ಪ್ರವಾಹದ ಹೊಡೆತ: ಶಾಲಾ ಮಕ್ಕಳಿಗೆ ಸಮೂಹ ಸನ್ನಿ !
Team Udayavani, Jul 31, 2023, 6:58 AM IST
ಉತ್ತರಾಖಂಡ: ಇತ್ತೀಚೆಗಷ್ಟೇ ಉತ್ತರಾಖಂಡದಲ್ಲಾದ ಭೀಕರ ಪ್ರವಾಹಗಳು ಮನೆ-ಆಸ್ತಿಪಾಸ್ತಿಗಳನ್ನು ನಾಶ ಮಾಡಿದ್ದಷ್ಟೇ ಅಲ್ಲದೇ, ಮಕ್ಕಳ ಮನಸ್ಸಿನ ಮೇಲೂ ತೀವ್ರತರದ ಪರಿಣಾಮ ಬೀರಿದ್ದು, ಉತ್ತರಕಾಶಿಯ ಶಾಲೆಯೊಂದರಲ್ಲಿ ಮಕ್ಕಳು ಸಮೂಹ ಸನ್ನಿಗೆ ಒಳಗಾಗಿದ್ದಾರೆ. ಇದ್ದಕ್ಕಿದ್ದಂತೆ ತರಗತಿಯಲ್ಲಿ ಮಕ್ಕಳು ಕಿರುಚುತ್ತಾ, ಓಡುತ್ತಿರುವ ಪ್ರಕರಣ ವರದಿಯಾಗಿದ್ದು, ಈ ವಿಚಿತ್ರ ನಡವಳಿ ಎಲ್ಲರಲ್ಲೂ ಆತಂಕ ಮೂಡಿಸಿದೆ.
ವರದಿಗಳ ಪ್ರಕಾರ, ಧೌತ್ರಿ ನಗರದಲ್ಲಿ ಹೊಸದಾಗಿ ಸರ್ಕಾರಿ ಶಾಲೆಯ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಶಾಲೆಗೆ ಆಗಮಿಸುತ್ತಿದ್ದಂತೆಯೇ 10ರಿಂದ 12 ಹೆಣ್ಣು ಮಕ್ಕಳು ವಿಚಿತ್ರವಾಗಿ ಕಿರುಚುತ್ತಾ, ಅಳುತ್ತಾ ಓಡಾಡಿದ್ದಾರೆ. ಊರಿನ ಜನ ಇದು ಗ್ರಾಮ ದೇವತೆಗಳ ಮುನಿಸು ಎಂದು ಭಾವಿಸಿದ್ದರೆ, ಮತ್ತಷ್ಟು ಮಂದಿ ಇದು ಮಾಟ-ಮಂತ್ರ ಅಥವಾ ದುಷ್ಟ ಶಕ್ತಿಗಳ ಪರಿಣಾಮವಿರಬಹುದು ಎಂದು ಶಂಕಿಸಿದ್ದಾರೆ.
ಆದರೆ, ವೈದ್ಯರು ಇದನ್ನು ಸಮೂಹ ಸನ್ನಿ, ಮಾನಸಿಕ ಒತ್ತಡದಿಂದಾಗಿರುವ ಪರಿಣಾಮ ಎಂದಿದ್ದಾರೆ. ಪ್ರವಾಹದ ಸಂದರ್ಭದಲ್ಲಾದ ದುರಂತಗಳನ್ನು ನೋಡಿರುವುದರಿಂದ ಮಕ್ಕಳಿಗೆ ಅದೇ ಮನಸ್ಸಿನಲ್ಲಿ ಅಚ್ಚಾಗಿದೆ. ಶಾಲಾ ಕಟ್ಟಡಗಳನ್ನು ಪ್ರವೇಶಿಸಿದಾಗ ವಾತವರಣ ಹೊಸದಾದ ಹಿನ್ನೆಲೆಯಲ್ಲಿ ಅದೇ ದುಸ್ವಪ್ನಗಳಿಂದ ಹೆದರಿ ಈ ರೀತಿ ವರ್ತಿಸುತ್ತಿದ್ದಾರೆಂದು ಹೇಳಿದ್ದಾರೆ. ಇದಕ್ಕೂ ಮುನ್ನ ಚಂಪಾವತ್ ಜಿಲ್ಲೆಯಲ್ಲೂ ಇದೇ ರೀತಿಯ ಘಟನೆ ವರದಿಯಾಗಿ, ಆ ವಿಡಿಯೊ ವೈರಲ್ ಕೂಡ ಆಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
MUST WATCH
ಹೊಸ ಸೇರ್ಪಡೆ
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ