ಯುರೋಪ್‌ ಗಡಿ ನಿರ್ಬಂಧ ಜೂ. 15ರ ವರೆಗೆ ವಿಸ್ತರಣೆ

ಯುರೋಪಿಯನ್‌ ಕಮಿಶನ್‌ ಕರೆ

Team Udayavani, May 10, 2020, 4:43 PM IST

ಯುರೋಪ್‌ ಗಡಿ ನಿರ್ಬಂಧ ಜೂ. 15ರ ವರೆಗೆ ವಿಸ್ತರಣೆ

ಯುರೋಪ್‌: ಯುರೋಪ್‌ ದೇಶಗಳ ಒಳಗೆ ಐರೋಪ್ಯೇತರ ಪ್ರಜೆಗಳ ಅನಗತ್ಯ ಪ್ರಯಾಣಕ್ಕೆ ವಿಧಿಸಲಾಗಿದ್ದ ನಿರ್ಬಂಧಗಳನ್ನು ಮುಂದುವರಿಸಲು ಐರೋಪ್ಯ ಒಕ್ಕೂಟದ ಸದಸ್ಯ ರಾಷ್ಟ್ರಗಳಿಗೆ ಯುರೋಪಿಯನ್‌ ಕಮಿಶನ್‌ ಕರೆ ನೀಡಿದೆ.
ದೇಶಗಳ ಬಾಹ್ಯ ಗಡಿಗಳಲ್ಲಿ ಐರೋಪ್ಯೇತರ ಪ್ರಜೆಗಳಿಗೆ ಇರುವ ಪ್ರಯಾಣ ನಿರ್ಬಂಧವನ್ನು ಜೂ. 15ರ ತನಕ ವಿಸ್ತರಿಸಲು ಕಮಿಶನ್‌ ಸಲಹೆ ಮಾಡಿದೆ. ಯುರೋಪ್‌ ಹಾಗೂ ಒಟ್ಟಾರೆಯಾಗಿ ಜಗತ್ತಿನಲ್ಲಿ ಪರಿಸ್ಥಿತಿ ಇನ್ನೂ ಗಂಭೀರವಾಗಿ ಇರುವ ಹಿನ್ನೆಲೆಯಲ್ಲಿ ಈ ಕ್ರಮ ಅನಿವಾರ್ಯ ಎಂದು ಕಮಿಶನ್‌ ಹೇಳಿದೆ.

ಕೋವಿಡ್ ವೈರಸ್‌ ಹರಡುವುದನ್ನು ತಡೆಯುವ ಸಲುವಾಗಿ ಐರೋಪ್ಯೇತರ ಪ್ರಜೆಗಳಿಗೆ ದೇಶದ ಗಡಿಗಳನ್ನು ಮುಚ್ಚುವ ನಿರ್ಧಾರವನ್ನು ಮಾರ್ಚ್‌ನಲ್ಲಿ ಕೈಗೊಳ್ಳಲಾಗಿತ್ತು. ಇದಕ್ಕೂ ಮೊಲು ಅಮೆರಿಕ ಯುರೋಪ್‌ ದೇಶಗಳಿಗೆ ಪ್ರವಾಸ ಹೋಗುವುದನ್ನು ನಿರ್ಬಂಧಿಸಿತ್ತು.

ಐರೊಪ್ಯೇತರ ಪ್ರಜೆಗಳ ಪ್ರಯಾಣವನ್ನು ನಿರ್ಬಂಧಿಸಿದರೂ ಆಂತರಿಕ ಗಡಿಗಳ ಒಳಗೆ ಮತ್ತು ವೀಸಾ ಮುಕ್ತ ಶೆಂಗೆನ್‌ಗೆ ಯುರೋಪ್‌ ಪ್ರಜೆಗಳ ಅಡಚಣೆ ರಹಿತ ಪ್ರಯಾಣಕ್ಕೆ ಆದ್ಯತೆ ನೀಡಬೇಕು ಎಂದು ಕಮಿಶನ್‌ ಹೇಳಿದೆ.

ಬಾಹ್ಯ ಗಡಿಗಳ ನಿರ್ಬಂಧವನ್ನು ಸಡಿಲಿಸುವ ಮೊದಲು ಆಂತರಿಕ ಗಡಿಗಳಲ್ಲಿರುವ ನಿರ್ಬಂಧಗಳನ್ನು ಕ್ರಮೇಣ ಸಡಿಲಿಸುವ ಅಗತ್ಯವಿದೆ. ಹಂತಹಂತವಾಗಿ ಸಮನ್ವಯದಿಂದ ಈ ಕಾರ್ಯವನ್ನು ನಡೆಸಬೇಕು. ಆರೋಗ್ಯ ಸ್ಥಿತಿ ಸಹಜ ಸ್ಥಿತಿಗೆ ಬಂದರೆ ಶೆಂಗೆನ್‌ನ ಪ್ರಯಾಣಕ್ಕೆ ಆದ್ಯತೆ ನೀಡುವುದು ನಮ್ಮ ಮೊದಲ ಉದ್ದೇಶ ಎಂದು ಐರೋಪ್ಯ ಒಕ್ಕೂಟದ ಗೃಹ ವ್ಯವಹಾರಗಳ ಸಚಿವ ಯಿಲ್ವ ಜಾನ್ಸನ್‌ ಹೇಳಿದ್ದಾರೆ.

ಕೋವಿಡ್ ನಿಯಂತ್ರಿಸುವ ಸಲುವಾಗಿ ಎಲ್ಲ ದೇಶಗಳು ಪ್ರಯಾಣಕ್ಕೆ ಕಟ್ಟುನಿಟ್ಟಿನ ನಿರ್ಬಂಧಗಳನ್ನು ಹೇರಿವೆ. ಯುರೋಪ್‌ನಲ್ಲಿ ನಿರ್ಬಂಧಗಳಿದ್ದರೂ ಇದರಿಂದ ಆರ್ಥಿಕತೆಗೆ ಬಹಳಷ್ಟು ಹಾನಿಯಾಗಿದೆ ಮತ್ತು ಯುರೋಪ್‌ ಖಂಡದಾದ್ಯಂತ ಪ್ರವಾಸೋದ್ಯಮ ಸಂಪೂರ್ಣ ನೆಲಕಚ್ಚಿದೆ.

ಈ ಹಿನ್ನೆಲೆಯಲ್ಲಿ ಜೂ.15ರಿಂದಾಚೆಗೆ ಪ್ರಯಾಣ ನಿರ್ಬಂಧ ಮುಂದುವರಿಸುವುದಾದರೆ ಅದಕ್ಕೂ ಮೊದಲು ಪರಿಸ್ಥಿತಿಯ ಮರು ಅವಲೋಕನ ಅಗತ್ಯವಿದೆ ಎಂದು ಕಮಿಶನ್‌ ಅಭಿಪ್ರಾಯಪಟ್ಟಿದೆ. ಯುರೋಪ್‌ ಖಂಡದಲ್ಲೀಗ ಎರಡು ಬಗೆಯ ಗುಂಪುಗಳಿವೆ. ಕೆಲವು ರಾಷ್ಟ್ರಗಳು ಈಗಾಗಲೇ ಸೋಂಕನ್ನು ತಕ್ಕಮಟ್ಟಿಗೆ ತಡೆಗಟ್ಟಿ, ಲಾಕ್‌ಡೌನ್‌ ತೆರವಿಗೆ ಮುಂದಾಗಿವೆ. ಕೆಲವು ರಾಷ್ಟ್ರಗಳು ಈಗಾಗಲೇ ಸಾಕಷ್ಟು ವಿನಾಯಿತಿ ಜಾರಿಗೆ ತಂದಿವೆ. ಇನ್ನು ಕೆಲವು ರಾಷ್ಟ್ರಗಳು ಲಾಕ್‌ಡೌನ್‌ ತೆರವಿಗೆ ಯೋಚಿಸುತ್ತಿವೆ.

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

1-wewewqe

Beauty; ಈ 60ರ ಚೆಲುವೆ ಬ್ಯೂನಸ್‌ ಐರಿಸ್‌ ಮಿಸ್‌ ಯುನಿವರ್ಸ್‌!

1-cuba

Cuba ನಗದು ಕೊರತೆ: ಎಟಿಎಂ ಮುಂದೆ ಜನರ ಕ್ಯೂ

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.