ವಿಟ್ಲ:ಅಡ್ಯನಡ್ಕ ಸಮೀಪ ಗುಡ್ಡಕ್ಕೆ ಬೆಂಕಿ
Team Udayavani, Apr 17, 2024, 12:01 AM IST
ವಿಟ್ಲ: ಅಡ್ಯನಡ್ಕ ಸಮೀಪದ ಪಂಜಿಕಲ್ಲು ಎಂಬಲ್ಲಿ ಗುಡ್ಡಕ್ಕೆ ಬೆಂಕಿ ಬಿದ್ದಿದ್ದು, ಪುತ್ತೂರು ಅಗ್ನಿಶಾಮಕ ದಳದ ಸಿಬಂದಿ ಕಾರ್ಯಾಚರಣೆ ನಡೆಸಿ, ಶಮನಗೊಳಿಸಿದರು.
ಪಂಜಿಕಲ್ಲು ನಾರಾಯಣ ನಾಯ್ಕ ಅವರಿಗೆ ಸೇರಿದ ಜಾಗಕ್ಕೆ ಬೆಂಕಿ ಬಿದ್ದಿದ್ದು, ಒಮ್ಮೆ ಶಮನಗೊಳಿಸ
ಲಾಗಿತ್ತು. ಮತ್ತೆ ಏಕಾಏಕಿ ಬೆಂಕಿ ಕಾಣಿಸಿದ್ದರಿಂದ ಅಗ್ನಿಶಾಮಕ ದಳವನ್ನು ಸಂಪರ್ಕಿಸಿದರೆನ್ನಲಾಗಿದೆ.
ರಾತ್ರಿಯವರೆಗೂ ಗುಡ್ಡದಲ್ಲಿ ಕಾರ್ಯಾಚರಣೆ ನಡೆಯಿತು.