E.D: ಇದೇ ಮೊದಲು; ಇ.ಡಿ.ಚಾರ್ಜ್ಶೀಟ್ನಲ್ಲಿ ಪಿಯಾಂಕಾ ವಾದ್ರಾ ಹೆಸರು ಉಲ್ಲೇಖ
ಹರ್ಯಾಣದಲ್ಲಿ ಕೃಷಿ ಭೂಮಿ ಖರೀದಿ ಡೀಲ್ನ ವಿವರಗಳ ಪ್ರಸ್ತಾಪ
Team Udayavani, Dec 28, 2023, 8:52 PM IST
ನವದೆಹಲಿ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಹೆಸರನ್ನು ಜಾರಿ ನಿರ್ದೇಶನಾಲಯ (ಇ.ಡಿ) ತನಿಖೆ ನಡೆಸುತ್ತಿರುವ ಪ್ರಕರಣದ ಆರೋಪಪಟ್ಟಿಯಲ್ಲಿ ಉಲ್ಲೇಖೀಸಲಾಗಿದೆ. ಇದೇ ಮೊದಲ ಬಾರಿಗೆ ಇಂಥ ಕ್ರಮ ಕೈಗೊಳ್ಳಲಾಗಿದೆ.
ಹರ್ಯಾಣದಲ್ಲಿ ಐದು ಎಕರೆ ಕೃಷಿ ಭೂಮಿಯನ್ನು ನವದೆಹಲಿಯ ರಿಯಲ್ ಎಸ್ಟೇಟ್ ಉದ್ಯಮಿ ಎಚ್.ಎಲ್.ಪಹ್ವಾ ಎಂಬಾತನಿಂದ ಅವರು ಖರೀದಿ ಮಾಡಿದ್ದಾರೆ. 2006ರಲ್ಲಿ ಈ ಖರೀದಿಯನ್ನು ನಡೆಸಲಾಗಿತ್ತು. ನಂತರ 2010ರಲ್ಲಿ ಪಹ್ವಾ ಎಂಬಾತನಿಗೇ ಮರು ಮಾರಾಟವನ್ನು ಪ್ರಿಯಾಂಕಾ ವಾದ್ರಾ ನಡೆಸಿದ್ದಾರೆ. ಈ ವ್ಯವಹಾರದಲ್ಲಿ ವಾದ್ರಾ, ಪಹ್ವಾಗೆ ಪೂರ್ಣ ಹಣವನ್ನೂ ನೀಡಿಲ್ಲ ಎಂದು ಇ.ಡಿ. ತನ್ನ ಆರೋಪ ಪಟ್ಟಿಯಲ್ಲಿ ಉಲ್ಲೇಖೀಸಿದೆ.
ಪ್ರಿಯಾಂಕಾ ವಾದ್ರಾರ ಪತಿ ರಾಬರ್ಟ್ ವಾದ್ರಾ ಕೂಡ ಪಹ್ವಾ ಎಂಬಾತನಿಂದಲೇ 2005 ಮತ್ತು 2006ರಲ್ಲಿ ಜಮೀನು ಖರೀದಿಸಿ ನಂತರ ಆತನಿಗೇ ಮಾರಾಟ ಮಾಡಿದ್ದರು. ಈ ಬಗ್ಗೆ ನವೆಂಬರ್ನಲ್ಲಿ ನವದೆಹಲಿಯ ವಿಶೇಷ ಕೋರ್ಟ್ಗೆ ಸಲ್ಲಿಕೆ ಮಾಡಲಾಗಿರುವ ಚಾರ್ಜ್ಶೀಟ್ಗಳಲ್ಲಿ ಈ ಅಂಶಗಳನ್ನು ಉಲ್ಲೇಖಿಸಲಾಗಿದೆ. ಸಂಜಯ ಭಂಡಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಬರ್ಟ್ ವಾದ್ರಾರನ್ನು ಇ.ಡಿ. ವಿಚಾರಣೆ ನಡೆಸಿದ್ದುಂಟು.
ಚಾರ್ಜ್ಶೀಟ್ನಲ್ಲಿ ರಾಬರ್ಟ್ ವಾದ್ರಾ ಮತ್ತು ಪ್ರಿಯಾಂಕಾ ವಾದ್ರಾರನ್ನು ಆರೋಪಿಗಳೆಂದು ಹೆಸರಿಸಲಾಗಿಲ್ಲ. ಪ್ರಕರಣದ ಜೊತೆಗೆ ಪರೋಕ್ಷ ಸಂಬಂಧ ಹೊಂದಿರುವ ಸಾಧ್ಯತೆಯಡಿ ಮಾತ್ರ ಇಬ್ಬರ ಹೆಸರುಗಳನ್ನು ಸೇರಿಸಲಾಗಿದೆ.
2016ರಲ್ಲಿ ದೇಶ ಬಿಟ್ಟುಶಸ್ತ್ರಾಸ್ತ್ರ ದಳ್ಳಾಳಿ ಸಂಜಯ ಭಂಡಾರಿ ವಿರುದ್ಧ ಇ.ಡಿ. ತನಿಖೆ ನಡೆಸುತ್ತಿದೆ. ಈತನಿಗೆ ನೆರವು ನೀಡಿದ ಆರೋಪದ ಹಿನ್ನೆಲೆಯಲ್ಲಿ ಅನಿವಾಸಿ ಭಾರತೀಯ ಉದ್ಯಮಿ ಸಿ.ಸಿ.ಥಂಪಿ, ಸುಮೀತ್ ಛಡ್ಡಾ ಎಂಬುವರೂ ನೆರವಾಗಿದ್ದಾರೆ. ಉದ್ಯಮಿ ಥಂಪಿ ರಾಬರ್ಟ್ ವಾಡ್ರಾ ಜತೆಗೆ ವ್ಯಾವಹಾರಿಕ ಬಾಂಧವ್ಯ ಹೊಂದಿದ್ದಾರೆ ಎಂದೂ ಆರೋಪಿಸಲಾಗಿದೆ.
ಬ್ರಿಟೀಷರ್ ಮಹಾತ್ಮಾ ಗಾಂಧೀಜಿಯವರಿಗೆ ಹೆದರುತ್ತಿದ್ದಂತೆ ಈಗ ಕಾಂಗ್ರೆಸಿಗರಿಗೆ ಬಿಜೆಪಿಯವರು ಅಂಜುತ್ತಿದ್ದಾರೆ. ಈಗಲೂ ಕೂಡ ಗಾಂಧಿ ಕುಟುಂಬವೆಂದರೆ ಕೇಂದ್ರ ಸರ್ಕಾರಕ್ಕೆ ಭಯ ಇದೆ ಎನ್ನುವುದಕ್ಕೆ ಚಾರ್ಜ್ಶೀಟ್ನಲ್ಲಿ ಪ್ರಿಯಾಂಕಾ ಹೆಸರು ಇರುವುದೇ ಸಾಕ್ಷಿ.
ನಾನಾ ಪಟೋಲೆ, ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥ
ಏನಿದು ಪ್ರಕರಣ?
– ಹರ್ಯಾಣದಲ್ಲಿ ಐದು ಎಕರೆ ಕೃಷಿ ಜಮೀನನ್ನು ರಿಯಲ್ ಎಸ್ಟೇಟ್ ಉದ್ಯಮಿ ಪಹ್ವಾನಿಂ ದ ಖರೀದಿ
– 2006ರಲ್ಲಿ ಈ ಖರೀದಿ ನಂತರ 2010ರಲ್ಲಿ ಪ್ರಿಯಾಂಕಾರಿಂದ ಪಹ್ವಾನಿಗೇ ಮತ್ತೆ ಮಾರಾಟ.
– ಸಂಜಯ ಭಂಡಾರಿ ವಿರುದ್ಧದ ಸಲ್ಲಿಲಾಗಿರುವ ಚಾರ್ಜ್ಶೀಟ್ನಲ್ಲೇ
ಈ ಅಂಶಗಳ ಉಲ್ಲೇಖ
– ಪಹ್ವಾ ಜತೆಗೆ ರಾಬರ್ಟ್ ವಾದ್ರಾರಿಂದಲೂ ಪ್ರತ್ಯೇಕ ಜಮೀನು ಖರೀದಿ-ಮಾರಾಟ ವಹಿವಾಟು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ