Election: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ V/s ಕಾಂಗ್ರೆಸ್
Team Udayavani, Oct 24, 2023, 11:34 PM IST
ಮಧ್ಯಪ್ರದೇಶದಲ್ಲಿ ಟಿಕೆಟ್ ಕಚ್ಚಾಟ ಎಷ್ಟರಮಟ್ಟಿಗೆ ತೀವ್ರಗೊಂಡಿದೆ ಎಂದರೆ ಕಾಂಗ್ರೆಸ್ನವರನ್ನು ಕಂಡರೆ ಕಾಂಗ್ರೆಸ್ನವರೇ ಉರಿದುಬೀಳುತ್ತಿದ್ದಾರೆ. ಇದು ರಾಜ್ಯ ವಿಧಾನಸಭೆ ಚುನಾ ವಣೆಯಲ್ಲಿ ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡಬಹುದು ಎಂಬ ಶಂಕೆಯನ್ನು ಮೂಡಿಸಿದೆ.
ಒಬಿಸಿ ಸಮುದಾಯಗಳಿಗೆ ಟಿಕೆಟ್ ಹಂಚಿಕೆಯಲ್ಲಿ ಆದ್ಯತೆ ನೀಡಿಲ್ಲ ಎನ್ನುವುದು ಕಾಂಗ್ರೆಸ್ನ ರಾಜ್ಯ ಉಪಾಧ್ಯಕ್ಷ ದಾಮೋದರ್ ಸಿಂಗ್ ಆರೋಪ. ಈ ಸಿಟ್ಟಿನಿಂದ ಅವರು ದಸರಾ ದಿನವೇ ಕಾಂಗ್ರೆಸ್ ಮಾಜಿ ಸಿಎಂ ದಿಗ್ವಿಜಯ್ಸಿಂಗ್ ಮತ್ತು ಪುತ್ರ ಜೈವರ್ಧನ್ ಸಿಂಗ್ ಪ್ರತಿಕೃತಿಗಳನ್ನು ದಹಿಸಿದ್ದಾರೆ. ಅಪ್ಪ-ಮಗ ಸೇರಿ ಕಾಂಗ್ರೆಸ್ಅನ್ನು ಸುಡುತ್ತಿದ್ದಾರೆ ಅದಕ್ಕೆ ನಾನು ಪ್ರತಿಕೃತಿ ಸುಡುತ್ತಿದ್ದೇನೆ ಎಂದಿದ್ದಾರೆ. ಜತೆಗೆ 15 ಕ್ಷೇತ್ರಗಳಲ್ಲಿ ತಾವೇ ಸ್ವತಂತ್ರ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿಯೂ ಘೋಷಿಸಿದ್ದಾರೆ. ಈ ಆಕ್ರೋಶದ ಬೆಂಕಿ ಚುನಾವಣೆಯ ವೇಳೆ ಕಾಂಗ್ರೆ ಸ್ಗೆ ಬಿಸಿ ಮುಟ್ಟಿಸುವ ಸಾಧ್ಯತೆಯೂ ಇಲ್ಲದಿಲ್ಲ.