕೋಳಿ ಬಲಿಕೊಡುವುದು ಇವರ ಸಂಪ್ರದಾಯ. ಚುನಾವಣೆ ಹತ್ತಿರ ಬರುತ್ತಿರುವಂತೆ ಕೋಳಿ ಮಾಂಸದ ಬೆಲೆ 1,200ರಿಂದ 1,500ರೂ.ವರೆಗೆ ತಲುಪಿದೆ ಎನ್ನುತ್ತಾರೆ ವ್ಯಾಪಾರಸ್ಥರು.

ಪೆಟ್ರೋಲ್‌, ಡೀಸೆಲ್‌ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲು ಕೇಂದ್ರ ಸರಕಾರ ಬಯಸಿತ್ತು. ಆದರೆ ಈ ವಿಚಾರದಲ್ಲಿ ಕಾಂಗ್ರೆಸ್‌ ಇಬ್ಬಗೆಯ ನೀತಿ ಅನುಸರಿಸುತ್ತಿದೆ. ನಿಜಕ್ಕೂ ಪ್ರಿಯಾಂಕಾ ವಾದ್ರಾ ಅವರನ್ನು ಇದನ್ನು ಬಯಸುತ್ತಿದ್ದಾರೆಂದರೆ, ಕಾಂಗ್ರೆಸ್‌ ಆಡಳಿತದ ರಾಜ್ಯಗಳಲ್ಲಿ ಜಾರಿ ಮಾಡಲಿ.
ನಿರ್ಮಲಾ ಸೀತಾರಾಮನ್‌, ಕೇಂದ್ರ ವಿತ್ತ ಸಚಿವೆ

ಟಾಪ್ ನ್ಯೂಸ್

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

Mahadev Betting App Case; Actor Sahil Khan arrested by Mumbai police

Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

1-weqqeqw

Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.