ಬಿಎಂಡಬ್ಲ್ಯು ಕಾರು ಮಾರಲು ಬಯಸಿದ ದ್ಯುತಿ


Team Udayavani, Jul 12, 2020, 12:06 PM IST

ಬಿಎಂಡಬ್ಲ್ಯು ಕಾರು ಮಾರಲು ಬಯಸಿದ ದ್ಯುತಿ

ಹೊಸದಿಲ್ಲಿ: ಭಾರತದ “ಸ್ಪ್ರಿಂಟ್‌ ಕ್ವೀನ್‌’ ದ್ಯುತಿ ಚಂದ್‌ ತಮ್ಮ ಬಿಎಂಡಬ್ಲ್ಯು ಕಾರನ್ನು ಮಾರಾಟ ಮಾಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿ ಬಳಿಕ ಇದನ್ನು ಡಿಲೀಟ್‌ ಮಾಡಿದ್ದಾರೆ.

ಕೊರೊನಾದಿಂದ ಪ್ರಾಯೋಜಕರು ಸಿಗದೇ ಇರುವುದ ರಿಂದ ತರಬೇತಿಗೆ ಆರ್ಥಿಕ ಅಡಚಣೆ ಆಗುತ್ತಿರುವ ಕಾರಣ ದ್ಯುತಿ ಚಂದ್‌ ತಮ್ಮ 2015ರ ಬಿಎಂಡಬ್ಲ್ಯು 3-ಸಿರೀಸ್‌ ಲಕ್ಸುರಿ ಕಾರನ್ನು ಮಾರಾಟ ಮಾಡಲು ಮುಂದಾಗಿದ್ದರು.

“ನಾನೀಗ ಟೋಕಿಯೊ ಒಲಿಂಪಿಕ್ಸ್‌ ಸಿದ್ಧತೆಯಲ್ಲಿದ್ದೇನೆ. ಆದರೆ ಕೊರೊನಾದಿಂದಾಗಿ ಪ್ರಾಯೋಜಕರು ಸಿಗುತ್ತಿಲ್ಲ. ರಾಜ್ಯ ಸರಕಾರದ ಆರ್ಥಿಕ ಸ್ಥಿತಿ ಕೂಡ ಹದಗೆಟ್ಟಿದೆ. ತರಬೇತಿ ಹಾಗೂ ಇತರ ಚಟುವಟಿಕೆಗಳಿಗಾಗಿ ನನಗೀಗ ಹಣದ ಆವಶ್ಯಕತೆ ಇದೆ.

ಹೀಗಾಗಿ ಈ ಕಾರನ್ನು ಮಾರಲು ಬಯಸಿದ್ದೇನೆ’ ಎಂಬುದಾಗಿ ದ್ಯುತಿ ಚಂದ್‌ ಹೇಳಿದ್ದರು. ಹಣವೆಲ್ಲ ಖಾಲಿ
“ಟೋಕಿಯೊ ತರಬೇತಿಗಾಗಿ ನನಗೆ ಸರಕಾರ 50 ಲಕ್ಷ ರೂ. ನೀಡಿರುವುದೇನೋ ಹೌದು. ಆದರೆ ತರಬೇತಿಯ ತಿಂಗಳ ವೆಚ್ಚವೇ 5 ಲಕ್ಷ ರೂ. ಆಗುತ್ತದೆ. ಈ ಹಣವೆಲ್ಲ ಖಾಲಿಯಾಗಿದೆ. ಮುಂದೆ ಜರ್ಮನಿಯಲ್ಲಿ ತರಬೇತಿ ಪಡೆ ಯಬೇಕಿದೆ. ಇದಕ್ಕೆ ಹಣದ ಅಗತ್ಯವಿದೆ’ ಎಂದಿದ್ದಾರೆ ದ್ಯುತಿ.

“ಈ ಕಾರನ್ನು ಸ್ವತಃ ನಾನು ಖರೀದಿಸಿದ್ದೇ ಹೊರತು ಉಡು ಗೊರೆಯಾಗಿ ಬಂದದ್ದಲ್ಲ. ಏಶ್ಯಾಡ್‌ನ‌ಲ್ಲಿ ನನ್ನ ಸಾಧನೆಗಾಗಿ ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ 3 ಕೋಟಿ ರೂ. ಬಹುಮಾನ ನೀಡಿದ್ದರು. ಇದರಿಂದ ಮನೆ ಕಟ್ಟಿಸುವ ಜತೆಗೆ ಈ ಕಾರನ್ನು 30 ಲಕ್ಷ ರೂ.ಗೆ ಖರೀದಿಸಿದ್ದೆ. ನನ್ನಲ್ಲಿ ಇನ್ನೂ ಎರಡು ಕಾರುಗಳಿವೆ. ಮನೆಯಲ್ಲಿ ಇವನ್ನು ನಿಲ್ಲಿಸಲು ಸೂಕ್ತ ಸ್ಥಳಾವಕಾಶವಿಲ್ಲ. ಅಲ್ಲದೇ ಇಂಥ ಲಕ್ಸುರಿ ಕಾರನ್ನು ನಿಭಾಯಿಸುವುದು ಕೂಡ ಸುಲಭವಲ್ಲ’ ಎಂದು ದ್ಯುತಿ ಚಂದ್‌ ಹೇಳಿದರು.

ಟಾಪ್ ನ್ಯೂಸ್

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kejriwal 2

CM ‘ಅಲಂಕಾರಿಕವಲ್ಲ’: ಕೇಜ್ರಿಗೆ ಮತ್ತೆ ಕೋರ್ಟ್‌ ಗುದ್ದು

1-wewqwq-eqw

Amit Shah ನಕಲಿ ವೀಡಿಯೋ :ತೆಲಂಗಾಣ ಸಿಎಂಗೆ ಪೊಲೀಸ್‌ ಸಮನ್ಸ್‌

1-wqqwqwqeqwe

Kodava Hockey: ಚೇಂದಂಡಕ್ಕೆ 3ನೇ ಪ್ರಶಸ್ತಿ

1-wwwewqe

IPL; ವಿಲ್‌ ಜಾಕ್ಸ್‌ ಭಾರೀ ಸಂಚಲನ: ಆರೇ ನಿಮಿಷದಲ್ಲಿ ಅರ್ಧ ಶತಕ!

BCCI

T20 World Cup: ಇಂದು ಭಾರತ ತಂಡ ಪ್ರಕಟ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

bjp-congress

E.C.ನೋಟಿಸ್‌ಗೆ ಉತ್ತರಿಸಲು ಸಮಯ ಕೇಳಿದ ಬಿಜೆಪಿ, ಕಾಂಗ್ರೆಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.